ಬನ್ನಿ ಮುಡಿದು. ಬಂಗಾರದಂಗ ಇರೋಣ…..

ದಸರಾ ಹಬ್ಬ ಭಾರತದ ಸಾಂಪ್ರದಾಯಿಕ ಹಬ್ಬಗಳಲ್ಲಿ ಅಗ್ರಸ್ಥಾನ . ದೇಶದಾದ್ಯಂತ ಸರ್ವ ಧರ್ಮದ ಜನರು ನಂಬಿಕೆ , ಭಕ್ತಿ – ಭಾವ ವಿಜೃಂಭಣೆಯಿಂದ ಆಚರಿಸುತ್ತಾರೆ . ದೇಶದಲ್ಲಿ ಆಚರಿಸಲ್ಪಡುವ ಹಬ್ಬ – ಹರಿದಿನಗಳು , ಜಾತ್ರೆ , ಉತ್ಸವಗಳ ಹಿಂದೆ ಐತಿಹಾಸಿಕ ಮತ್ತು ಅರ್ಥ ಪೂರ್ಣ ಹಿನ್ನೆಲೆ ಇರುತ್ತದೆ . ಅದರಲ್ಲೂ ನಾಡಹಬ್ಬ ದಸರಾವನ್ನು ಉತ್ತರ ಕರ್ನಾಟಕದ ಬಾಗಲಕೋಟ , ಕೊಪ್ಪಳ , ಕಲಬುರ್ಗಿ ಸಹಿತ ಇನ್ನಿತರೆ ಜಿಲ್ಲೆಗಳಲ್ಲಿ ಸೌಹಾರ್ದ ಮತ್ತು ಅರ್ಥ ಪೂರ್ಣವಾಗಿ ಆಚರಿಸುತ್ತಾರೆ . ಜಾತಿ , ಮತ , ದ್ವೇಷಗಳನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ಆಚರಿಸುತ್ತಾರೆ . ದೇವಸ್ಥಾನಗಳಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ , ಒಂಬತ್ತು ದಿನಗಳ ಕಾಲವೂ ದೇವಿ ಪುರಾಣವನ್ನು ಪಾರಯಣ ಮಾಡಲಾಗುತದೆ . ದಸರಾ ಹಬ್ಬವು ವಿಶೇಷವಾಗಿ ಹೆಂಗಸರಿಗೆ ಭಕ್ತಿ ಭಾವದ ಹಬ್ಬ .ಹಬ್ಬದ ಒಂಬತ್ತು ದಿನಗಳ ಕಾಲ ಹೆಂಗಸರು ಊರಿನ ಬನ್ನಿ ಮರದ ಗಿಡಕ್ಕೆ ಹರಕೆ ಹೊತ್ತು ಪೂಜೆ ಮಾಡುತ್ತಾರೆ . ಗೋಧೂಳಿ ಕಾಲದಲ್ಲಿ ಎದ್ದು ಇಡೀ ಮನೆಯನ್ನು ಸ್ವಚ್ಛಗೊಳಿಸಿ , ಮಡಿಯಾಗಿ ಊರಿನ ಬನ್ನಿ ಮಹಾಂಕಾಳಿ ದೇವಿಗೆ ಪೂಜೆ ಮಾಡುವ ಮೂಲಕ ಇಷ್ಟಾರ್ಥ ಸಿದ್ದಿಗೆ ಹರಕೆ ಕಟ್ಟುತ್ತಾರೆ . ಈ ದಿನಗಳಲ್ಲಿ ಪ್ರತೀ ಮನೆಯಲ್ಲಿಯೂ ದೇವಿಯದ್ದೆ ಆರಾಧನೆ , ಒಂಭತ್ತು ದಿನಗಳಲ್ಲಿಯೂ ದೇವಿ ಒಂದೊಂದು ಅವತಾರ ತಾಳುವುದು ಈ ಹಬ್ಬದ ಮತ್ತೊಂದು ವಿಶೇಷ ವಿಜಯ ದಶಮಿ ಈ ದಿನ ಶಮಿವೃಕಕ್ಕೆ ಪೂಜೆಯನ್ನು ಸಲ್ಲಿಸಿ ಬನ್ನಿಯನ್ನು ವಿನಿಯೋಗ ಮಾಡುವುದು ಉತ್ತರ ಕರ್ನಾಟಕದ ಆಚರಣೆಯ ಪದ್ಧತಿ , ಬನ್ನಿಯನ್ನು ವಿನಿಯೋಗ ಮಾಡುವಾಗ ‘ ನಾವು ನೀವು ಬನ್ನಿ ತೊಗೊಂಡು ಬಂಗಾರದಂತೆ ಇರೋಣ ‘ , ಇದು ಉತ್ತರ ಕರ್ನಾಟಕ ಭಾಗದ ಜನರ ಬಾಯಲ್ಲಿ ಬರುವ ಮಾತು ನಾವೆಲ್ಲಾ ಭಕ್ತಿ ಶ್ರದ್ದೆಯಿಂದ ಶ್ರೀ ದುರ್ಗಾದೇವಿಯ ಉಪಾಸನೆಯನ್ನು ಮಾಡಿ ಶ್ರೀ ದೇವಿಯ ಕೃಪೆಯನ್ನು ಪಡೆಯೋಣ.

*****

ಲೇಖನ:ಭೂಮಿಕಾ ದಾಸರಡ್ಡಿ

ಬಿದರಿ,

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button