ಇಂಡಿ ಪ್ರತ್ಯೇಕ ಜಿಲ್ಲಾ ಘೋಷಣೆಗೆ ಆರ್.ಪಿ.ಐ (ಅಂಬೇಡ್ಕರ್) ಘಟಕದಿಂದ ಮನವಿ.
ಇಂಡಿ ಡಿಸೆಂಬರ್.30

ರಿಪಬ್ಲಿಕನ ಪಾರ್ಟಿ ಆಪ್ ಇಂಡಿಯಾ(ಅಂಬೇಡ್ಕರ) ಘಟಕದ ಇಂಡಿ ತಾಲ್ಲೂಕಿನ ಸರ್ವ ಸದಸ್ಯರು ಹಾಗೂ ಸಾರ್ವಜನಿಕ ನಾಯಕರು ಸೇರಿ ಕೊಂಡು,ವಿಜಯಪುರ ಜಿಲ್ಲೆಯಲ್ಲಿನ ಇಂಡಿಯು ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದ ತೀರ ಹಿಂದುಳಿದ ಪ್ರದೇಶ ಗಳಲ್ಲೊಂದಾಗಿದ್ದು, ಇಲ್ಲಿ ಶೈಕ್ಷಣಿಕವಾಗಿ,ಸಾಮಾಜಿಕವಾಗಿ,ಆರ್ಥಿಕವಾಗಿ ಇನ್ನೂ ಪ್ರಗತಿ ಕಾಣ ಬೇಕಾಗಿದೆ .ಆಡಳಿತಾತ್ಮಕ ದೃಷ್ಟಿಯಿಂದ ಇಂಡಿ ಪ್ರತ್ಯೇಕ ಜಿಲ್ಲೆಯ ರಚನೆಗೆ ಸಂಭಂದಿಸಿದಂತೆ ಜಿಲ್ಲೆಗೆ ಬೇಕಾಗಿರುವ ಪೂರಕ ಅಂಶಗಳು ಸಾಕಷ್ಟು ಇರುತ್ತವೆ, ಅದರಂತೆ ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ತೀರಾ ಹಿಂದುಳಿದ ಗಡಿ ಭಾಗವಾಗಿದು ಇಲ್ಲಿ ಪದವಿ ಕಾಲೇಜುಗಳು / ತಾಂತ್ರಿಕ ವ ಇಂಜನಿಯರಿಂಗ / ಡಿಪ್ಲೋಮಾ ಕಾಲೇಜುಗಳು, ಪ್ಯಾರಾ ಮೆಡಿಕಲ್/ನರ್ಸಿಂಗ ಕಾಲೇಜು ಹಾಗೂ ಸ್ನಾತಕೊತರ ವ ಪೋಸ್ಟ್ ಗ್ರ್ಯೂಜುವೆಟ್ ಕಾಲೇಜುಗಳು ಹೀಗೆ ಹಲವಾರು ವೈವಿಧ್ಯಮಯ ಸ್ವರೂಪದ ಕಾಲೇಜುಗಳ ಸ್ಥಾಪನೆಗೆ ಹಾಗೂ ಅವುಗಳ ಸಂಭಂಧಿತ ಗಡಿನಾಡು ಅಭಿವೃದ್ಧಿಗಾಗಿ ಸದರ ಇಂಡಿಯನ್ನು ಪ್ರತ್ಯೇಕ ಜಿಲ್ಲಾ ಕೆಂದ್ರವಾಗಿ ಘೋಷಣೆ ಮಾಡಲು ಆಗ್ರಹಿಸುತ್ತದೆ.

ಹಾಗೂ ಸಂವಿಧಾನ ವಿಧಿ 371 (ಜೆ)ಗೆ ಸೇರ್ಪಡೆ ಹಕ್ಕೋತಾಯ ಮಾಡುತ್ತಾ ಸೂಕ್ತ ನಿರ್ಣಯ ಕೈಗೊಂಡು ಇಂಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿಯವರಿಗೆ ಮಾನ್ಯ ಉಪ ವಿಭಾಗಾಧಿಕಾರಿಗಳು ಇಂಡಿ ಇವರ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಮೇಲಿನಮನಿ.ಶ್ರೀ ರಾಮಚಂದ್ರ ಕಾಂಬಳೆ.ವಿಶ್ವನಾಥ ವಾಘ್ಮೋರೆ.ಸುರೇಶ ಕಾಂಬಳೆ.ಪರಶುರಾಮ ಭಾವಿಕಟ್ಟಿ.ವಿಕಾಸ ಗುಡಮಿ.ಎಸ್.ಬಿ.ಹರಿಜನ.ಪರಶುರಾಮ ಉಕ್ಕಲಿ.ವೇಂಕಟೇಶ.ಇತರರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ