ಜುಲೈ 31 ರಂದು ಪತ್ರಿಕಾ ದಿನಾಚರಣೆ.
ಕೂಡ್ಲಿಗಿ ಜುಲೈ.29

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಜುಲೈ 31ರಂದು ಸೋಮವಾರ ಪಟ್ಟಣದ ಹಿರೇಮಠ ಕಲ್ಯಾಣ ಮಂಟಪದಲ್ಲಿ ಪತ್ರಿಕಾ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಮಂಜು ಮಯೂರ ತಿಳಿಸಿದ್ದಾರೆ. ಕಾರ್ಯಕ್ರಮವು ಅಂದು ಬೆಳಿಗ್ಗೆ 11:00 ಗಂಟೆಗೆ ಪ್ರಾರಂಭವಾಗಲಿದ್ದು ಶಾಸಕರಾದ ಡಾ” ಎನ್. ಟಿ. ಶ್ರೀನಿವಾಸ್ ಉಧ್ಘಾಟಿಸುವರು. ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಷ” ಬ್ರ” ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿಗಳು. ಮತ್ತು ಶ್ರೀ ಐಮಾಡಿ ಶರಣಾರ್ಯರು. ವಹಿಸುವರು. ಮುಖ್ಯ ಅತಿಥಿಗಳಾಗಿ ಮೊಳಕಾಲ್ಮೂರು ಶಾಸಕರಾದ ಎನ್. ವೈ. ಗೋಪಾಲಕೃಷ್ಣ ಹಾಗೂ ವಿಜಯನಗರ ಜಿಲ್ಲಾ ಕಾನಿಪ ಅಧ್ಯಕ್ಷ ಸತ್ಯನಾರಾಯಣ. ಕಾರ್ಯದರ್ಶಿ ಕೆ ಲಕ್ಷ್ಮಣ. ರಾಜ್ಯ ಸಮಿತಿ ಸದಸ್ಯ ಪಿ ವೆಂಕೋಬನಾಯಕ. ಟಿ ಜಗದೀಶ್ ತಹಸೀಲ್ದಾರರು. ವೈ ರವಿಕುಮಾರ್ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯಿತಿ. ಮಲ್ಲೇಶಪ್ಪ ಮಲ್ಲಾಪುರ ಡಿವೈಎಸ್ಪಿ. ವಸಂತ್ ಅಸೋದೆ ಸಿ ಪಿ ಐ. ಫಿರೋಜ್ ಖಾನ್ ಮುಖ್ಯ ಅಧಿಕಾರಿ ಪಟ್ಟಣ ಪಂಚಾಯಿತಿ. ಪಿ ಪ್ರದೀಪ್ ಕುಮಾರ್ ತಾಲೂಕು ವೈದ್ಯಾಧಿಕಾರಿ. ಪಿ ಶಿವರಾಜ್ ತಾಲೂಕು ಅಧ್ಯಕ್ಷರು ಕ.ರಾ.ಸ.ನೌ. ಸಂಘ. ಇತರರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ