ಶಿಕ್ಷಕರ ನಿವೃತ್ತಿ ಜೀವನಕ್ಕೆ ಶುಭವಾಗಲಿ.

ಯಲಗೋಡ ಮೇ.31

ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮದ ಶಿಕ್ಷಕರು ಸೇವೆ ನಿರಂತರ ಪ್ರಾಮಾಣಿಕತೆ ತಮ್ಮ ಜೀವನ ಶಾಲೆಯ ಮಕ್ಕಳ ಜೊತೆ ಕಳೆದು ಒಳ್ಳೆಯ ಪ್ರಾಮಾಣಿಕ ಗುರುಗಳಾಗಿ ಮಕ್ಕಳಿಗೆ ಒಳ್ಳೆಯ ವಿದ್ಯೆ ಅಭ್ಯಾಸ ನೀಡಿ ಅವರಿಗೆ ಒಂದು ಹಂತಕ್ಕೆ ಮುಟ್ಟಿಸುವ ಕರ್ತವ್ಯ ಶಿಕ್ಷಕರ ಪಾತ್ರ ಮುಖ್ಯ, ಅದನ್ನು ಈ ಶಿಕ್ಷಕರು ಮಾಡಿ ತೋರಿಸಿದ್ದಾರೆ, ಈ ಶಿಕ್ಷಕರ ವಯೋನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಎಲ್ಲಾ ಶಿಕ್ಷಕರ ಬಳಗದೂಂದಿಗೆ ಅವರನ್ನು ಗೌರವಿಸಿ ಶುಭಹಾರೈಸಿದರುಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲಗೋಡದಲ್ಲಿ ಇಂದು ತಮ್ಮ ಸರಕಾರಿ ಸೇವೆಯಿಂದ ವಯೋನಿವೃತ್ತಿ ಗೊಳ್ಳುತ್ತಿರುವ ಹಾಗೂ ಬೀಳ್ಕೂಡುಗೆ ಸಮಾರಂಭ ನಡೆಯಿತು,ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಯಲಗೋಡಶ್ರೀ ಏ ಎಚ್ ಮುಲ್ಲಾ ಮುಖ್ಯ ಗುರುಗಳು ಹಾಗೂ ಶ್ರೀ ಎನ್ ಎಸ್ ಲಮಾಣಿ ಸಹಶಿಕ್ಷಕರು ಹಾಗೂ ಶ್ರೀ ಸಿ ಬಿ ಬೂದಿಹಾಳ ಸಹ ಶಿಕ್ಷಕರು ಶ್ರೀ ವೆಂಕಟೇಶ್ವರ ಪ್ರೌಢ ಶಾಲೆ ಯಲಗೋಡ ಹಾಗೂ ಜಿ ಎಂ ಗುಬ್ಬೇವಾಡ ಪ್ರಭಾರಿ ಮುಖ್ಯ ಗುರುಗಳು ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಯಲಗೋಡ ಇವರಿಗೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಯಲಗೋಡ ವತಿಯಿಂದ ಸತ್ಕಾರ ಸಮಾರಂಭ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಮಹಾಂತೇಶ ಕೂಟನೂರ ಯಲಗೋಡ ಸಿ ಆರ್ ಸಿ ಶ್ರೀ ವಿರೇಶ ಕರಕಳ್ಳಿಮಠ, ಎಲ್ ಪಿ ಎಸ್ ಭಜಂತ್ರಿ ಶಾಲೆಯ ಸೋಮಜಾಳ ಪ್ರಭಾರಿ ಮುಖ್ಯ ಗುರುಗಳಾದ ಶಿಕ್ಷಕರಾದ ಶ್ರೀ ಸಿ ಜಿ ಕಾಂಬಳೆ ಶ್ರೀ ಎ ಎಸ್ ಕುರಿ. ಶ್ರೀಸುರೇಶ ಬಡಿಗೇರ. ಶ್ರೀ ಮಲ್ಲಿಕಾರ್ಜುನ ಅಂಕಲಗಿ. ಶ್ರೀ ರಾಘವೇಂದ್ರ ಉಂಡಿಗೇರ. ಶ್ರೀ ದಸ್ತಗಿರಿಸಾಬ ಬಗಲಿ ಶ್ರೀ ಮಂಗಳಾಬಾಯಿ ಅಲ್ಮದ. ಕುಮಾರಿ ವಿದ್ಯಾವತಿ ಹನುಮಂತರೆಡ್ಡಿ. ಹಾಗೂ ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿ ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ. ದೇವರ ಹಿಪ್ಪರಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button