ಪ್ರತಿ ಮನೆಯ ಮುಂದೆ ಸಸ್ಯ ನಾಟಿ ಮಾಡಿ ಪರಿಸರ ಸಂರಕ್ಷಿಸಿ – ವಿ. ರವಿಕುಮಾರ್.
ಕೂಡ್ಲಿಗಿ ಜೂನ್.05
![](https://i0.wp.com/sknewskannada.in/wp-content/uploads/2024/06/IMG-20240605-WA00451.jpg?resize=708%2C531&ssl=1)
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಎನ್.ಎಚ್ 50 ರ ಪಕ್ಕದಲ್ಲಿ ಬರುವ ಶ್ರೀ ಬೋರಮ್ಮ ತಮ್ಮಪ್ಪ ಪ್ರೌಢ ಶಾಲೆಯ ಆವರಣದಲ್ಲಿ ಈ ದಿನ ವಿಶ್ವ ಪರಿಸರ ದಿನದ ಅಂಗವಾಗಿ ಕೂಡ್ಲಿಗಿ ಪಟ್ಟಣದ ಎಸ್.ಬಿ.ಟಿ.ಎಂ ಪ್ರೌಢಶಾಲಾ ಆವರಣದಲ್ಲಿ ಸಸಿ ನಾಟಿ ಮಾಡುವ ಮೂಲಕ ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ವಿ. ರವಿಕುಮಾರ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರತಿದಿನ ಜನರು ವಿವಿಧ ಕಾರಣಗಳಿಗಾಗಿ ಗಿಡ ಮರಗಳನ್ನು ಕಡಿಯುತ್ತಿರುವುದರಿಂದ ಪರಿಸರ ನಾಶವಾಗುತ್ತಿದ್ದು ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ ಹೀಗೆ ಮುಂದುವರೆದರೆ ನಾವು ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆಯನ್ನು ಅನುಭವಿಸ ಬೇಕಾಗುತ್ತದೆ.
![](https://i0.wp.com/sknewskannada.in/wp-content/uploads/2024/06/IMG-20240605-WA00471.jpg?resize=708%2C531&ssl=1)
ಆದ್ದರಿಂದ ಸಾಧ್ಯವಾದಷ್ಟು ಗಿಡ ಮರಗಳನ್ನು ಬೆಳಸಿ ಪೋಷಿಸಲು ಸಾಧ್ಯವಾಗುವಂತಹ ಸ್ಥಳಗಳಾದ ಶಾಲಾ ಆವರಣ, ಸರ್ಕಾರಿ ಕಚೇರಿಗಳಲ್ಲಿ, ರಸ್ತೆ ಬದಿಗಳಲ್ಲಿ ಕೆರೆಯ ಹಿನ್ನೀರು ಪ್ರದೇಶ ಅಚ್ಚುಕಟ್ಟು ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಿ ಪರಿಸರವನ್ನು ಸಂರಕ್ಷಿಸುವ ಕುರಿತು ತಿಳಿಸಿದರು, ಹಾಗೂ ಪ್ರತಿಯೊಬ್ಬರು ತಮ್ಮ ಮನೆಗಳ ಹತ್ತಿರ ಸಸ್ಯಗಳನ್ನು ನಾಟಿ ಮಾಡಿ ಪರಿಸರವನ್ನು ಉಳಿಸಿ ಗಿಡ ಮರಗಳನ್ನು ಬೆಳೆಸ ಬೇಕೆಂದು ತಿಳಿಸಿದರು. ಈ ಸಮಯದಲ್ಲಿ ಸಾಮಾಜಿಕ ಅರಣ್ಯ ಇಲಾಖೆ RFO ಶ್ರೀಮತಿ ಲತಾ KJ, ಮತ್ತು ಸಾಮಾಜಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಶಾಲೆಯ ಮುಖ್ಯ ಗುರುಗಳಾದ ಶ್ರೀ ಬಸವರಾಜ್ ಎಂ, BEd ತರಬೇತಿಯ ವಿದ್ಯಾರ್ಥಿಗಳು, ಶಾಲಾ ಮಕ್ಕಳು, ತಾಲೂಕ ಐ.ಇ.ಸಿ ಸಂಯೋಜಕರು ಹಾಜರಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ ಕೂಡ್ಲಿಗಿ.