ಡಿ.10 ರೊಳಗಾಗಿ ಅವಳಿ ತಾಲೂಕಿನ ಪಡಿತರ ಮಾಹಿತಿ ಸಂಗ್ರಹಿಸಿ – ಇಲ್ಲದಿದ್ದರೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಹುನಗುಂದ ಡಿಸೆಂಬರ್.8

ಹುನಗುಂದ ಮತ್ತು ಇಲಕಲ್ಲ ಅವಳಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಹುತೇಕ ನ್ಯಾಯ ಬೆಲೆ ಅಂಗಡಿಗಳ ನಿರ್ಲಕ್ಷದಿಂದ ೫.ಕೆಜಿ ಅನ್ನಭಾಗ್ಯದ ಹಣ ಕೆಲವಷ್ಟು ಫಲಾನುಭವಿಗಳಿಗೆ ಸಿಗುತ್ತಿಲ್ಲ.ನ್ಯಾಯ ಬೆಲೆ ಅಂಗಡಿಗಳ ಮಾಲೀಕರು ಅದಕ್ಕೆ ಸಂಬಂಧಿಸಿದ ಪಡಿತರಿಂದ ದಾಖಲಾತಿಯನ್ನು ಪಡೆಯಬೇಕು ಇದರಲ್ಲಿ ನಿರ್ಲಕ್ಷ್ಯ ವಹಿಸಿದರೇ ಸೂಕ್ತ ಕ್ರಮ ಕೈಕೊಳ್ಳಲಾಗುವುದು ಎಂದು ಜಿಲ್ಲಾ ಜಂಟಿ ನಿರ್ದೇಶಕ ಚನಬಸಪ್ಪ ಕೊಡ್ಲಿ ಎಚ್ಚರಿಸಿದರು. ಬುಧವಾರ ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ನಡೆದ ತಾಲೂಕ ಮಟ್ಟದ ನ್ಯಾಯ ಬೆಲೆ ಅಂಗಡಿಗಳ ಕಾರ್ಯ ನಿರ್ವಹಣೆ ಮತ್ತು ದಾಖಲೆ ಕ್ರೋಢೀಕರಣ ಕುರಿತು ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು ಈ ಅವಳಿ ತಾಲೂಕಗಳಲ್ಲಿ ಪಿಕೆಪಿಎಸ್, ಟಿಎಪಿಸಿಎಂಎಸ್ ಮತ್ತು ಸಂಘ ಸಂಸ್ಥೆಗಳು ಸೇರಿ ಒಟ್ಟು ೧೨೪ ನ್ಯಾಯ ಬೆಲೆ ಅಂಗಡಿಗಳು ಕಾರ್ಯ ನಿರ್ವಹಿಸುತ್ತಿವೆ.ಸಧ್ಯ ಸರ್ಕಾರ ಆದೇಶಿಸಿದಂತೆ ಒಬ್ಬ ಪಡಿತರನಿಗೆ ೫.ಕೆಜಿ ಅಕ್ಕಿ ಕೊಡುವ ಜೊತೆಗೆ ೧೭೦ ರೂ. ಅವರ ಖಾತೆಗೆ ಜಮಾ ಮಾಡಲು ಬೇಕಾಗುವ ದಾಖಲೆಗಳನ್ನು ಪಡೆಯುವಲ್ಲಿ ಮತ್ತು ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆಗಳು ನಿಷ್ಕಾಳಜಿ ವಹಿಸುತ್ತಿವೆ.ಇದರಿಂದ ಪಡಿತರರಿಗೆ ಅನ್ಯಾಯವಾಗುತ್ತದೆ.ತಮ್ಮಲ್ಲಿರುವ ಎಲ್ಲಾ ಪಡಿತರುಗಳ ಇ ಕೆವೈಸಿ ಮತ್ತು ಆಧಾರ ಕಾರ್ಡಿನ ದಾಖಲೆಯಂತೆ ರೇಷನ್ ಕಾರ್ಡ ಮತ್ತು ಬ್ಯಾಂಕ್ ಪಾಸ್ ಬುಕ್ ಇರಬೇಕು.ಅದರಲ್ಲಿ ವ್ಯತ್ಯಾಸವಾದರೆ ಪಡಿತರರ ಅನ್ನಭಾಗ್ಯದ ಹಣ ಜಮಾ ಆಗುವುದಿಲ್ಲ. ಅವಳಿ ತಾಲೂಕಿನಲ್ಲಿ ಇನ್ನು ಶೇ.೨೫ರಷ್ಟು ಅನ್ನಭಾಗ್ಯ ಹಣ ತಲುಪಬೇಕಾಗಿದೆ.ಹುನಗುಂದ ತಾಲೂಕಿನಲ್ಲಿ ಅಂದಾಜು ೨೭ ಸಾವಿರ ಮತ್ತು ಇಲಕಲ್ಲ ತಾಲೂಕಿನಲ್ಲಿ ೩೭ ಸಾವಿರ ಕುಟುಂಬಗಳ ಪೈಕಿ ಹುನಗುಂದ ತಾಲೂಕಿನಲ್ಲಿ ೫೦ ಹಾಗೂ ಇಳಕಲ್ಲ ತಾಲೂಕಿನ ೭೫ ಸಾವಿರ ಜನ ಪಡಿತರರಿದ್ದು ಪಡಿತರ ಮನೆಗಳಿಗೆ ತೆರಳಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದು ಇದೆ ಡಿ.೧೦ರ ಒಳಗೆ ಪೂರ್ಣಗೊಳಿಸಿ ಬರುವ ಜನೆವರಿ ೨೪ರ ತಿಂಗಳಲ್ಲಿ ಅವಳಿ ತಾಲೂಕಿನ ಎಲ್ಲ ಪಡಿತರು ಈ ಹಣದ ಸೌಲಭ್ಯ ಪಡೆಯುವಂತಾಗ ಬೇಕು ಎಂದು ಶಿರಸ್ತೇದಾರ ಸಂಗಮೇಶ ಬಡ್ಡಿ ಅವರಿಗೆ ಖಡಕ್ ಸೂಚನೆ ನೀಡಿದರು.ತಹಶೀಲ್ದಾರ ನಿಂಗಪ್ಪ ಬಿರಾದಾರ, ತಾಲೂಕ ಆಹಾರ ನಿರೀಕ್ಷಕರಾದ ಶಿವಾನಂದ ಹೊರಗಿನಮಠ,ಮಹಾಂತೇಶ ಗೌಡರ ಇದ್ದರು.ಅವಳಿ ತಾಲೂಕಿನ ಎಲ್ಲ ನ್ಯಾಯ ಬೆಲೆ ಅಂಗಡಿ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button