ಸಮಗ್ರ ಅಭಿವೃದ್ಧಿಗೆ 250 ಕೋಟಿ ರೂ ಅನುದಾನ – ಬೈರತಿ ಸುರೇಶ್.
ತರೀಕೆರೆ ಅಕ್ಟೋಬರ್.30
![](https://i0.wp.com/sknewskannada.in/wp-content/uploads/2023/10/IMG-20231030-WA0030.jpg?resize=708%2C398&ssl=1)
ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರ ಹಿಂದುಳಿದವರ ಮಧ್ಯಮ ವರ್ಗದವರ ಪರವಾದ ಸರ್ಕಾರ ಎಂದು ನಗರ ಅಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ರವರು ಶುಕ್ರವಾರ ರಾತ್ರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ತರೀಕೆರೆ ಕ್ಷೇತ್ರ ಕುಡಿಯುವ ನೀರಿಗೆ ರೂ 55 ಕೋಟಿ, ಮತ್ತು ಯುಜಿಡಿ ನಿರ್ಮಾಣಕ್ಕೆ 165 ಕೋಟಿ, ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣವನ್ನು ನೂತನ ಕಟ್ಟಡ ನಿರ್ಮಾಣಕ್ಕೆ ರೂ 1 ಕೋಟಿ ಮತ್ತು ರಸ್ತೆಯ ಎರಡು ಬದಿ ಪುಟ್ ಪಾತ್ ಮತ್ತು ಚರಂಡಿ ನಿರ್ಮಾಣಕ್ಕೆ ಅಂದರೆ ತರೀಕೆರೆ ತಾಲೂಕು ಮತ್ತು ಅಜ್ಜಂಪುರ ತಾಲೂಕುಗಳ ಸಮಗ್ರ ಅಭಿವೃದ್ಧಿಗೆ ರೂ 250 ಕೋಟಿ ಅನುದಾನವನ್ನು ಮಂಜೂರು ಮಾಡುವುದಾಗಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಜಿ ಎಚ್ ಶ್ರೀನಿವಾಸ್, ಕಡೂರು ಶಾಸಕರಾದ ಆನಂದ, ಚಿಕ್ಕಮಗಳೂರು ಶಾಸಕರಾದ ತಮ್ಮಯ್ಯರವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಅಂಶುಮಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಯು ಫಾರೂಕ್, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಪ್ರಕಾಶ್ ವರ್ಮಾ, ಪುರಸಭಾ ಅಧ್ಯಕ್ಷರಾದ ಪರಮೇಶ್, ಸದಸ್ಯರಾದ ಟಿ ಜಿ ಲೋಕೇಶ್, ಮಾಜಿ ಪುರಸಭಾ ಅಧ್ಯಕ್ಷರಾದ ಆರ್ ಬಸವರಾಜ್, ಸಮಾಜ ಸೇವಕರಾದ ಟಿಜಿ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ