ವೀಣಾ ಕಾಶಪ್ಪನವರಿಗೆ ಎಂ.ಪಿ ಟಿಕೆಟ್ ನೀಡುಲು ಆಗ್ರಹಿಸಿ ತಾಲೂಕ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರಿಂದ – ಬಿಗಿ ಪಟ್ಟು.

ಇಲಕಲ್ಲ ಮಾರ್ಚ್.19

ವೀಣಾ ಕಾಶಪ್ಪನವರಿಗೆ ಲೋಕಸಭಾ ಟಿಕೆಟ್‌ ನೀಡುವಂತೆ ತಾಲೂಕ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರಿಂದ ಬಿಗಿ ಪಟ್ಟು.ಹೌದು ೨೦೨೪ ರ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಆದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್‌ ಗಾಗಿ ಲಾಬಿ ಜೋರಾಗಿ ನಡಿತಾಯಿದೆಬಾಗಲಕೋಟ ಜಿಪಂ ಮಾಜಿ ಅಧ್ಯಕ್ಷೆ ವೀಣಾ ವಿ.ಕಾಶಪ್ಪನವರಿಗೆ ಟಿಕಟ್ ನೀಡಬೇಕೆಂದು ಬೆಂಬಲಿಗರು ಪಟ್ಟು ಹಿಡಿದಿದ್ದಾರೆ.ಮಾ ೧೭ ರಂದು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದಂತ ಮಹಿಳೆರು ಪತ್ರಿಕಾ ಮೂಲಕ ಮಾತನಾಡುತ್ತಾ ಅವರು ಬಾಗಲಕೋಟ ಜಿಲ್ಲೆಯ ಮನೆ ಮಗಳಾಗಿ ಹೊರ ಹೊಮ್ಮಿದ್ದಲ್ಲದೇ ಅವರು ಹಲವಾರು ಮುಖಂಡರಿಗೆ, ಯುವಕ ಮತ್ತು ಯುವತಿಯರಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಐಎಎಸ್, ಕೆಎಎಸ್, ಕೋಚಿಂಗ್ ಕ್ಲಾಸು ಕಲಿಯಲು ಬೆಂಗಳೂರು, ಹುಬ್ಬಳ್ಳಿ, ಧಾರವಾಡಕ್ಕೆ ನಮ್ಮ ಮಕ್ಕಳು ತೆರಳ ಬೇಕಾಗಿತ್ತು.ನಮ್ಮ ಜಿಲ್ಲೆಯಲ್ಲಿ ಬಡ ಮಕ್ಕಳಿಗೆ (ವಿವಿಕೆ) ಫೌಂಡೇಶನ್ ವತಿಯಿಂದ ಉಚಿತವಾಗಿ ಐಎಎಸ್, ಕೆಎಎಸ್, ಕೊಚಿಂಗ್ ಕ್ಲಾಸ್ ನಡೆಸಲು ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.ಆರ್.ಸಿ.ಬಿ ಕಪ್ಪು ಮಹಿಳೆಯರು ಹೇಗೆ ಗೆದ್ದರೋ ಹಾಗೆ ವೀಣಾ ಮೇಡಂ ಅವರಿಗೆ ಟಿಕೆಟ್ ನೀಡಿದರೆ ನಾವು ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಮಾತನಾಡಿದರು.ಜಿಲ್ಲೆಯ ಮನೆ ಮಗಳಾಗಿ ಹಾಗೂ ಹುನಗುಂದ ತಾಲೂಕಿನ ಸೊಸೆಯಾಗಿ ಹಳ್ಳಿ ಹಳ್ಳಿಗೆ ಅಡ್ಡಾಡಿ ಪಕ್ಷವನ್ನ ಸಂಘಟಿಸಿದ್ದಲ್ಲದೆ ವಿವಿಕೆ ಫೌಡೇಶನ್ ವತಿಯಿಂದ ಹಲವಾರು ಸಮಾಜ ಸೇವೆ, ನೊಂದವರ ಬಾಳಿಗೆ ಬೆಳಕಾಗಿ ಮಹಿಳೆಯರಿಗೆ ಸ್ಪೂರ್ತಿಯ ಚೈತನ್ಯದ ಚಿಲುಮೆಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮಹಿಳೆಯರಿಂದ ಒಂದು ವಿನಂತಿ ವೀಣಾ ಕಾಶಪ್ಪನವರಿಗೆ ಟಿಕೆಟ ನೀಡಿ.ಬಾಗಲಕೋಟ ಜಿಲ್ಲೆಯವರಿಗೆ ಮಾತ್ರ ಪ್ರಥಮ ಆದ್ಯತೆ ನೀಡಿ. ಬೇರೆ ಜಿಲ್ಲೆ ಯವರಿಗೆ ಟಿಕೆಟ್‌ ನೀಡಬಾರದು ಒಂದು ವೇಳೆ ಟಿಕೆಟ ನೀಡಿದರೆ ಜಿಲ್ಲೆಯ ಎಲ್ಲಾ ಮಹಿಳೆಯರು ಮತವನ್ನು ಚಲಾಯಿಸುವುದಿಲ್ಲ ಎಂದು ಮುಖ್ಯ ಮಂತ್ರಿಗಳಿಗೆ ಪತ್ರಿಕಾ ಪ್ರಕಟಣೆ ಮೂಲಕ ವೀಣಾ ಕಾಶಪ್ಪನವರ ಬೆಂಬಲಿಗರು ಹೇಳಿಕೆಯಲ್ಲಿ ಹೇಳಿದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್.ವಾಯ್.ಕಿಳ್ಳಿ. ಇಲಕಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button