ಮಕ್ಕಳು ಮನಸ್ಸು ಮಾಡಿದರೇ ಅಸಾಧ್ಯವೆಂಬುವುದು ಯಾವುದು ಇಲ್ಲ – ಜಸ್ಮೀನ್ ಕಿಲ್ಲೇದಾರ್.
ಹುನಗುಂದ ಆಗಷ್ಟ.19

ಮಕ್ಕಳು ಮನಸ್ಸು ಮಾಡಿದರೇ ಅಸಾಧ್ಯವೆಂಬುವುದು ಯಾವದು ಇಲ್ಲ.ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ದೈಹಿಕ ಮತ್ತು ಮಾನಸಿಕ ಸದೃಢರಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಸ್ಮೀನ್ ಕಿಲ್ಲೇದಾರ ಹೇಳಿದರು.ಶನಿವಾರ ಪಟ್ಟಣದ ವಿದ್ಯಾನಗರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೌಢ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು ಸರ್ಕಾರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳಿಗೆ ಸಮವಸ್ತ್ರ ಮಧ್ಯಾಹ್ನದ ಬಿಸಿಯೂಟ,ಉಚಿತ ಪಠ್ಯಪುಸ್ತಕ ಸೇರಿದಂತೆ ಹತ್ತು ಹಲವು ಯೋಜನಗಳನ್ನು ಜಾರಿಗೆ ತಂದಿದ್ದು ಅವುಗಳ ಸದುಪಯೋಗಪಡಿಸಿಕೊಳ್ಳುವ ಮುಖೇನ ಉತ್ತಮ ಶಿಕ್ಷಣವನ್ನು ಪಡೆದುಕೊಂಡು ಶಾಲೆಗೆ ಮತ್ತು ತಂದೆತಾಯಿಯರ ಹೆಸರನ್ನು ತರಬೇಕು ಎಂದರು.
ಶಾಲಾ ಸುಧಾರಣಾ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯ ಇಮಾಮಸಾಬ ಕರಡಿ ಮಾತನಾಡಿ ಮಕ್ಕಳ ಭವಿಷ್ಯ ನಿರ್ಮಾಣದ ಹಂತವೇ ಪ್ರೌಢ ಶಾಲಾ ಹಂತವಾಗಿದೆ.ಈ ಹಂತದಲ್ಲಿ ಉತ್ತಮ ಅಧ್ಯಯನ ಮಾಡಿದರೇ ಮುಂದೆ ಭವಿಷ್ಯದ ಶಿಕ್ಷಣಕ್ಕೆ ದಾರಿಯಾಗಲಿದೆ.ದುಶ್ಚಟಗಳಿಗಳಿಗೆ ದಾಸರಾಗದೇ ಶಿಕ್ಷಕರ ಮಾರ್ಗದರ್ಶನದಲ್ಲಿ ಮುನ್ನಡೆದು ಉತ್ತಮ ಅಂಕಗಳನ್ನು ಗಳಿಸಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಬೇಕು.ನಾವು ಕೂಡಾ ನಿಮಗೆ ಬೇಕಾಗಿರುವ ಸಹಾಯ ಸಹಕಾರವನ್ನು ನೀಡುತ್ತೇವೆ ಎಂದರು.ಮುಖ್ಯ ಶಿಕ್ಷಕಿ ಸಾವಿತ್ರಿ ಕೆ.ಸಂಗಪ್ಪ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿಗೆ ತಂದ ಮೇಲೆ ಮಕ್ಕಳ ಶಿಕ್ಷಣ ಮತ್ತು ಕಲಿಕೆಗೆ ಸಂಬಂಧಿಸಿದಂತೆ ಸಾಕಷ್ಟು ಅನುಕೂಲವಾಗುವ ಯೋಜನೆಗಳಿದ್ದರು.ಸರ್ಕಾರಿ ಶಾಲೆಯಲ್ಲಿ ಸುಸಜ್ಜಿತ ಕಟ್ಟಡ,ನುರಿತ ಶಿಕ್ಷಕರಿದ್ದರೂ ಕೂಡಾ ಇಂದು ಪೋಷಕರು ಖಾಸಗಿ ಶಾಲೆಯ ಕಡೇ ಮುಖ ಮಾಡುತ್ತಿದ್ದು.
ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುವುದ್ದಕ್ಕೆ ಬಾಲ್ಯವಿವಾಹ,ಬಾಲ ಕಾರ್ಮಿಕ ಪದ್ದತಿಗಳು ಕಾರಣವಾಗಿವೆ ಎಂದರು.ಶಾಲಾ ಸುಧಾರಣಾ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಬಸವರಾಜ ಗೊಣ್ಣಾಗರ ಮಾತನಾಡಿದರು.ಈ ಸಂದರ್ಭದಲ್ಲಿ ಶಾಲಾ ಸುಧಾರಣಾ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರಾದ ಸಂಗಪ್ಪ ಕಡಪಟ್ಟಿ,ಬಸವರಾಜ ಕಂಬಾಳಿಮಠ,ಶಿವು ಹುನ್ನಳ್ಳಿ,ಅನುಸೂಯಾ ಕರಂಡಿ,ಶಶಿಧರ ಅಮರಾವತಿ,ಕೆಂಚಪ್ಪ ಮಾದರ,ಮುತ್ತು ವಾಲೀಕಾರ,ಅಬ್ಬಾಸ ಅತ್ತಾರ, ಸೇರಿದಂತೆ ಪ್ರೌಢ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ