ಬುದ್ಧ ದಮ್ಮ ಅಭಿವೃದ್ಧಿಗೆ “ಸನ್ನತಿ ಪಂಚಶೀಲ ಪಾದಯಾತ್ರೆ”.

ಮರಿಯಮ್ಮನಹಳ್ಳಿ ಡಿ.22

ದಮ್ಮದಲ್ಲಿ ಜಾತಿವ್ಯವಸ್ಥೆ ಇಲ್ಲದಿರುವುದರಿಂದ ಎಲ್ಲರೂ ಇದನ್ನು ಒಪ್ಪಿ ಕೊಳ್ಳುತ್ತಿದ್ದಾರೆ. ಇಲ್ಲಿ ಮೇಲು ಕೀಳಿನ ಭಾವನೆಗಳಿಲ್ಲ. ಹಲವು ನದಿಗಳ ನೀರು ಒಂದೇ ಸಮುದ್ರದ ಸಾಗರಕ್ಕೆ ಸೇರಿ ಹೇಗೆ ಒಂದಾಗುತ್ತವೆ ಹಾಗೆ ಯಾರೆಲ್ಲ ದಮ್ಮ ಅನ್ನೋ ಸತ್ಯವನ್ನು ಒಪ್ಪಿ ಕೊಂಡು ಸೇರಿ ಕೊಳ್ಳುತ್ತಾರೋ ಅವರೆಲ್ಲರೂ ಈ ಎಲ್ಲಾ ನದಿಗಳು ಒಂದು ಕಡೆ ಸೇರಿ ಒಂದಾದಂತೆ. ಯಾರೆಲ್ಲ ಜಾತಿ, ಪಂಗಡದವರು ದಮ್ಮದಲ್ಲಿ ಸೇರುತ್ತರೋ ಅವರೆಲ್ಲ ಜಾತಿ, ಪಂಗಡಗಳಿಂದ ಮುಕ್ತ ರಾಗುತ್ತಾರೆ. ನಮ್ಮಲ್ಲಿ ಎಲ್ಲಾ ಜಾತಿ ಧರ್ಮದವರು ಬಂತೇಜಿ ಗಳಾಗಿದ್ದಾರೆ. ಪಾದಯಾತ್ರೆಯ ಪ್ರಮುಖ ಉದ್ದೇಶ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನ “ಜಾತಿ ಮುಕ್ತ ಪ್ರಬುದ್ಧ ಭಾರತ” ಆ ಒಂದು ಉದ್ದೇಶಕ್ಕಾಗಿ ಈ ಪಾದಯಾತ್ರೆ ಆರಂಭಿಸಿದ್ದೇವೆ. ಎಂದು ದಮ್ಮದಲ್ಲಿನ ಹಲವಾರು ವಿಷಯಗಳ ಕುರಿತು ಪೂಜ್ಯ ಬಂತೆ ಭೋಧಿ ಧತ್ತ ಧೇರು ಉಪಾಸನೆ ಮಾಡಿದರು. ಪಾದಯಾತ್ರೆ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಮರಿಯಮ್ಮನಹಳ್ಳಿಗೆ ತಲುಪಿತು. ಪಟ್ಟಣದ ಬುದ್ಧ ಅಭಿಮಾನಿಗಳು ಪಂಚಾಯಿತಿ ಮುಂಬಾಗದಿಂದ ಸ್ವಾಗತಿಸಿ 2500 ವರ್ಷಗಳ ಹಿಂದಿನ ಭಗವಾನ್ ಬುದ್ಧರ ಅಸ್ತಿ (ಮೂಳೆ) ಯನ್ನು ತಲೆಯ ಮೇಲೆ ಹೊತ್ತು ತಮಟೆ ವಾದ್ಯಗಳೊಂದಿಗೆ ವಿಜೃಂಭಣೆ ಯಿಂದ ಮೆರವಣಿಗೆ ಮೂಲಕ ಪಟ್ಟಣದ ಒಂದನೇ ವಾರ್ಡ್ ನ ಅಂಬೇಡ್ಕರ್ ಕಾಲೋನಿಗೆ ಬರ ಮಾಡಿ ಕೊಂಡರು.ವಿಶ್ವ ಶಾಂತಿಗಾಗಿ ಹಾಗೂ ಸನ್ನತಿ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿ ಹಾಗೂ ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಒತ್ತಾಯಿಸಿ, ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತಿಯಿಂದ ಬೆಂಗಳೂರಿನ ವಿಧಾನ ಸೌಧದ ವರೆಗೆ “ಸನ್ನತಿ ಪಂಚಶೀಲ ಪಾದಯಾತ್ರೆ” ಯನ್ನು ನಾಡಿನ ಹಿರಿಯ ಬಿಕ್ಕು ಹಾಗೂ ಬೆಕ್ಕುಣಿ ಸಂಘದ ನೇತೃತ್ವದಲ್ಲಿ, ಕರ್ನಾಟಕ ರಾಜ್ಯದ ಎಲ್ಲಾ ಬೌದ್ಧ ಸಂಘ ಸಂಸ್ಥೆಗಳು ಸಮಸ್ತ ಕರ್ನಾಟಕ ದಲಿತಪರ ಸಂಘಟನೆಗಳು, ಧರ್ಮ ಉಪಾಸಕ / ಉಪಾಸಿಕಾ ಬಂಧುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 15.11.2024 ರಿಂದ ಕಲಬುರ್ಗಿ ಜಿಲ್ಲೆಯಿಂದ ಪ್ರಾರಂಭಿಸಿ 24.01.2025 ಕ್ಕೆ ವಿಧಾನ ಸೌಧಕ್ಕೆ ತಲುಪಿ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ವಾರ್ಡಿನಲ್ಲಿ ನೆರೆದಿದ್ದವರಿಗೆ ಬುದ್ಧ ದಮ್ಮದ ಪಂಚಶೀಲ ತತ್ವಗಳನ್ನು ಪಾಲಿ ಭಾಷೆಯಲ್ಲಿ ಭೋದಿಸಿ ಅವುಗಳನ್ನು ಕನ್ನಡದಲ್ಲಿ ವಿಮರ್ಶಿಸಿದರು ನಂತರ ಪ್ರವಚನ ಮಾಡಿ ದುದುಃಖಕ್ಕೆ ಮತ್ತು ಸಮಸ್ಯೆಗಳಿಗೆ ಪರಿಹಾರ ಹುಡುಕಿ ಕೊಟ್ಟಂತಹ ಮಹಾ ಮೇದಾವಿ ಬುದ್ದರು. ಗೌತಮರು ಅವರ ಜೀವಿತಾವದಿಯಲ್ಲಿ 34 ವರ್ಷಗಳ ಕಾಲ ಭಾರತ ದೇಶ ಅಲ್ಲದೆ ಸುತ್ತ ಮುತ್ತಲಿನ ದೇಶಗಳಿಗೆ ಬರಿಗಾಲದಲ್ಲಿ ನಡೆದು 84 ಸಾವಿರ ಉಪದೇಶಗಳನ್ನು ಮಾಡಿದ್ದಾರೆ.140 ಗ್ರಂಥಗಳನ್ನು ರಸಿದ್ದಾರೆ. ಅವರ ಅಸ್ತಿಯೊಂದಿಗೆ ಅದರಲ್ಲಿ ನಾವು 7 ಗ್ರಂಥಗಳನ್ನು ತಂದಿದ್ದೇವೆ, ಅವರು ಬಹುತೇಕ ಕಷ್ಟಗಳಿಂದ ಬಳಲುತ್ತಿರುವವರನ್ನು, ಶೋಷಣೆ ಗೊಳಗಾದವರನ್ನ ಗುರುತಿಸಿ ಸಮಸ್ಯೆಗಳಿಂದ ಹೊರಗಡೆ ಬರಲು ಉಪದೇಶಿಸುತ್ತಿದ್ದರು. ಅವರು 74 ವಿಶೇಷ ಜ್ಞಾನ ಹೊಂದಿದವರಾಗಿದ್ದರು, ಅದರಲ್ಲಿ ಮಹಾ ಕರುಣಾಸಮಪತ್ತಿ ಎನ್ನುವಂತಹ ವಿಶೇಷ ಶಕ್ತಿಯನ್ನು ಹೊಂದಿದ್ದರು. ಮಹಾಕರುಣೆ ಎನ್ನುವ ದಿವ್ಯ ಜ್ಞಾನದ ಮನಸ್ಸಿನ ಮೂಲಕ ಈ ಜಗತ್ತಿನ ಎಲ್ಲಾ ಜೀವರಾಶಿಗಳನ್ನು ಮನಸ್ಸಿನ ಮೂಲಕ ನೋಡುತ್ತಿದ್ದರು ಅದರಲ್ಲಿನ ಸಮಸ್ಯೆ ಇರುವವರ ಬಳಿಗೆ ಹೋಗಿ ಉಪದೇಶ ನೀಡುತ್ತಿದ್ದರು ಎಂದು ಬುದ್ಧರ ವಿಶೇಷ ಗುಣಗಳ ಬಗ್ಗೆ ತಿಳಿಸಿದರು.

ಪಾದಯಾತ್ರೆ ಬೇಡಿಕೆಗಳು:-1.

ಸನ್ನತ್ತಿ ಅಭಿವೃದ್ಧಿ ಪ್ರಾಧಿಕಾರದ ಯೋಜನೆಯನ್ನು ಆಂಧ್ರದ ಬುದ್ಧವನ ಮಾದರಿಯಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸಿ ಜಾಗತಿಕ ಮಟ್ಟದ ಸೇವೆನ್ ಸ್ಟಾರ್ ಪ್ರವಾಸಿ ತಾಣವನ್ನಾಗಿ ಮಾಡಲು ಕನಿಷ್ಠ 500 ಕೋಟಿ ಅನುದಾನವನ್ನು ನಿಗದಿ ಪಡಿಸಬೇಕು. ಮತ್ತು ಇದಕ್ಕೆ ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸನ್ನತಿ ಅಭಿವೃದ್ಧಿ ಮಂಡಳಿಯನ್ನು ಪುನಶ್ಚೇತನ ಗೋಳಿಸಬೇಕು.

2. ಪ್ರತಿ ವರ್ಷ ಫೆಬ್ರುವರಿ:-

12 ರಂದು ಸಾಮ್ರಾಟ್ ಅಶೋಕ ಸನ್ನತಿ ಉತ್ಸವವನ್ನು ಸರಕಾರದ ವತಿಯಿಂದ ಆಚರಣೆ ಮಾಡಬೇಕು.3. ಕರ್ನಾಟಕದ ಬೌದ್ಧ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಈ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯದಲ್ಲಿ ಬೌದ್ಧ ಅಭಿವೃದ್ಧಿ ನಿಗಮ ಪ್ರಾರಂಭಿಸಬೇಕು. ಮತ್ತು ಅದಕ್ಕಾಗಿಯೇ ಕನಿಷ್ಠ 1000 ಕೋಟಿ ಅನುದಾನವನ್ನು ಮೀಸಲಿಡಬೇಕು.

4. ಭಗವಾನ್ ಬುದ್ಧರ ಜಯಂತಿ ಬುದ್ಧ ಪೂರ್ಣಿಮಾ ದಿನ ದಂದು ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕು.

5. ರಾಜ್ಯದ ಪ್ರತಿ ಜಿಲ್ಲಾ ಮತ್ತು ತಾಲೂಕ ಕೇಂದ್ರಗಳಲ್ಲಿ ಬುದ್ದ ವಿಹಾರ ನಿರ್ಮಾಣ ಮಾಡಲು ಕನಿಷ್ಠ 5 ರಿಂದ 10 ಎಕರೆ ಜಮೀನು ಕಾಯ್ದಿರಿಸಬೇಕು. ಆಸಕ್ತ ಬೌದ್ಧ ಸಂಘ ಸಂಸ್ಥೆಗಳಿಗೆ ಭೂ ಮಂಜೂರಾತಿ ನೀಡಬೇಕು. ಮತ್ತು ಅಗತ್ಯವಾದ ಕಟ್ಟಡ ಇತರೆ ಅಭಿವೃದ್ಧಿ ಸೌಲಭ್ಯಕ್ಕಾಗಿ ಅನುದಾನವನ್ನು ಒದಗಿಸಬೇಕು.

6. ಕರ್ನಾಟಕ ರಾಜ್ಯದಲ್ಲಿ ದೊರೆತಿರುವ ಸಾಮ್ರಾಟ್ ಅಶೋಕರ ಎಲ್ಲ ಸ್ಥಳಗಳ ಶಿಲಾ ಶಾಸನಗಳನ್ನು ಸಂರಕ್ಷಿಸಲು ಮತ್ತು ಹೆಚ್ಚಿನ ಅಭಿವೃದ್ಧಿ ಪಡಿಸಲು ವಿಶೇಷ ಯೋಜನೆ ರೂಪಿಸ ಬೇಕು.

7. ಯಾದಗಿರಿ ಜಿಲ್ಲೆಯ ಶಹಾಪೂರದ ವಿಶ್ವ ವಿಖ್ಯಾತ ಬುದ್ದ ಮಲಗಿದ ಬೆಟ್ಟದ ಸಗರಾದ್ರಿ ಪಾರಂಪರಿಕ ತಾಣ ಮತ್ತು ಪರಿಸರ ಸಂರಕ್ಷಣ ಉದ್ಯಾನವನದ ಥೀಮ್ ಪಾರ್ಕ್ ಯೋಜನೆಗೆ 50 ಎಕರೆ ಪ್ರದೇಶದಲ್ಲಿ, ಥೀಮ್ ಪಾರ್ಕ್ ನಿರ್ಮಾಣ ಮಾಡಬೇಕು.

ಈ ಸಂಧರ್ಭದಲ್ಲಿ ಪೂಜ್ಯ ಬಂತೆ ಅಜ್ಜ ಸಾಲ, ಪೂಜ್ಯ ಬಂತೆ ಯಸ, ಉಪಾಸಕರಾದ ರಣಧೀರ ಎಂ ಹೊಸಮನಿ ಪಾಲಿ ಶಿಕ್ಷಕರು ಕಲಬುರ್ಗಿ, ಸಿದ್ದು ಮದ್ದರಕೆ, ಮಹೇಶ ಮೈಸೂರು, ಸಿದ್ದು ಸಂಜಯ್, ಮತ್ತು ಊರಿನ ಮುಖಂಡರಾದ ಎಂ.ಡಿ ಬಸಪ್ಪ, ಎಂ.ಡಿ. ಚಂದ್ರಶೇಖರ್, ಎಲ್ ನಾಗರಾಜ್, ಬಿಸರಳ್ಳಿ ಗುಲುಗಪ್ಪ, ಕಾಳಿ ಮಂಜುನಾಥ, ಎಲ್. ನಾರಾಯಣ, ಎಲ್. ಮಂಜುನಾಥ, ಸದಸ್ಯರಾದ ವಸಂತ ಕುಮಾರ್, ಪರಶುರಾಮ, ಸರದಾರ, ಕುಮಾರ, ಹನುಮಂತಪ್ಪ ಇತರರಿದ್ದರು.

ಬಾಕ್ಸ್:-

“ಬುದ್ಧರ ಅಸ್ತಿ ಮೆರವಣಿಗೆ:-

ಸಾಮ್ರಾಟ್ ಅಶೋಕರ ಮಗಳಾದ ಸಂಘಮಿತ್ರ ಮಹಾಥೇರಿ ರವರು ಭಗವಾನ್ ಬುದ್ಧರ ಅಸ್ತಿ [ಧಾತುಗಳ] ಶ್ರೀಲಂಕಕ್ಕೆ ಹಸ್ತಾಂತರಿಸಿದ್ದರಲ್ಲಿ ಒಂದನ್ನು ಭಾರತಕ್ಕೆ ತಂದಿರುವ ಬುದ್ಧರ ಪವಿತ್ರ ಅಸ್ಥಿಯನ್ನು ಪಾದಯಾತ್ರೆ ಯೊಂದಿಗೆ ಪುಣ್ಯ ಮೆರವಣೆಗೆ ಮಾಡುತ್ತಾ ಸಾಗಲಾಗುತ್ತಿದೆ.”

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button