ತಾಲೂಕಾ ಎಸ್.ಟಿ ಮೋರ್ಚಾ ಉಪಾಧ್ಯಕ್ಷರಾಗಿ ಟಿ.ಅಂಜಿನಪ್ಪ ಆಯ್ಕೆ.
ಅಮಲಾಪುರ ಮಾರ್ಚ್.8

ಕಾನ ಹೊಸಹಳ್ಳಿ ಸಮೀಪದ ಅಮಲಾಪುರ ಗ್ರಾಮದ ಟಿ ಆಂಜಿನಪ್ಪ ಇವರನ್ನು ಕೂಡ್ಲಿಗಿ ತಾಲೂಕು ಎಸ್.ಟಿ ಮೋರ್ಚಾ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ರಾಜ್ಯ ಎಸ್.ಟಿ ಮೋರ್ಚಾ ಅಧ್ಯಕ್ಷರಾದ ಬಂಗಾರ ಹನುಮಂತು ಹಾಗೂ ವಿಜಯನಗರ ಜಿಲ್ಲಾಧ್ಯಕ್ಷರಾದ ಚನ್ನಬಸವೇಗೌಡ ಪಾಟೀಲ್ ತಾಲೂಕು ಮಂಡಲ ಅಧ್ಯಕ್ಷರು ನಾಗರಾಜ್ ಕಾಮ ಶೆಟ್ಟಿ ಬಣವಿಕಲ್ಲು ಹಾಗೂ ಸೂರ್ಯ ಪಾಪಣ್ಣ ಹಾಗೂ ಜಿಲ್ಲಾ ಕಾರ್ಯದರ್ಶಿ ಎಸ್ ಪಿ ಪ್ರಕಾಶ್, ಎಸ್ ಟಿ ಮೋರ್ಚಾ ತಾಲೂಕ ಅಧ್ಯಕ್ಷರು ಗುರಿಕರ್ ರಾಘವೇಂದ್ರ ಇವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ವೇಳೆ ನೂತನ ತಾಲೂಕು ಎಸ್.ಟಿ ಮೋರ್ಚಾ ಉಪಾಧ್ಯಕ್ಷರು ಟಿ ಆಂಜಿನಪ್ಪ ಅಮಲಾಪುರ ಮಾತನಾಡಿ ಭಾರತೀಯ ಜನತಾ ಪಾರ್ಟಿಯ ಮುಖಂಡರ ಹಾದಿಯಲ್ಲಿಯೇ ಮುಂದೆ ಸಾಗಿ ಭಾರತೀಯ ಎಸ್ ಟಿ ಮೋರ್ಚಾವನ್ನು ಮತ್ತಷ್ಟು ಬಲಪಡಿಸಿ ಭಾರತೀಯ ಜನತಾ ಪಾರ್ಟಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಲಾಗುವುದು ಎಂದು ಹೇಳಿದರು. ತಾಲೂಕಿನ ಬಿಜೆಪಿ ಮುಖಂಡರು, ಕಾರ್ಯಕರ್ತರು ಅಭಿನಂದಿಸಿದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ