ಅಹಿಂದ ಚಳುವಳಿ ಉದ್ದೇಶ ಸರ್ವರಿಗೂ ಸಮಪಾಲು ಸಮಬಾಳು – ತರೀಕೆರೆ ಎನ್. ವೆಂಕಟೇಶ್.
ತರೀಕೆರೆ ಜೂನ್.14

ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ಮತ್ತು ಮಹಾತ್ಮ ಪ್ರೊಫೆಸರ್ ಬಿ ಕೃಷ್ಣಪ್ಪ ರವರ ಕನಸು ಶೋಷಿತರು ಆಳುವ ವರ್ಗ ಆಗಬೇಕು ಎಂದು ಕ.ದ.ಸಂ.ಸ. ರಾಜ್ಯ ಸಂಘಟನಾ ಸಂಚಾಲಕ ಅಹಿಂದ ಚಳುವಳಿಯ ರಾಜ್ಯ ಜಂಟಿ ಸಂಚಾಲಕರಾದ ತರೀಕೆರೆ ವೆಂಕಟೇಶ್ ಹೇಳಿದರು. ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಚಿಕ್ಕಮಂಗಳೂರು ಜಿಲ್ಲೆಯ ಪದಾಧಿಕಾರಿಗಳ. ಕಾರ್ಯಕರ್ತರ,ಪ್ರಮುಖರ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಹೇಳಿದರು. ಪರಿಸರದಲ್ಲಿ ಭೇದವಿಲ್ಲ ಎಲ್ಲಾ ಜಾತಿ ಧರ್ಮದವರಿಗೂ ಸಹ ತಾರತಮ್ಯವಿಲ್ಲದೆ ಅಸಮಾನತೆ ಇಲ್ಲ ಆದರೆ ಪ್ರಕೃತಿಯಿಂದ ಬದುಕುತ್ತಿರುವ ಮನುಷ್ಯರಲ್ಲಿ ಜಾತಿ ಭೇದ ಅಸಮಾನತೆ ಇದೆ. ಆದ್ದರಿಂದ ಎಲ್ಲಾ ಜಾತಿ ಧರ್ಮದವರು, ಶೋಷಿತರು , ಅಹಿಂದ ಚಳುವಳಿಯಲ್ಲಿ ಒಂದಾಗಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಸಂಘಟಿತರಾಗೋಣ ಎಂದು ಹೇಳಿದರು. ಮಹಿಳಾ ಘಟಕದ ರಾಜ್ಯ ಸಂಚಾಲಕಿಯಾದ ಭವಾನಿ ಮಾತನಾಡಿ ಅಹಿಂದ ಸಂಘಟನೆ ಬೇರೆ ಬೇರೆ ಸಂಘಟನೆಗಿಂತ ಭಿನ್ನವಾಗಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಹಿರಿಯರು ಮಾರ್ಗದರ್ಶಕರು ಎನಿಸಿಕೊಂಡವರು ನಮ್ಮ ಸಮುದಾಯದ ಶೋಷಣೆಗೆ ಮುಂದಾಗಿದ್ದಾರೆ. ಆದರೆ ಈ ಅಹಿಂದ ಸಂಘಟನೆಯು ಉತ್ತಮ ಸಂಘಟನೆಯಾಗಿದ್ದು ಇದು ಪೂರಕ ದಾರಿಯಲ್ಲಿ ಸಾಗುವುದಕ್ಕೆ ಮುನ್ನುಡಿಯಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಹಿಂದುಳಿದ ಕುರುಬ ಸಮಾಜದ ಮುಖಂಡರಾದ ಹಾಲು ವಜ್ರಪ್ಪ ನವರು ಮಾತನಾಡಿ ಅಹಿಂದ ಚಳುವಳಿ ಯಾವತ್ತಿಗೂ ಇಂದೇ ಉಳಿಯಬಾರದು ಕೈಯಿಂದ ಸಂಘಟನೆ ಮತ್ತು ಚಳುವಳಿಯನ್ನು ನಾವೆಲ್ಲರೂ ಪ್ರಾಮಾಣಿಕವಾಗಿ ಮುನ್ನಡೆಸಿಕೊಂಡು ಹೋಗಬೇಕಾಗಿದೆ, ಇದರಿಂದ ಮುಂದಿನ ದಿನಗಳಲ್ಲಿ ಅಹಿಂದ ಚಳುವಳಿಗಾರರಿಗೆ ರಾಜಕೀಯ ಸ್ಥಾನಮಾನ ಸಿಗುತ್ತದೆ. ತೆಲುಗು ರಾಜಕಾರಣಿಗಳ ಕುತಂತ್ರದಿಂದ ಅಹಿಂದ ಚಳುವಳಿಗೆ ಪರ್ಯಾಯವಾಗಿ ರೂಪ ಪಡೆಯುವುದಕ್ಕೆ ಪ್ರಯತ್ನಿಸುತ್ತಿದ್ದು ಇದಕ್ಕೆ ನಾವು ಬಲಿಯಾಗದೆ ಅಹಿಂದ ಚಳುವಳಿಗೆ ಗಟ್ಟಿತನ ಪ್ರದರ್ಶಿಸಬೇಕಾಗಿದೆ ಎಂದು ಹೇಳಿದರು. ನಂತರ ಮುಸ್ಲಿಂ ಸಮಾಜದ ಮುಖಂಡರಾದ ಆದಿಲ್ ಪಾಷಾ ಮಾತನಾಡಿ ವೈಯುಕ್ತಿಕ ಆಸೆ ಮತ್ತು ಪದವಿಗಾಗಿ ಹಂಬಲಿಸುವವರು ಈ ಅಹಿಂದ ಚಳುವಳಿಯಲ್ಲಿ ಭಾಗವಹಿಸುವುದು ಬೇಡ ಎಂದರು. ಅಹಿಂದ ಸಂಘಟನೆಗೆ ಉತ್ತಮ ಮನಸ್ಸಿನಿಂದ ಮತ್ತು ಮುಕ್ತವಾಗಿ ಹೋರಾಟ ಮಾಡುವವರು ಬರಬೇಕಾಗಿದೆ ಎಂದರು. ಅನಂತನ ಮಾತನಾಡಿದ ವಕೀಲರಾದ ನಾಗರಾಜ್ ಮಾತನಾಡಿ ಈ ಹಿಂದೆ ಮೇಲ್ವರ್ಗದವರು ದಲಿತರ ಮೇಲೆ ಶೋಷಣೆ ಮಾಡುತ್ತಾ ಬಂದಿದ್ದಾರೆ, ಆದರೆ ಇದೀಗ ದಲಿತರೆ ದಲಿತರ ಮೇಲೆ ಶೋಷಣೆ ಮಾಡುವಂತಹ ಪರಿಸ್ಥಿತಿ ಬಂದಿದೆ. ನಮ್ಮ ದಲಿತ ಮುಖಂಡರು ಇದನ್ನು ಮನನ ಮಾಡಿ ಕೊಳ್ಳಬೇಕಾಗಿದೆ ಎಂದು ಹೇಳಿದರು. ಬಂಜಾರ ಬಳಗದ ಅಧ್ಯಕ್ಷರಾದ ಬಿ ಕೃಷ್ಣನಾಯಕ ಮಾತನಾಡಿ ಅಹಿಂದ ಚಳುವಳಿಯಿಂದ ರಾಜ್ಯ ಮುಖ್ಯಮಂತ್ರಿ ಆಗಲು ಸಿದ್ದರಾಮಯ್ಯರವರಿಗೆ ಸಂಘಟನೆ ಪೂರಕವಾಗಿತ್ತು ಎಂದು ಹೇಳಿದರು. ಅಹಿಂದ ಮುಖಂಡರಾದ ಶೇಖರ್ ಮತ್ತು ಲೋಕೇಶ್ ರವರು ಮಾತನಾಡಿದರು, ಇದೇ ಸಂದರ್ಭದಲ್ಲಿ ಕುರುಬ ಸಮಾಜದ ಜಿಲ್ಲಾ ಸಂಚಾಲಕರಾಗಿ ಹಾಲು ವಜ್ರಪ್ಪ, ತಾಲೂಕು ಸಂಚಾಲಕರಾಗಿ ವಕೀಲರಾದ ನಾಗರಾಜ್, ಮತ್ತು ಅಲ್ಪಸಂಖ್ಯಾತ ಮುಸಲ್ಮಾನ್ ಸಮಾಜದ ಜಿಲ್ಲಾ ಸಂಚಾಲಕರಾಗಿ ನರಸಿಂಹರಾಜಪುರದ ಅಬ್ದುಲ್ ರೆಹಮಾನ್, ತರೀಕೆರೆ ತಾಲೂಕು ಸಂಚಾಲಕರಾಗಿ ಆದಿಲ್ ಪಾಷ, ಮತ್ತು ಚೆಲುವಾದಿ ಸಮಾಜದ ಜಿಲ್ಲಾ ಸಂಚಾಲಕರಾಗಿ, ನರಸಿಂಹರಾಜಪುರದ ರಾಜೇಶ್, ಜಿಲ್ಲಾ ಬಂಜಾರ ಸಂಘದ ಸಂಚಾಲಕರಾಗಿ ಹೊಸಳ್ಳಿ ತಾಂಡ್ಯದ ಹೆಚ್ ಎಂ ಮಂಜುನಾಥ್, ತರೀಕೆರೆ ತಾಲೂಕು ಸಂಚಾಲಕರಾಗಿ ಹೆಚ್. ಈ ಪ್ರದೀಪ್, ಮಾದಿಗ ಸಮಾಜದ ತಾಲೂಕು ಸಂಚಾಲಕರಾಗಿ ನಾಗೇನಹಳ್ಳಿ ಬಸವರಾಜ್, ಕಸಬಾ ಹೋಬಳಿ ಸಂಚಾಲಕರಾಗಿ ಬೆಲೆನಹಳ್ಳಿ ಎನ್ ಸಿದ್ದಪ್ಪ, ತರೀಕೆರೆ ನಗರ ಸಂಚಾಲಕರಾಗಿ ಯೋಗೀಶ್, ಮಹಿಳಾ ಘಟಕದ ತರೀಕೆರೆ ನಗರ ಸಂಚಾಲಕಿಯಾಗಿ ರಮ್ಯಾ, ಹಾಗೂ ಚಾಕೋನಹಳ್ಳಿ ಗ್ರಾಮ ಸಂಚಾಲಕಿಯಾಗಿ ಶೋಭಾ, ಎಲುಗೆರೆ ಗ್ರಾಮ ಸಂಚಾಲಕಿಯಾಗಿ ರೇಣುಕಾಬಾಯಿ, ಹಾಗೂ ಬೈರನಾಯಕನಹಳ್ಳಿ ಗ್ರಾಮ ಸಂಚಾಲಕನಾಗಿ ಗುರುಮೂರ್ತಿ, ನರಸಿಂಹ ರಾಜಪುರ ನಗರ ಸಂಚಾಲಕರಾಗಿ ಪಿಕಪ್ ಚಂದ್ರು, ಬನ್ನೂರು ಗ್ರಾಮ ಸಂಚಾಲಕರಾಗಿ ನಾರಾಯಣ, ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತರೀಕೆರೆ ಎನ್. ವೆಂಕಟೇಶ್. ಚಿಕ್ಕ ಮಗಳೂರು.