ಆರ್.ಜಿ ಕ್ಯಾಂಪ್ ನ ರೈತರಿಂದ ಮಾನ್ವಿ ಕೆ.ಇ.ಬಿ – ಇಲಾಖೆಗೆ ಮುತ್ತಿಗೆ.
ಮಾನ್ವಿ ನ.12

ರೈತರು ಕಷ್ಟದ ನಡುವೆ ಜೀವನ ಮಾಡುವುದು ಹೊಂದಾದರೆ ನಮ್ಮ ಬೆಳೆಗಳನ್ನು ಉಳಿಸಿ ಕೊಳ್ಳುವುದಕ್ಕಾದರು ಟ್ರಾನ್ಸ್ ಫಾರ್ಮರ್ ಕೊಡಿ ಎಂದು ರೈತರು ಮಾನ್ವಿ ಕೆ.ಇ.ಬಿ ಅಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಾಲುವೆಗೆ ಸರಿಯಾದ ನೀರು ಬಾರದ ಕಾರಣ ಬೋರ್ ಮೂಲಕವಾದರು ಬೆಳೆಗಳಿಗೆ ನೀರು ಹಾಯಿಸೋಣವೆಂದರೆ ಟ್ರಾನ್ಸ್ ಫಾರ್ಮರ್ ಸುಟ್ಟು ಒಂದು ತಿಂಗಳಾಗಿದೆ.
ಆದರೆ ನಮ್ಮ ಮನವಿಗೆ ಸ್ಪಂಧಿಸಬೇಕಾದ ಕೆ.ಇ.ಬಿ ಎ.ಇ.ಇ ವೈದ್ಯನಾಥ್ ಕಣ್ಣಿದ್ದು ಕುರುಡ ರಾಗಿದ್ದಾರೆಂದು ರೈತರು ಕಿಡಿಕಾರಿದರು.
ರೈತರ ಕಷ್ಟ ಕೇಳೋರು ಯಾರು ಇಲ್ಲದ ಕಾರಣ ನಾವು ವಿಷ ಕುಡಿದು ಸಾಯಬೇಕಾಗಿದೆ.
ನಮ್ಮ ಪರಿಸ್ಥಿತಿಯನ್ನು ಅರಿತು ಶಾಸಕರು ಹಾಗೂ ಸಚಿವರು ಟ್ರಾನ್ಸ್ ಫಾರ್ಮರ್ ಕೊಡಿಸುವ ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಲಿ ಎಂದು ರೈತರು ಮನವಿ ಮಾಡಿ ಕೊಂಡಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ