ಸೌಂದರ್ಯ ಪ್ರಜ್ಞೆ ಮೂಡಿಸುವ ಕಲೆ ಕನಕದಾಸರಿಗೆ ದಕ್ಕಿದೆ – ಎಂ.ನಸರುಲ್ಲಾ.
ಕೊಟ್ಟೂರು ನವೆಂಬರ್.30

ಪಟ್ಟಣದ ಪಂಚಾಯಿತಿ ಸದಸ್ಯರು ಸಮುದಾಯದ ಮುಖಂಡರು ಕನಕದಾಸರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮುಖಾಂತರ ಕನಕದಾಸರ ಜಯಂತಿಯನ್ನು ಸರಳವಾಗಿ ಗುರುವಾರ ದಂದು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಆಚರಿಸಿದರು.ನಂತರ ಮಾತನಾಡಿದ ಕನಕದಾಸರು ಇತಿಹಾಸವನ್ನು ಸಾಹಿತ್ಯದ ಪಠ್ಯದಲ್ಲಿರಿಸಿ ಅದಕ್ಕೊಂದು ಸೌಂದರ್ಯ ಪ್ರಜ್ಞೆ ಮೂಡಿಸುವ ಕಲೆ ಕನಕದಾಸರಿಗೆ ದಕ್ಕಿದೆ.

ಅದಕ್ಕೆ ಉದಾಹರಣೆ ಅವರ ‘ಮೋಹನ ತರಂಗಿಣಿ’. ನಳಚರಿತ್ರೆ, ಹರಿಭಕ್ತಿ ಸಾರಗಳು ಕೂಡ ಅವರ ಸೃಜನ ಶೀಲ ಬದುಕಿನ ಧ್ಯಾನವೇ. ಆಗಿದೆ, ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಎ ನಸರುಲ್ಲಾ . ತಿಳಿಸಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರು ಕೆಂಗರಾಜ್, ಶಫಿ, ಸಮುದಾಯದ ಮುಖಂಡರು ಬೋರನಹಳ್ಳಿ ಮರಿಯಪ್ಪ, ಎಲ್ ಐ ಸಿ ಮೂಗಣ್ಣ, ಪಟ್ಟಣ ಪಂಚಾಯಿತಿ ಆರ್ ಐ ಕೊಟ್ರೇಶ್, ಪರಶುರಾಮ್, ಅಜ್ಜಪ್ಪ, ಸುರೇಶ್, ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ. ಕೊಟ್ಟೂರು