ನಿಧನ ವಾರ್ತೆ : ಗುಳದಾಳ ಲಕ್ಕಮ್ಮ ನಿಧನ.
ಕೂಡ್ಲಿಗಿ ಆಗಷ್ಟ.5

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ14ನೇ ವಾರ್ಡ ವಾಸಿಯಾದ ಡಾ. ಬಿ. ಆರ್. ಅಂಬೇಡ್ಕರ್ ನಗರದ ಗುಳದಾಳ ಲಕ್ಕಮ್ಮ ರವರು (80) ಇವರು ಈ ದಿನ ಮಧ್ಯಾಹ್ನ 2.30 ರ ಸಮಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಕಾಲೋನಿಯ ತಮ್ಮ ನಿವಾಸದಲ್ಲಿ ನಿಧನ ಹೊಂದಿರುತ್ತಾರೆ. ಇವರಿಗೆ 2 ಜನ ಗಂಡು 2 ಜನ ಹೆಣ್ಣು ಮಕ್ಕಳಿದ್ದು ಇವರ ಹಿರಿಯ ಮಗನಾದ ಮಹೇಶ ಹಮಾಲಿ ಕಾರ್ಮಿಕ ಇವರ ತಾಯಿಯಾದ ಗುಳದಾಳ ಲಕ್ಕಮ್ಮ ನಿಧನ ಹೊಂದಿದ್ದು ಇವರನ್ನು ಸಮುದಾಯದ ಹಿರಿಯರು ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿದಂತೆ, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. *ಅಂತ್ಯಕ್ರಿಯೆ:-* ಮೃತರಾದ ಗುಳದಳ ಲಕ್ಕಮ್ಮ ಇವರ ಅಂತ್ಯಕ್ರಿಯೆ ನಾಳೆ ಆಗಸ್ಟ್ 6 ಭಾನುವಾರ ರಂದು ಬೆಳಿಗ್ಗೆ 10:30ಕ್ಕೆ ಗಂಟೆಗೆ, ಪಟ್ಟಣದ ಅಂಚಿನಲ್ಲಿರುವ ಶಾಂತಿ ವನದಲ್ಲಿ ಜರುಗಲಿದೆ. *ಸಂತಾಪ:-* ಪಟ್ಟಣ ಸೇರಿದಂತೆ ತಾಲೂಕಿನ ಸಮಸ್ತ ಸಮಾಜದವರು, ಹಾಗೂ ವಿವಿಧ ಸಮಾಜದವರು ಮುಖಂಡರಗಳು ಹಾಗೂ ಗುಳದಾಳ ವಂಶದವರು ಸೇರಿದಂತೆ ವಿವಿಧ ಜನ ಪ್ರತಿನಿಧಿಗಳು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರೈತರು, ಕಾರ್ಮಿಕರು, ವಿವಿಧ ಪಕ್ಷಗಳ ಮುಖಂಡರು, ನಾಗರಿಕರು ಹಾಗೂ ಗಣ್ಯರು, ನಿಧನರಾದ ಗುಳದಾಳ ಲಕ್ಕಮ್ಮ ರವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವರದಿಗಾರರು: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ