ಕಾರು ಮತ್ತು ಅಪ್ಪೆ ಆಟೋ ಡಿಕ್ಕಿ ಸ್ಥಳದಲ್ಲಿ ಮಹಿಳೆ ಸಾವು.

ಕೊಟ್ಟೂರು ನವೆಂಬರ್.4

ತೂಲಹಳ್ಳಿಯಿಂದ ಚಿನ್ನೇನಹಳ್ಳಿಯ ಕಡೆಗೆ ಹೋಗುತ್ತಿರುವ ಅಪ್ಪೆ ಆಟೋ ರಿಕ್ಷಾದಲ್ಲಿ ಪ್ರಯಾಣಿಕರನ್ನು ಕರೆ ತರುತ್ತಿರುವಾಗ ಕಾರು ಚಾಲಕನು ಕಾರನ್ನು ಅತಿವೇಗದಲ್ಲಿ ಕೋಣನಹಳ್ಳಿಯಿಂದ ಉಜ್ಜಿನಿಗೆ ಹೋಗುತ್ತಿದ್ದ ವೇಳೆಗೆ ಎದುರಿಗೆ ಬಂದ ಅಪ್ಪೆ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋ ದಲ್ಲಿ ಪ್ರಯಾಣಿಸುತ್ತಿದ್ದ ಗೀತಮ್ಮ (೪೨) ಮಹಿಳೆ ಸಾವನ್ನಪ್ಪಿದ್ದಾರೆ.

ಆಟೋ ಡ್ರೈವರ್ ಬೊಮ್ಮಪ್ಪ, ನೇತ್ರಮ್ಮ, ಲಕ್ಷ್ಮಮ್ಮ, ಬಸಮ್ಮ, ಮಂಗಳಮ್ಮ, ಶಾರದಮ್ಮ ಸೇರಿ ಐದು ಜನರಿಗೆ ತೀವ್ರವಾಗಿ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ಕಳಿಸಲಾಗಿದೆ ಮತ್ತು ಅಪ್ಪೆ ಆಟೋದಲ್ಲಿ ಇರುವ ಮಕ್ಕಳಿಗೆ ಗಾಯಗಳಾಗಿದ್ದು. ಕೊಟ್ಟೂರು ಆರೋಗ್ಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

ಧರ್ಮಸ್ಥಳ ಸಂಘದ ವತಿಯಿಂದ ಈ ನಂಬರ ಕೆಎ ೨೬ ಎ ೬೬೬೮ ಕಾರನ್ನು ಹಳ್ಳಿಗಳಲ್ಲಿ ಮಹಿಳೆಯರ ಸಂಘಗಳಿಗೆ ಸಾಲದ ಹಣವನ್ನು ಸಂಗ್ರಹ ಮಾಡುವುದಕ್ಕೆ ಹೊರಗಿರುವ ಸಂದರ್ಭದಲ್ಲಿ ಆಗಿರುವ ಘಟನೆಯಾಗಿದೆ. ವೇಗದಿಂದ ಚಲಾಯಿಸಿದ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕೊಟ್ಟೂರು ಪೊಲೀಸ್ ಹಾಜರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button