ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ – ಸಿಂದಗಿಯಲ್ಲಿ ಪ್ರತಿಭಟನೆ.

ಸಿಂದಗಿ ಮೇ.17

ವಿಜಯಪುರ ಜಿಲ್ಲೆಯ ತಳವಾರ ಪರಿವಾರ ಹಿತರಕ್ಷಣಾ ಸಮಿತಿ ವತಿಯಿಂದ, ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ ಕೊಲೆಯನ್ನು ಖಂಡಿಸಿ ಸಿಂದಗಿ ತಹಶಿಲ್ದಾರರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಹೋರಾಟಗಾರರಾದ ಶಿವಾಜಿ ಮೆಟಗಾರ ಅಂಜಲಿ. ಅಂಬಿಗೇರ ಹತ್ಯೆ ಮಾಡಿದ ದುಷ್ಕ್ರಮಿಗೆ ಉಗ್ರವಾದ ಶಿಕ್ಷೆಯನ್ನು ವಿಧಿಸಿ ಇಂತಹ ಘಟನೆಗಳು ರಾಜ್ಯದಲ್ಲಿ ಮತ್ತೆ ಮರುಕಳಿಸ ದಂತಾಗಬಾರದು ಎಂದು ಎಚ್ಚರಿಸಿದರು.

ಹಾಗೂ ತಹಶಿಲ್ದಾರರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು, ತಳವಾರ ಸಮಾಜದ ಮುಖಂಡರಾದ ಮಡಿವಾಳ. ನಾಯ್ಕೋಡಿ ಮಾತನಾಡಿ ಅಂಜಲಿ. ಅಂಬಿಗೇರ ಕುಟುಂಬಕ್ಕೆ ಅವಳೇ ಆಸರೆಯಾಗಿದ್ದು, ತಂದೆ,ತಾಯಿ ಇಲ್ಲದೆ ಅಜ್ಜಿ ಮತ್ತು ಸಹೋದರಿಯೊಂದಿಗೆ ಜೀವನ ಸಾಗಿಸುತ್ತಿದ್ದಳು ಮೃತ ಅಂಜಲಿ ಯ ಕುಟುಂಬಕ್ಕೆ ಸರ್ಕಾರವು ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಂದಗಿ ಪುರಸಭೆಯ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಹಣಮಂತ. ಸುಣಗಾರ, ಪುರಸಭೆಯ ಸದಸ್ಯರಾದ ಬಸವರಾಜ. ಯರನಾಳ, ಗೋಲ್ಲಾಳ ಬಂಕಲಗಿ, ಅನೀಲ.ಕಡಕೋಳ, ಸಂತೋಷ.ಹರನಾಳ ಮಲ್ಲು.ಕುರಿ,ನಾಗು.ತಳವಾರ,ಪರಶುರಾಮ.ಕೋಟಾರಗಸ್ತಿ,ವಿಜಯಕುಮಾರ.ಯಾಳವಾರ,ಈರಣ್ಣ.ಕುರಿ,ರಾಜಕುಮಾರ.ನಾಯ್ಕೋಡಿ,ಹಣಮಂತ.ಹಿಪ್ಪರಗಿ, ಮಲ್ಲು.ನಾಯ್ಕೋಡಿ, ಕುಮಾರ.ನಾಯ್ಕೋಡಿ,ಕಂಟೆಪ್ಪ.ಚೋರಸ್ತಿ, ಅಮೋಗಿ.ಜೈನಾಪುರ,ಭೂತಾಳಿ.ನಾಯ್ಕೋಡಿ ಸೇರಿದಂತೆ ಅನೇಕರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ. ದೇವರ ಹಿಪ್ಪರಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button