ಮೊಹರಂ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದ ಯುತವಾಗಿ ಆಚರಿಸಿ – ಪಿ.ಎಸ್.ಐ ಚೆನ್ನಯ್ಯ ದೇವೂರ.
ಹುನಗುಂದ ಜು. 12

ಮೊಹರಂ ಹಬ್ಬವನ್ನು ಹಿಂದು ಮುಸ್ಲಿಂರು ಶಾಂತಿ ಮತ್ತು ಸೌಹಾರ್ಧಯುತವಾಗಿ ಆಚರಿಸ ಬೇಕು. ಯಾವುದೇ ಅಹಿತಕರ ಮತ್ತು ವಿವಾದಾತ್ಮಕ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಪಿಎಸ್ಐ ಚನ್ನಯ್ಯ ದೇವೂರ ಹೇಳಿದರು.ಶುಕ್ರವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರೆದ ಮೊಹರಂ ಹಬ್ಬದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಕೊಂಡು ಮಾತನಾಡಿದ ಅವರು, ಹುನಗುಂದ ಪಟ್ಟಣದ ಸೇರಿದಂತೆ ಇಡೀ ತಾಲೂಕು ಶಾಂತಿ ಸೌಹಾರ್ದತೆಗೆ ವಿಶೇಷ ಹೆಸರಾಗಿದೆ. ಅದರಂತೆ ಈ ಬಾರಿಯು ತಾಲೂಕಿನಾದ್ಯಂತ ಯಾವುದೇ ಕಾನೂನು ಸುವ್ಯವಸ್ಥೆ ಹದಗೆಡದಂತೆ ಮೊಹರಂ ಹಬ್ಬವನ್ನು ಅತ್ಯಂತ ಶಿಸ್ತು ಬದ್ದವಾಗಿ ಹಾಗೂ ಶಾಂತಿಯಿಂದ ಆಚರಿಸಬೇಕು. ಇನ್ನು ಮೊಹರಂ ಹಬ್ಬದಲ್ಲಿ ಯಾವದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿ.ಸಿ.ಟಿವಿಯನ್ನು ಅಳವಡಿಸಲಾಗುವುದು. ಹಬ್ಬದ ಸಂದರ್ಭದಲ್ಲಿ ಜಗಳ ಮತ್ತು ಕೋಮು ಮನೋಭಾವನೆಯನ್ನು ತೋರುವ ಮತ್ತು ವೈಯಕ್ತಿಕ ಜಗಳವನ್ನು ಮೊಹರಂ ಹಬ್ಬದಲ್ಲಿ ತಂದು ಗಲಭೆಯನ್ನು ಸೃಷ್ಠಿಸುವರ ಮೇಲೇ ನಿರ್ಧಾಕ್ಷಣ್ಯ ಕ್ರಮ ಕೈ ಕೊಳ್ಳಲಾಗುವುದು. ಹಬ್ಬದ ಸಂದರ್ಭದಲ್ಲಿ ಧರ್ಮ ಧರ್ಮಗಳಿಗೆ ಮತ್ತು ಜಾತಿ ಜಾತಿಗಳ ಮಧ್ಯ ಕಂದಕವನ್ನು ಸೃಷ್ಠಿಸುವ ಪೋಸ್ಟಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವರು ಮೇಲೂ ಕಠಿಣ ಕಾನೂನು ಕ್ರಮ ಜರುಗಿಸ ಲಾಗುವುದು ಎಂದರು.ವಿ.ಮ.ಬ್ಯಾಂಕ್ ನಿರ್ದೇಶಕ ಹಾಗೂ ವಕೀಲ ಮಹಾಂತೇಶ ಅವಾರಿ ಮಾತನಾಡಿ ಹುನಗುಂದ ಪಟ್ಟಣ ಸೇರಿದಂತೆ ಇಡೀ ತಾಲೂಕಾ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ನಮ್ಮಲ್ಲಿ ಹಿಂದು ಮತ್ತು ಮುಸ್ಲಿಂ ಬಾಂಧವರು ಅಣ್ಣ ತಮ್ಮರಂತೆ ಬಹಳಷ್ಟು ಆತ್ಮೀಯ ಬಾಂಧವ್ಯ ದಿಂದ ನಡೆದು ಕೊಂಡು ಬಂದಿದ್ದೇವೆ. ಪ್ರತಿ ಹಬ್ಬವನ್ನು ಎಷ್ಟು ಶಾಂತಿ ಮತ್ತು ಸಾಮರಸ್ಯ ದಿಂದ ಆಚರಿಸುತ್ತಾ ಬಂದಿದೆವೋ ಅದರಂತೆ ಮೊಹರಂ ಹಬ್ಬವನ್ನು ಅಷ್ಟೆ ಅಚ್ಚು ಕಟ್ಟಾಗಿ ಆಚರಿಸುತ್ತೆವೆ ಎಂದರು.ಮುಸ್ಲಿಂ ಮುಖಂಡ ಜಬ್ಬಾರ ಕಲಬುರ್ಗಿ ಮಾತನಾಡಿ ಮೊಹರಂ ಹಬ್ಬವನ್ನು ಇಲ್ಲಿವರಗೂ ಎಲ್ಲು ಜಾತಿ ಜನಾಂಗದವರು ಸೇರಿ ಕೊಂಡು ಸೌಹಾರ್ದಯುತವಾಗಿ ಆಚರಸುತ್ತಾ ಬಂದಿದೇವೆ. ಕಾನೂನು ಸುವ್ಯಸ್ಥೆಗೆ ಧಕ್ಕೆ ಯಾಗದಂತೆ ಮತ್ತು ಯಾವದೇ ವಿವಾದಾತ್ಮಕ ಘಟನೆಗಳಿಗೆ ಅವಕಾಶ ನೀಡದೇ ಹಬ್ಬವನ್ನು ಆಚರಿಸುತ್ತವೆ. ಮೊಹರಂ ಕೊನೆಯ ದಿನದಂದು ಮೆರವಣೆಗೆ ಸಂದರ್ಭದಲ್ಲಿ ಪೊಲೀಸರ ಸಹಕಾರ ಬಹಳ ಅವಶ್ಯವಾಗಿದೆ ಎಂದರು. ಅಪ್ಪು ಆಲೂರ ಮಾತನಾಡಿದರು.ಈ ಸಂದರ್ಭದಲ್ಲಿ ಮುಖಂಡರಾದ ಮಹುಬೂಬು ಸರಕಾವಸ, ಪುರಸಭೆ ಸದಸ್ಯ ಚಂದ್ರು ತಳವಾರ, ಮಲ್ಲು ಚೂರಿ, ಮಹಾಂತೇಶ ಮದರಿ, ಅಬ್ದುಲ್ ರೇಶ್ಮಿ ಸೇರಿದಂತೆ ಅನೇಕರು ಇದ್ದರು. ಪೊಲೀಸ್ ಸಿದ್ದು ಕೌಲಗಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಮಲ್ಲಿಕಾರ್ಜುನ ಎಂ ಬಂಡರಗಲ್ಲ ಹುನಗುಂದ