ಉದ್ಯೋಗ ಖಾತ್ರಿಗೆ ಕತ್ತರಿ, ಕೆ ಅಯ್ಯನಳ್ಳಿ ಗ್ರಾಮ ಪಂಚಾಯತಿಯಲ್ಲಿ – ಮೇಟಿಗಳದ್ದೇ ದರ್ಬಾರ್.

ಕೆ.ಅಯ್ಯನಹಳ್ಳಿ ಮೇ .05

ಕೊಟ್ಟೂರು ತಾಲೂಕಿನ ಕೆ.ಅಯ್ಯನಹಳ್ಳಿ ಗ್ರಾಮ ಪಂಚಾಯತಿಯ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಗೆ ಮೇಟಿಗಳಿಂದ ಕತ್ತರಿ ಎನ್.ಎಂ.ಆರ್ 120 ಜನ ತೆಗೆಸಿಕೊಂಡು ಆದರೆ ಕೆಲಸ ಮಾಡುವವರು 60 ಮಂದಿಯಂತೆ ಆದರೆ 120 ಜನಕ್ಕೂ ಖಾತೆಗೆ ಹಣ ಜಮಾ ಆಗುವುದಂತೆ. ಈ ವಿಷಯವನ್ನು ಪಂಚಾಯ್ತಿಯ ಡಾಟಾ ಆಪರೇಟರ್ ಕೊಟ್ರೆಶಿಗೆ ತಿಳಿಸಿದರೆ ಹೌದಾ ಇದೇ ತರ ಮಾಡುತ್ತಾರೆ ಏನು ಮಾಡುವುದು ಕೆಲಸ ಇಲ್ಲಂದ್ರೆ ಮೇಟಿಗಳು ನಮ್ಮ ಮೇಲೆ ಜಗಳವಾಡುತ್ತಾರೆ. ಹೌದಾ ತಪ್ಪಾಗಿದೆ ಎಂದು ಹೇಳುತ್ತಾರಂತೆ ಆದರೆ ಮೇಲಿನ ಅಧಿಕಾರಿ ನರೇಗಾ ಸಹಾಯಕ ನಿರ್ದೇಶಕರಾದ ಹೆಚ್. ವಿಜಯಕುಮಾರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಡಾ, ಬಿ.ಆನಂದ್ ಕುಮಾರ್ ಇವರಿಗೆ ತಿಳಿಸಿದರೆ.

ಈ ಕಾಮಗಾರಿಗಳ ಬಗ್ಗೆ ನಿರ್ಲಕ್ಷ್ಯ ತೋರುವವರಂತೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರು ಗೂಳೇ ಹೋಗಬಾರದು ಎಂದು ಸರ್ಕಾರ ಬಡ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿದರೆ ಇದನ್ನು ಕೆಲವು ವ್ಯಕ್ತಿಗಳು ಪಂಚಾಯಿತಿಯಲ್ಲಿ ಮೇಟಿ ಎಂದು ಹೆಸರು ತೆಗೆದುಕೊಂಡು ಅವರು ದುರುಪಯೋಗ ಪಡಿಸಿ ಕೊಳ್ಳುತ್ತಾರೆ ಇದಕ್ಕೆ ಕಡಿವಾಣವಿಲ್ಲವೇ ಎಂದು ಕೆ.ಅಯ್ಯನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ರಾಜು ಮರೂರು ನಮ್ಮ ಸುದ್ದಿ ಮಾಧ್ಯಮ ಯೊಂದಿಗೆ ದೂರು ನೀಡಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button