ಗಾಣಿಗ ಸಮಾಜದ ಒಳ ಪಂಗಡಗಳು ಒಂದಾದರೇ ನಮ್ಮನ್ನು ಮಣಿಸಲು ಯಾರಿಂದ ಸಾಧ್ಯವಿಲ್ಲ – ಲಕ್ಷ್ಮಣ ಸವದಿ.
ಹುನಗುಂದ ನವೆಂಬರ್.19

ಗಾಣಿಗ ಸಮುದಾಯ ಸಂಘಟಿತವಾಗಿ ಎಲ್ಲಾ ಒಳ ಪಂಗಡಗಳು ಒಂದಾದರೇ ನಮ್ಮನ್ನು ಆಳುವವರಿಗೆ ನಮ್ಮನ್ನು ಮಣಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.ರವಿವಾರ ಪಟ್ಟಣದ ಅಮರಾವತಿ ರಸ್ತೆಯಲ್ಲಿರುವ ಗಾಣಿಗ ಸಮುದಾಯ ಭವನದಲ್ಲಿ ಹುನಗುಂದ ಮತ್ತು ಇಳಕಲ್ಲ ತಾಲೂಕ ಗಾಣಿಗ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಾಣಿಗ ಸಮುದಾಯ ಭವನದ ಉದ್ಘಾಟನೆ ಮತ್ತು ಎರಡನೆಯ ಮಹಡಿ ಭೂಮಿ ಪೂಜೆ ಹಾಗೂ ಶಾಸಕ,ಸಂಸದರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ೧೨ ನೆಯ ಶತಮಾನದಲ್ಲಿ ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ನಾವೆಲ್ಲ ವೀರಶೈವ ಲಿಂಗಾಯತ ರಾಗಿದ್ದೇವೆ,ಉದ್ಯೋಗ ದಿಂದ ಜಾತಿ ಸೃಷ್ಠಯಾಗಿವೆ.ಸಮಾಜದಲ್ಲಿ ತುಳಿತಕ್ಕೆ ಒಳಗಾದವರನ್ನು ನಮ್ಮೊಂದಿಗೆ ಕರೆದು ಕೊಂಡು ಅವರಿಗೆ ನ್ಯಾಯಬದ್ದ ಸೌಲಭ್ಯಗಳನ್ನು ಕೊಟ್ಟರೇ ಖಂಡಿತ ಬಸವಣ್ಣನವರ ತತ್ವಕ್ಕೆ ಅರ್ಥ ಬರಲು ಸಾಧ್ಯ.ನಮ್ಮ ಸಮಾಜ ಇನ್ನು ಸಂಘಟಿತವಾಗ ಬೇಕಿದೆ.ನಮ್ಮ ಒಗ್ಗಟ್ಟು ಮತ್ತೊಂದು ಸಮುದಾಯಕ್ಕೆ ನೋವುಂಟು ಮಾಡದೇ ಅವರಿಗೆ ಮಾದರಿಯಾಗ ಬೇಕು,ಶಿಕ್ಷಣದಿಂದ ವಂಚಿತರಾದ ಸಮಾಜದ ಬಡ ಮಕ್ಕಳಿಗೆ ಉತ್ತಮ ಮತ್ತು ಉನ್ನತ ಶಿಕ್ಷಣ ಕೊಡಿಸುವ ಕೆಲಸವಾಗ ಬೇಕು.ಕಾಶಪ್ಪನವರ ನಮ್ಮ ಸಮಾಜದ ಮೇಲೆ ಅಪಾರ ಗೌರವವನ್ನಿಟ್ಟು ಕೊಂಡಿದ್ದು ಅವರಿಗೆ ಮುಂದಿನ ದಿನಗಳಲ್ಲಿ ಅವರ ಗೌರವಕ್ಕೆ ಛೂತಿ ಬರದಂತೆ ನಡೆದು ಕೊಳ್ಳಬೇಕು.ನಮ್ಮ ಸಮಾಜವನ್ನು ಸಂಘಟಿಸಿ ಕಾಶಪ್ಪನವರ ಕೈಗೆ ಕೊಡುತ್ತೇನೆ ಅದಕ್ಕೆ ಅವರು ಯಾವದೇ ಕಾರಣಕ್ಕೂ ಅನ್ಯಾಯ ಮಾಡಬಾರದು.ಸಮುದಾಯ ಭವನದ ಎರಡನೆಯ ಮಹಡಿ ಕಟ್ಟಡಕ್ಕೆ ನಾನು ೧೦ ಲಕ್ಷರೂ ಅನುದಾನವನ್ನು ನೀಡುತ್ತೇನೆ.ಸಮುದಾಯ ಭವನದಲ್ಲಿ ಸಮಾಜದ ಚಿಂತನೆ ಚಾವಡಿಯಾಗ ಬೇಕು ಎಂದರು.ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ ಉತ್ತರ ಕರ್ನಾಟಕದಲ್ಲಿ ಲಕ್ಷ್ಮಣ ಸವದಿಯಂತ ದಿಟ್ಟ ನಾಯಕತ್ವ ಕಾಂಗ್ರೆಸ್ ಪಕ್ಷಕ್ಕೆ ಅವಶ್ಯವಿತ್ತು ಅದರಂತೆ ಅವರ ಕಾಂಗ್ರೆಸ್ ಸೇರ್ಪಡೆಯಿಂದ ಕಾಂಗ್ರೆಸ್ಗೆ ಆನೆಬಲ ಬಂದಿದೆ.ನಾವೆಲ್ಲರೂ ಲಿಂಗಾಯತರು ಆಚಾರ ವಿಚಾರದಲ್ಲಿ ಭಿನ್ನತೆ ಇರಬಹುದು ಆದರೆ ನಡೆತೆ ಮಾತ್ರ ಒಂದೇ.೨೦೧೩ ರಲ್ಲಿ ಶಾಸಕನಾಗಿದ್ದಾಗ ಸಮುದಾಯ ಭವನದ ಕಟ್ಟಡಕ್ಕೆ ಶಾಸಕರ ಪ್ರದೇಶ ಅಭಿವೃದ್ದಿ ನಿಧಿಯಲ್ಲಿ ೧೦ ಲಕ್ಷ ರೂ ನೀಡಿದೆ ಅದು ಸಾಲದಿದ್ದಾಗ ಮತ್ತೇ ೧೦ ಲಕ್ಷ ರೂ ಅನುದಾನ ನೀಡಿದ್ದೇನೆ.ಅದರ ಜೊತೆಗೆ ಎರಡನೆಯ ಮಹಡಿ ಕಟ್ಟಡಕ್ಕೆ ಮುಜರಾಯಿ ಇಲಾಖೆಯಿಂದ ೨೫ ಲಕ್ಷ ರೂ ಅನುದಾನ ನೀಡಲಾಗಿದೆ.ಸಮಾಜದ ಅಭಿವೃದ್ದಿಗೆ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದರು.ಈ ಸಂದರ್ಭದಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಮತ್ತು ಶಾಸಕ ವಿಜಯಾನಂದ ಕಾಶಪ್ಪನವರ ನವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಇದರ ಜೊತೆಗೆ ಸಮುದಾಯ ಭವನದ ಕಟ್ಟಡ ಕಾಮಗಾರಿಗೆ ಶ್ರಮಿಸಿದ ಸಮಾಜದ ಮುಖಂಡರನ್ನು ಮತ್ತು ಮಹಿಳೆಯರನ್ನು ಸನ್ಮಾನಿಸಲಾಯಿತು.ಸಮಾಜದ ಅಧ್ಯಕ್ಷ ನಿಂಗಪ್ಪ ಅಮರಾವತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.ವಿಜಯಪುರ ಗಾಣಿಗ ಗುರುಪೀಠದ ಡಾ.ಜಯಬಸವ ಕುಮಾರಸ್ವಾಮಿಗಳು,ಕೋಲಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ದಿವ್ಯ ಸಾನಿಧ್ಯ ವಹಿಸಿಕೊಂಡು ಮಾತನಾಡಿದರು.ಜಿಲ್ಲಾಧ್ಯಕ್ಷ ಅಶೋಕ ಲಾಗಲೂಟಿ ಮಾತನಾಡಿದರುವೇದಿಕೆಯಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಅಮೀನಪ್ಪ ಸಂದಿಗವಾಡ,ಬಸವಪ್ರಭು ಸರನಾಡಗೌಡ್ರ,ಸೋಮಶೇಖರ ಸರನಾಡಗೌಡ್ರ,ಬಸವರಾಜ ಇಸ್ಲಾಂಪೂರ,ಬಸವಂತಪ್ಪ ಕುಂಟೋಜಿ,ಡಾ.ಬಸವರಾಜ ಕಡಿವಾಲ,ಮಹೇಶಪ್ಪ ಸಜ್ಜನ,ಚಂದ್ರಶೇಖರ ಸೂಡಿ,ಶರಣಪ್ಪ ಕೊನ್ನೊಳ್ಳಿ,ಬಸವಣ್ಣೆಪ್ಪ ಸಜ್ಜನ,ತಹಶೀಲ್ದಾರ ನಿಂಗಪ್ಪ ಬಿರಾದಾರ,ಎಸ್.ಡಿ.ಬಬಲಾದಿ,ಪ್ರಕಾಶ ಜತ್ತಿ,ಡಾ.ಎಸ್.ಆರ್.ಗೋಲಗೊಂಡ,ಶರಣು ಲೆಕ್ಕಿಹಾಳ,ಸೇರಿದಂತೆ ಅನೇಕರು ಇದ್ದರು.ಹನಮಗೌಡ ಹೊಸಮನಿ ಸ್ವಾಗತಿಸಿದರು,ಪಂಪಣ್ಣ ಸಜ್ಜನ ಪ್ರಾಸ್ತಾವಿಕ ಮಾತನಾಡಿದರು,ಪರಪ್ಪ ಅಥಣಿ ಮತ್ತು ಬಸಮ್ಮ ತಮ್ಮಣ್ಣವನರ ನಿರೂಪಿಸಿ ವಂದಿಸಿದರು,
ಬಾಕ್ಸ್ ಸುದ್ದಿ-ಕಳೆದ ವಿಧಾನಸಭೆ ಚುನಾವಣೆಯ ವೇಳೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ೧೦೮ ರಿಂದ ೧೧೦ ಸ್ಥಾನ ಗೆಲ್ಲುತ್ತೆದೆ ಎಂದು ಎಲ್ಲ ಸರ್ವೆಗಳು ಹೇಳುತ್ತಿರುವ ವೇಳೆಯಲ್ಲಿ ಗಾಣಿಗ ಸಮಾಜದ ದಿಟ್ಟ ನಾಯಕ ಲಕ್ಷö್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ೧೩೯ ಸ್ಥಾನ ಗೆಲ್ಲವುದಕ್ಕೆ ಸಾಧ್ಯವಾಗಿದೆ.ಆದರೆ ನಮ್ಮ ಸಮುದಾಯಕ್ಕೆ ಸಚಿವ ಸ್ಥಾನ ನೀಡಿದೇ ಅನ್ಯಾಯ ಮಾಡಿದೇ ಮುಂದಿನ ಲೋಕಸಭೆ ಚುನಾವಣೆ ಮುಂಚೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡಿಗೆ ಒತ್ತಾಯಿಸಿದರು.ಕಲ್ಲಿನಾಥದೇವರು ದಿಗಂಬರೇಶ್ವರ ಸಂಸ್ಥಾನಮಠ ಕೋಲಾರ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ