ಏ.28 ರಂದು ಹೊಸಪೇಟೆಗೆ ಬಿಜೆಪಿ ಪರ ಮತ ಪ್ರಚಾರಕ್ಕೆ ಮೋದಿ ಆಗಮನ – ಕೆ. ನಾಗರಾಜ್ ಕಾರ್ಯಕರ್ತರಿಗೆ ಕರೆ.
ಕೂಡ್ಲಿಗಿ ಏಪ್ರಿಲ್.27

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಬಿಜೆಪಿಯ ಮಂಡಲ ಅಧ್ಯಕ್ಷರಾದ ಕೆ ನಾಗರಾಜ್ ಅವರು 2024 ರ ಚುನಾವಣೆಯ ನಿಮಿತ್ತವಾಗಿ ಅಖಂಡ ಬಳ್ಳಾರಿ ಜಿಲ್ಲೆಯ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಬಿ. ಶ್ರೀರಾಮುಲು ಇವರ ಪರವಾಗಿ ಮತ ಪ್ರಚಾರಕ್ಕೆ ದಿನಾಂಕ 28-4-2024 ಭಾನುವಾರ ರಂದು ಹೊಸಪೇಟೆಯ ಪುನೀತ್ ರಾಜಕುಮಾರ್ ಕ್ರೀಡಾಂಗಣದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಬಿಜೆಪಿಯ ಎಲ್ಲಾ ಕಾರ್ಯಕರ್ತರು ಮೋದಿಜಿ ಅವರ ಅಭಿಮಾನಿಗಳು ಬಿ ಶ್ರೀರಾಮುಲು ಅವರ ಅಭಿಮಾನಿಗಳು ಹಾಗೂ ಬಿಜೆಪಿಯ ಮುಖಂಡರುಗಳು ತಪ್ಪದೇ ಈ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಬಿಜೆಪಿಯ ಮಂಡಲ ಅಧ್ಯಕ್ಷರು ಕೂಡ್ಲಿಗಿ ಇವರು ಮನವಿ ಮಾಡಿ ಕೊಂಡಿರುತ್ತಾರೆ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ.