ಕೆ.ಎಸ್.ಲತಾ ಕುಮಾರಿ ಮೇಡಂ ಅವ್ರ ವರ್ಗಾವಣೆ ಕ್ರಮವನ್ನು ಖಂಡಿಸಿ — ಮನವಿ ಪತ್ರವನ್ನು ಸಲ್ಲಿಸಿದರು.
ಹೊಸಪೇಟೆ ಜುಲೈ.20
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ MRW, VRW ಮತ್ತು URW ಪುನರ್ವಸತಿ ಕಾರ್ಯಕರ್ತರ ಜಿಲ್ಲಾ ಒಕ್ಕೂಟದಿಂದ ಅಂಗವಿಕಲರ ಕಲ್ಯಾಣ ಇಲಾಖೆಯ ಮಾನ್ಯ ನಿರ್ದೇಶಕರಾದ ಶ್ರೀಮತಿ ಕೆ.ಎಸ್.ಲತಾ ಕುಮಾರಿ ಮೇಡಂ ಅವ್ರ ವರ್ಗಾವಣೆ ಕ್ರಮವನ್ನು ಖಂಡಿಸಿ,

ವಿಜಯನಗರ ಜಿಲ್ಲೆಯಲ್ಲಿ ಹೊಸದಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ಪ್ರಾರಂಭ, ಡಿ ಡಿ ಓ ಕೋಡ್ ಗೆ ಅನುಮೋದನೆ, ಖಾಯಂ ಜಿಲ್ಲಾ ಮಟ್ಟದ ಅಧಿಕಾರಿಗಳ ನೇಮಕಕ್ಕೆ ಒತ್ತಾಯಿಸಿ ಹಾಗೂ ರಾಜ್ಯದ ಪುನರ್ವಸತಿ ಕಾರ್ಯಕರ್ತರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮಾನ್ಯ ಶ್ರೀ ಕಾರ್ತಿಕ್ ತಹಶೀಲ್ದಾರರು, ಜಿಲ್ಲಾಧಿಕಾರಿಗಳ ಕಛೇರಿ ಇವ್ರಿಗೆ ಮಾನ್ಯ ಜಿಲ್ಲಾಧಿಕಾರಿಗಳ ದ್ವಾರ ಮಾನ್ಯ ಮುಖ್ಯಮಂತ್ರಿ ಗಳಿಗೆ ಮತ್ತು ಇಲಾಖೆ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು, ಶ್ರೀ ಸಾಯಿ ಲೀಲಾ ರಂಗ ಮಂದಿರದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಘೋಷಣೆಗಳನ್ನು ಕೂಗುತ್ತ ಜಿಲ್ಲಾಧಿಕಾರಿಗಳ ಕಛೇರಿ ವರೆಗೂ ಸಾಗಿತು,

ಈ ಒಂದು ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿಗಳು ಜೆ.ರವಿಕುಮಾರ್ ನಾಯಕ, ರಾಜ್ಯ ನಿರ್ದೇಶಕರು ಅರ್.ಧನರಾಜ್, ಜಿಲ್ಲಾ ಸಂಚಾಲಕರು ಬಿ.ಮಂಜುನಾಥ, ಕೂಡ್ಲಿಗಿ ಎಂ.ಆರ್.ಡಬ್ಲ್ಯೂ. ಬಿ. ಹೆಚ್. ಚೌಡೇಶ್. ಕೊಟ್ಟೂರು ಎಂ. ಆರ್.ಡಬ್ಲ್ಯೂ. ಉಪಸ್ಥಿತರಿದ್ದರು, ಈ ಒಂದು ಸಂದರ್ಭದಲ್ಲಿ ಜಿಲ್ಲೆಯ 06 ತಾಲೂಕಿನ VRW ಮತ್ತು URW ಕಾರ್ಯಕರ್ತರು ಹಾಜರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು