ಮನ್ನೆ ಕೋಟೆ ಗ್ರಾಮ ಪಂಚಾಯಿತಿಯಿಂದ “ಸಂವಿಧಾನ ಜಾಗೃತಿ ಜಾಥಾ ಸ್ತಬ್ಧ ಚಿತ್ರಕ್ಕೆ ಅದ್ದೂರಿ ಸ್ವಾಗತ.
ಮನ್ನೆ ಕೋಟೆ ಫೆಬ್ರುವರಿ.5
![](https://i0.wp.com/sknewskannada.in/wp-content/uploads/2024/02/IMG-20240205-WA0033-1024x461.jpg?resize=708%2C319&ssl=1)
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಮನ್ನೆ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಜನರು ಮತ್ತು ಮನ್ನೆ ಕೋಟೆ ಗ್ರಾಮದ ಸಮಸ್ತ ನಾಗರಿಕರು ಡಾ.ಬಿ.ಆರ್ ಅಂಬೇಡ್ಕರ್ ರವರ ಸ್ತಬ್ದ ಚಿತ್ರದ ವಾಹನವನ್ನು ಮತ್ತು ಎಲ್ಲ ಅಧಿಕಾರಿಗಳನ್ನು ಅತ್ಯಂತ ವಿಜೃಂಭಣೆಯಿಂದ ಗ್ರಾಮಕ್ಕೆ ಬರ ಮಾಡಿಕೊಂಡರು. ಮನ್ನೆ ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಆದ ಶ್ರೀಮತಿ ಪ್ರತಿಭಾ.ವಿ ವಿಜಯ್ ಕುಮಾರ್.ಈ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆದ ಶ್ರೀಮತಿ ಏಚ್.ಆರ್ ನೇತ್ರಾವತಿ ರವರು ಸ್ತಬ್ದ ಚಿತ್ರಕ್ಕೆ ಪುಷ್ಪ ಮಾಲೆ ಹಾಕಿ ಪೂಜೆ ಸಲ್ಲಿಸಿದರು ನಂತರ ಸುಮಂಗಲೆಯರು ಆರತಿ ಬೆಳಗಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಆದ ಶ್ರೀಮತಿ ಜ್ಯೋತಿ ಬಸವರಾಜು ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳು ಆದ ಬಿ.ಚಂದಯ್ಯ ಶ್ರೀ ಎಂ. ಟಿ ರವಿಕುಮಾರ್, ಶ್ರೀಮತಿ ಗೀತಮ್ಮ ಬಸವರಾಜು, ಶ್ರೀಮತಿ ಪೆದ್ದಕ್ಕ ನಾಗೇಶ್, ಶ್ರೀ ಎಸ್.ಟಿ ರೇವಣ್ಣ, ಟಿ ರಾಜಣ್ಣ, ಶ್ರೀಮತಿ ಡಿ. ಓ. ಲಕ್ಷ್ಮಿ ಅಜಯ್ ಶ್ರೀಮತಿ ದ್ರಾಕ್ಷಾಯಿಣಿ ನಾಗರಾಜ್, ಶ್ರೀಮತಿ ಈ ಲಕ್ಷ್ಮೀದೇವಿ ಎಚ್.ತಿಪ್ಪೇಸ್ವಾಮಿ ಶ್ರೀಮತಿ ಬಿ. ಮಂಜುಳಾ ಮಹಾಂತೇಶ್, ಶ್ರೀ ಎಸ್. ತಿಪ್ಪೇಸ್ವಾಮಿ, ಶ್ರೀ ಎಂ.ರಮೇಶ್ ಶ್ರೀಮತಿ ಜೆ.ನಂದಿನಿ ಬಾಯಿ ತಿಪ್ಪೇಸ್ವಾಮಿ, ಶ್ರೀ ಆರ್ ರಮೇಶ್, ಶ್ರೀಮತಿ ಕಣುಮಾಕ್ಷಿ ನಾಗೇಶ್, ಶ್ರೀಮತಿ ಟಿ.ಚನ್ನಮ್ಮ ತಿಪ್ಪೇಸ್ವಾಮಿ ಹಾಜರಿದ್ದರು.
![](https://i0.wp.com/sknewskannada.in/wp-content/uploads/2024/02/IMG-20240205-WA0029-461x1024.jpg?resize=461%2C1024&ssl=1)
ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಆದ ಶ್ರೀಯುತ ಸಿ.ಬಿ ಮನೋಹರ್, ಬಿಲ್ ಕಲೆಕ್ಟರ್ ಆದ ಶ್ರೀಯುತ ಮಲ್ಲಿಕಾರ್ಜುನಯ್ಯ.ಟಿ, ಗಣಕ ಯಂತ್ರ ನಿರ್ವಾಹಕರಾದ ಶ್ರೀಯುತ ಆರ್.ಮಂಜುನಾಥ್, ಕ್ಲರ್ಕ್ ಶ್ರೀ ಬಿ. ಲಕ್ಷ್ಮಣಪ್ಪ,ಮತ್ತು ನೀರುಗಂಟಿಗಳಾದ ಶ್ರೀ ಟಿ.ಸುರೇಶ್, ಜಿ.ರವಿಕುಮಾರ್, ಟಿ.ನಾಗರಾಜು, ಬಿ.ತಿಪ್ಪೇಸ್ವಾಮಿ, ಎಚ್.ನಾಗರಾಜು, ಜವಾನ ಜಿ.ತಿಪ್ಪೇಸ್ವಾಮಿ, ಗ್ರಾಮ ಕಾಯಕ ಮಿತ್ರ ಶ್ರೀಮತಿ ಪಿ.ಭಾಗ್ಯಮ್ಮ,ಗ್ರಂಥ ಪಾಲಕರಾದ ಶ್ರೀ ಬಿ.ತಿಪ್ಪೇಸ್ವಾಮಿ, ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಆದ ಶ್ರೀಮತಿ ಕೆ.ಮಂಜುಳ, ತುಂಗಾ,ಅನಿತಮ್ಮ,ಮತ್ತು ಸಹಾಯಕಿಯರು, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಭಾಗ್ಯಮ್ಮ, ವನಜಾಕ್ಷಿ ಎಸ್.ಡಿ.ಎಂ.ಸಿ ಅಧ್ಯಕ್ಷರು ಭಾಗವಹಿಸಿದ್ದರು. ಮನ್ನೆ ಕೋಟೆ ಗ್ರಾಮದ ದಲಿತ ವಿಮೋಚನಾ ಮಾನವ ಹಕ್ಕುಗಳ ವೇದಿಕೆಯ ಪದಾಧಿಕಾರಿಗಳು ಆದ ಶ್ರೀಯುತ ತಿಪ್ಪೇಸ್ವಾಮಿ,ಎಂ.ಚಿದಾನಂದಪ್ಪ ಮಂಜಣ್ಣ,ಬಿ.ತಿಪ್ಪೇಸ್ವಾಮಿ ,ತಿಪ್ಪಣ್ಣ, ಮಂಜುನಾಥ್, ಯಲ್ಲೇಶಿ,ರೇವಣ್ಣ,ನಿಂಗಣ್ಣ,ದಿನೇಶ್, ಎಲ್ಲ ಪದಾಧಿಕಾರಿಗಳು ವಿವಿಧ ಮಹಿಳಾ ಸಂಘಗಳ ಮಹಿಳೆಯರು ಭಾಗವಹಿಸಿದ್ದರು.ನಂತರ ಕೋಡಿಹಳ್ಳಿ ಗ್ರಾಮದ ಡಾ.ಬಿ. ಆರ್ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಸ್ತಬ್ದ ಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪೂಜೆ ಸಲ್ಲಿಸಲಾಯಿತು, ಈ ಸಂದರ್ಭದಲ್ಲಿ ಸಂಘದ ಮಾರ್ಗದರ್ಶಕರು ಆದ ಶ್ರೀಯುತ ಲಿಂಗರಾಜು.ಡಿ ಅಧ್ಯಕ್ಷರು ಆದ ಶ್ರೀಯುತ ಶಿವಮೂರ್ತಿ.ಟಿ ಕಾರ್ಯದರ್ಶಿಗಳು ಆದ ಶ್ರೀಯುತ ಶ್ರೀಧರ್.ಏಚ್ ರಾಜು.ಡಿ, ಮೈಲಾರಿ.ಕೆ, ವಿಜಯ್ ಕುಮಾರ್.ಡಿ, ಅರುಣ್ ಕುಮಾರ್.ಟಿ, ತಿಪ್ಪೇಸ್ವಾಮಿ.ಯು,ಶಿವಪ್ಪ,ಮನೋಜ್,ತಿಪ್ಪೇಸ್ವಾಮಿ.ಪಿ.ಎಂ, ಅಶೋಕ್,ಕಿರಣ್ ಕೆ.ಟಿ,ಸ್ವಾಮಿ. ಆರ್, ಮೋಹನ್,ನಂದೀಶ್, ದುರುಗೇಶ್, ಪರಮೇಶ್,ಗೋಪಿ,ಮಲ್ಲಿಕಾರ್ಜುನ್.ಜಿ, ಇತರೆ ಎಲ್ಲ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆದ ಶ್ರೀಯುತ ಮಂಜುನಾಥ್ ರವರು ಹಾಗೂ ಎಲ್ಲ ಸಿಬ್ಬಂದಿ ಅಧಿಕಾರಿಗಳನ್ನು ಸ್ವಾಗತಿಸಿ ಭಾಗವಹಿಸಿದ ಎಲ್ಲ ಸಮಸ್ತ ಜನತೆಗೆ ಶ್ರೀಯುತ ಟಿ.ಮಲ್ಲಿಕಾರ್ಜುನಯ್ಯ ರವರು ಸಂವಿಧಾನದ ಪೀಠಿಕೆಯನ್ನು ಓದಿ ಪ್ರತಿಜ್ಞೆ ಮಾಡುವ ಮೂಲಕ ಜನರಿಗೆ ಬೋಧಿಸಿದರು.
![](https://i0.wp.com/sknewskannada.in/wp-content/uploads/2024/02/IMG-20240205-WA0031-1024x461.jpg?resize=708%2C319&ssl=1)
ನಂತರ ರಾಜ ಬೀದಿಗಳಲ್ಲಿ ಅದ್ದೂರಿಯಾಗಿ ತಮಟೆ, ನಗಾರಿ ಸದ್ದಿಗೆ ಹೆಜ್ಜೆ ಹಾಕುತ್ತಾ ನೃತ್ಯ ಮಾಡುತ್ತಾ ಅಂಬೇಡ್ಕರ್ ರವರ ಘೋಷಣೆಗಳನ್ನು ಕೂಗುತ್ತ ಭೀಮ ರಥವು ಮುಂದೆ ಸಾಗಿತು ಗ್ರಾಮದ ಎಲ್ಲ ಮುಖಂಡರು ಹಿರಿಯರು, ಯುವಕರು, ಮಹಿಳೆಯರು ಮೆರವಣಿಗೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ಅತ್ಯಂತ ಯಶಸ್ವಿಯಾಗಿ ಮುಂದಿನ ಗ್ರಾಮ ಪಂಚಾಯಿತಿಗೆ ” ಸಂವಿಧಾನ ಜಾಗೃತಿ ಜಾಥಾ ಸ್ತಬ್ದ ಭೀಮ ರಥ ” ವನ್ನು ಬೀಳ್ಕೊಡಲಾಯಿತು.ಈ ಸಂಧರ್ಭದಲ್ಲಿ ಒಟ್ಟಾರೆಯಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಲ್ಲರ ಸಹಕಾರದೊಂದಿಗೆ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
✍️ವರದಿಗಾರರು :- ಶಿವಮೂರ್ತಿ.ಟಿ.ಕೋಡಿಹಳ್ಳಿ ಚಳ್ಳಕೆರೆ