ಗ್ರಾಮಸ್ಥರಿಂದ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ತಲೆಯ ಮೇಲೆ ಇಟ್ಟುಕೊಂಡು ಉಪವಾಸ ಧರಣಿ ಸತ್ಯಾಗ್ರಹ.

ತಿಳಗೂಳ ಮಾರ್ಚ್.22

ದೇವರ ಹಿಪ್ಪರಗಿ ತಾಲೂಕಿನ ಕೆರುಟಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತಿಳಗೂಳ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ…! ಗ್ರಾಮಸ್ಥರಿಂದ ಗ್ರಾಮ ಪಂಚಾಯಿತಿಗೆ ಬೀಗ ಮುದ್ರೆ ಹಾಕಿ ತಲೆಯ ಮೇಲೆ ಕಲ್ಲು ಇಟ್ಟುಕೊಂಡು ಉಪವಾಸ ಧರಣಿ ಸತ್ಯಾಗ್ರಹ…!! ತಿಂಗಳಾದ್ರು ಬರ್ತಾ ಇಲ್ಲ ನಲ್ಲಿ ನೀರು.,? ತಿಂಗಳುಗಳೇ ಕಳೆದರೂ ಗ್ರಾಮ ಪಂಚಾಯಿತಿಗೆ ಬಾರದ ಅಭಿವೃದ್ಧಿ ಅಧಿಕಾರಿಗಳು, ತಿಳಗೂಳ ಗ್ರಾಮದ ನೆರವಿಗೆ ಬರ್ತಾರಾ ಶಾಸಕ ರಾಜುಗೌಡ ಪಾಟೀಲ್, ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ತಿಳಗೂಳ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ .ತಿಳಗೂಳ ಗ್ರಾಮದಲ್ಲಿ ತಿಂಗಳು ಕಳೆದರೂ ಯಾವುದೇ ನಲ್ಲಿಗಳಲ್ಲಿ ನೀರು ಬರುತ್ತಾ ಇಲ್ಲ. ಗ್ರಾಮದ ಎರೆ ಹೋಲದಲ್ಲಿ ಸರ್ಕಾರದಿಂದ ಎರಡು ಬಾವಿಗಳನ್ನು ನಿರ್ಮಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ.ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎನ್ನುವಂತಾಗಿದೆ. ಎರಡು ಬಾವಿಗಳಲ್ಲಿ ನೀರು ತುಂಬಿರುತ್ತದೆ ಎರಡು ಬಾವಿಗಳ ಪೈಪ್ಲೈನ್ ಒಡೆದು ಹೋಗಿ ಸುಮಾರು 4 ರಿಂದ 5 ವರ್ಷಗಳು ಗತಿಸಿದರೂ ಯಾವೊಬ್ಬ ಅಧಿಕಾರಿಯೂ ಸಹ ಇತ್ತ ಕಡೆ ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.ಗ್ರಾಮಸ್ಥರಿಂದ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ತಲೆಯ ಮೇಲೆ ಕಲ್ಲು ಇಟ್ಟುಕೊಂಡು ಉಪವಾಸ ಧರಣಿ ಸತ್ಯಾಗ್ರಹ ಕೈಗೊಂಡಿದ್ದು.ಈ ಕೆಳಗಿನ ಬೇಡಿಕೆಗಳು1) ಕೂಡಲೇ ಕುಡಿಯುವ ನೀರಿನ ಪೂರೈಕೆ ಮಾಡಬೇಕು ಮತ್ತು ಎರೆ ಹೋಲದಲ್ಲಿ ಇರುವ ಎರಡು ಬಾವಿಗಳ ಪೈಪ್ಲೈನ್ ಮಾಡಬೇಕು.2)ಈ ಭ್ರಷ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಸ್ಪೆಂಡ್ ಮಾಡಬೇಕು.3)15 ನೇ. ಹಣಕಾಸು ಸಂಪೂರ್ಣ ತನಿಖೆ ಆಗಬೇಕು, ಕೊಳ್ಳೆ ಹೊಡೆದ ಹಣವನ್ನು ಸರ್ಕಾರಕ್ಕೆ ಮರಳಿ ತುಂಬಿಸಬೇಕು.4) ಎಸ್ಸಿ ಎಸ್ಟಿ ವಾರ್ಡ್ ಗಳಲ್ಲಿ ಸಿಸಿ ರಸ್ತೆಗಳು ನಿರ್ಮಾಣ ಮಾಡಬೇಕು.5) ಪಂಚಾಯಿತಿಯಲ್ಲಿ ಇರುವ ಕಸದ ವಾಹನವನ್ನು ಪ್ರತಿ ಹಳ್ಳಿಗಳಿಗೆ ಕಳಿಸಬೇಕು.6) ಶುದ್ಧ ಕುಡಿಯುವ ನೀರಿನ ಘಟಕ ಚಾಲನೆ ಮಾಡಬೇಕು . ಈ ಎಲ್ಲಾ ಬೇಡಿಕೆಗಳನ್ನು ಇಡೆರುವರೆಗೂ ಧರಣಿ ಸತ್ಯಾಗ್ರಹ ಹಿಂದೆ ತೆಗೆದು ಕೊಳ್ಳುವುದಿಲ್ಲ ಎಂದು ಗ್ರಾಮದ ಮುಖಂಡರಾದ ವಿಠೋಬಾ ನಾಟೀಕಾರ, ನಿತ್ಯಾನಂದ ಕತ್ತಿ, ಮಾಂತಪ್ಪ ಸಂದಿಮನಿ, ದಾನೇಶ ಕೇಸರಿ, ಶರಣಪ್ಪ ಗದ್ದಗಿ, ಮುತ್ತು ಬಯ್ಯಾರ,ರಾಜು ಸಂದಿಮನಿ, ಸುಸಿಲಬಾಯಿ ಮಾದರ, ಸೀತಮ್ಮ ಗದ್ದಲಮಾರಿ,ರಾಮನಗೌಡ ಯಾಳವಾರ,ಮಾಂತಪ್ಪ ಗುಡಿಸಲಮನಿ , ಸಂತೋಷ್ ದೊಡಮನಿ, ಆನಂದ ಕಲಕೇರಿ, ದ್ಯಾವಪ್ಪ ದೊಡಮನಿ ಇನ್ನೂ ಗ್ರಾಮದ ಹಿರಿಯರು ಕಿರಿಯರು ಯುವಕರು ಮುಂತಾದವರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button