ವಿಜಯಪುರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ – ಸನ್ಮಾನ ಕಾರ್ಯಕ್ರಮ ಜರಗಿತು.

ಕಲಕೇರಿ ಪೆ.01

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಪ್ರವಾಸಿ ಮಂದಿರದಲ್ಲಿ ವಿಜಯಪುರ ಜಿಲ್ಲಾ ಗ್ಯಾರಂಟಿ ಯೋಜನೆಗಳು ಸಮಿತಿಯ ನೂತನವಾಗಿಎಲ್ಲಾ ಕಾಂಗ್ರೆಸ್ ಮುಖಂಡರಿಂದ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಕಾರ್ಯಕ್ರಮ ಜರಗಿತು.ವಿಜಯಪುರ ಜಿಲ್ಲಾ ಅಧ್ಯಕ್ಷರು ಇಲಿಯೊಸ್ ಬೋರಾಮಣಿ. ಹಾಗೂ ಉಪಾಧ್ಯಕ್ಷರಾಗಿ ನಬಿಲಾಲ್ ನಾಯ್ಕೋಡಿ ಆಯ್ಕೆ ಮಾಡಿ ಎಲ್ಲಾ ಕಾಂಗ್ರೆಸ್ ಮುಖಂಡರು ಅವರನ್ನು ಸನ್ಮಾನ ಮಾಡಿದರು. ದೇವರ ಹಿಪ್ಪರಗಿ ಬ್ಲಾಕ್ ಅಧ್ಯಕ್ಷರಾದ ಬಶಿರ್ ಶೇಟ್ ಬೇಪಾರಿ ಇವರು ನಮ್ಮ ಕಾಂಗ್ರೆಸಿನ ಐದು ಗ್ಯಾರಂಟಿಗಳನ್ನು ಈಗಾಗಲೇ ಎಲ್ಲರೂ ಪಡೆದು ಕೊಂಡಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದರು ಎಂದು ಈ ಸಂದರ್ಭದಲ್ಲಿ ತಿಳಿಸಿದರು. K.P.C.C. ಕಾರ್ಯದರ್ಶಿಗಳಾದ ದೇವರ ಹಿಪ್ಪರಗಿಯ ಮತಕ್ಷೇತ್ರದ ಉಸ್ತುವಾರಿಗಳು ಡಾ. ಪ್ರಭುಗೌಡ ಲಿಂಗದಳ್ಳಿ ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ನಮ್ಮ ಕಾಂಗ್ರೆಸ್ ಪಕ್ಷದಿಂದ ಐದು ಗ್ಯಾರಂಟಿಗಳನ್ನು ಈಗಾಗಲೇ ಎಲ್ಲರಿಗೆ ಬಂದಿದೆ ನಮ್ಮ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಸಾಹೇಬರು ಮತ್ತು ಡಿ.ಕೆ ಶಿವಕುಮಾರ್ ಸಾಹೇಬರು ಅವರು ನಮ್ಮ ಕಾಂಗ್ರೆಸ್ ಪಕ್ಷದಿಂದ ಐದು ಗ್ಯಾರಂಟಿಗಳನ್ನು ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದವರು ನುಡಿದಂತೆ ನಡೆಯುವವರು ಎಂದು ಕಾಂಗ್ರೆಸ್ ಸರ್ಕಾರದಿಂದ ಮಹಿಳೆಯರಿಗೆ ಬಸ್ಸುಗಳನ್ನು ಉಚಿತವಾಗಿ ಹಾಗೂ ಮಹಿಳೆಯರಿಗೆ ಗೃಹಲಕ್ಷ್ಮಿ ಎರಡು ಸಾವಿರ ರೂಪಾಯಿ ತಿಂಗಳ ಉಚಿತ ಹಾಗೂ ಕರೆಂಟ್ ಉಚಿತ ಅನೇಕ ಕೆಲಸಗಳನ್ನು ನಮ್ಮ ಕಾಂಗ್ರೆಸ್ ಸರಕಾರದಿಂದ ಕೆಲಸಗಳನ್ನು ಆಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಕಲಕೇರಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ.ಜಹಾಂಗೀರ್ ಪಾಷಾ ಸಿರಸಗಿ ನಮ್ಮ ಕಾಂಗ್ರೆಸ್ ಸರ್ಕಾರದಿಂದ ಗ್ಯಾರಂಟಿಗಳು ಅನೇಕ ಕೆಲಸಗಳು ಆಗಿದೆ ಆದ್ದರಿಂದ ಎಲ್ಲಾ ಯುವಕರು ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳನ್ನು ಈಗಾಗಲೇ ಮಾಡಿದೆ ಮುಂದೆ ಆದರೂ ಮಾಡುತ್ತೇವೆ ಎಂದು ನೀವೆಲ್ಲರೂ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಸೇರಿ ನಮ್ಮ ಕಾಂಗ್ರೆಸ್ ಪಕ್ಷದ ಅನೇಕ ಕೆಲಸಗಳನ್ನು ನಮ್ಮ ಕಾಂಗ್ರೆಸ್ ಸರ್ಕಾರ ಮಾಡ್ತಾ ಇದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ವಿಜಯಪುರ ಜಿಲ್ಲಾ ಗ್ಯಾರಂಟಿ ಯೋಜನೆಗಳು ಆಯ್ಕೆ ಆದಂತಹ ಅಧ್ಯಕ್ಷರಾದ ಇಲಿಯೊಸ ಬೋರಾಮಣಿ ಈ ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಅನೇಕ ಮಹಿಳೆಯರಿಗೆ ನಮ್ಮ ಕಾಂಗ್ರೆಸ್ ಸರ್ಕಾರದಿಂದ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಕೊಟ್ಟಿದೆ ಬಸ್ ಗಳು ಉಚಿತ ಕರೆಂಟ್ ಬಿಲ್ಲು ಇರಬಹುದು ಗೃಹಲಕ್ಷ್ಮಿ ಮಹಿಳೆಯರಿಗೆ 2000 ಉಚಿತ ಇದೆ ಇಲ್ಲಿವರೆಗೂ ಯಾವ ಸರಕಾರ ಮಾಡದಂತ ಕೆಲಸಗಳನ್ನು ನಮ್ಮ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ವಿಜಯಪುರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷರಾಗಿ ಆಯ್ಕೆಯಾದ ನಬಿಲಾಲ್ ನಾಯ್ಕೋಡಿ ಇವರು ಈ ಕಾಂಗ್ರೆಸ್ ಪಕ್ಷದಲ್ಲಿ 20 ವರ್ಷಗಳ ಕಾಲ ದುಡಿದಂತ ವ್ಯಕ್ತಿ ಈಗ ಇವರನ್ನು ಕಾಂಗ್ರೆಸಿನ ಎಲ್ಲಾ ಮುಖಂಡರು ಸೇರಿ ಇವರಿಗೆ ಒಂದು ಸ್ಥಾನ ಕೊಟ್ಟಿದ್ದಾರೆ ಆದರೂ ನಾನು ಕಾಂಗ್ರೆಸ್ ಪಕ್ಷದಲ್ಲಿ ಅದು ಕಾರ್ಯಕರ್ತರಾಗಿ ಕೆಲಸ ಮಾಡಿದ್ದೇನೆ ಆದರೆ ಉಪಾಧ್ಯಕ್ಷ ಆಗುವ ನನ್ನ ಕನಸು ಮನಸ್ಸಿನಲ್ಲಿ ಕೂಡ ಇದ್ದೀಲ್ಲ ಆದರೂ ಎಲ್ಲಾ ಕಾಂಗ್ರೆಸ್ ಮುಖಂಡರು ಸೇರಿ ವಿಜಯಪುರ ಜಿಲ್ಲಾ ಗ್ಯಾರೆಂಟಿಗಳ ಯೋಜನೆ ಉಪಾಧ್ಯಕ್ಷನಾಗಿ ಆಯ್ಕೆ ಮಾಡಿ ಎಲ್ಲಾ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಸೇರಿ ನನಗೆ ಸನ್ಮಾನ ಮಾಡಿದರು ನನಗೆ ಬಹಳ ಖುಷಿಯಾಯಿತು ಎಂದರು ಯಾಕಂದ್ರೆ ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ನೀವೆಲ್ಲ ನೋಡ್ತಾ ಇದ್ದೀರಿ ನುಡಿದಂತೆ ನಡೆಯುವವರು ಕಾಂಗ್ರೆಸ್ ಪಕ್ಷ ಮಾತ್ರ ಹಾಗೂ ಐದು ಗ್ಯಾರಂಟಿಗಳು ಪ್ರತಿಯೊಬ್ಬರಿಗೆ ಬಂದಾವು ಇನ್ನೂ ಅನೇಕ ಕುಟುಂಬದವರಿಗೆ ಹೊಸ ಬಿಪಿಎಲ್ ಕಾರ್ಡ್ ಮಾಡಿಸುವ ಒಂದು ಕುರಿತು ಮನೆ ಮನೆಗೆ ತಿರುಗಿ ಅವರ ಕೆಲಸಗಳನ್ನು ಮಾಡ್ತಾ ಇದ್ದೀವಿ ಹಾಗೂ ಎಲ್ಲಾ ನನ್ನ ಕಾಂಗ್ರೆಸ್ ಮುಖಂಡರು ಊರಿನ ಹಿರಿಯರು ಕಾಂಗ್ರೆಸ್ ಕಾರ್ಯಕರ್ತರು ಗ್ರಾಮಸ್ಥರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ದಾವಲ್ ನಾಯ್ಕೋಡಿ ಪೀಸ್ ಶಾಲೆಯ ಅಧ್ಯಕ್ಷರು. ದೇವಿಂದ್ರ ಜಂಬಿಗಿ ಕಾಂಗ್ರೆಸ್ ಮುಖಂಡರು. ಮಶಾಕ್ ಸಾಬ್ ವಲ್ಲಿಭಾವಿ ಕಾಂಗ್ರೆಸ್ ಹಿರಿಯ ಮುಖಂಡರು. ರಾಜ್ ಅಹ್ಮದ್ ಸಿರಸಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು. ಎಂ.ಪಿ .ನದಾಫ್ ನಿವೃತ್ತಿ ಶಿಕ್ಷಕರು ಕಾಂಗ್ರೆಸ್ ಮುಖಂಡರು. ಶಫೀಕ್ ಸಿಪಾಯಿ. ರಮೇಶ್ ಮೋಪುಗಾರ. ಶಿವರಯ್ಯ ಮೋಪುಗಾರ. ದೇವೇಂದ್ರ ಬಡಿಗೇರ್. ಮೈನುದ್ದೀನ್ ಮನಿಯರ್. ದೇವೇಂದ್ರ ನಡುವಿನಕೇರಿ. ಎಲ್ಲಾ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರು ಗ್ರಾಮಸ್ಥರು ಸೇರಿದಂತೆ ವಿಜಯಪುರ ಜಿಲ್ಲಾ ಗ್ಯಾರಂಟಿಗಳ ಯೋಜನೆ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ ಸಮಾರಂಭ ಜರುಗಿತು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button