ರಾಜ್ಯ ಮಟ್ಟದ ಜಂಟಿ ಸಮಾಲೋಚನಾ ಸಮಿತಿಗೆ ಆಯ್ಕೆ.
ಕೊಟ್ಟೂರು ಜು.16

ಕರ್ನಾಟಕ ಸರ್ಕಾರದ ರಾಜ್ಯಮಟ್ಟದ ಜಂಟಿ ಸಮಾಲೋಚನಾ ಸಮಿತಿಯನ್ನು ಎರಡು ವರ್ಷಗಳ ವರೆಗೆ ಪುನರ್ ರಚಿಸಿ ಆದೇಶ ಹೊರಡಿಸಲಾಗಿದೆ. ಈ ಹಿಂದೆ ರಚಿಸಿದ ಸಮಿತಿಯ ಅವಧಿ ದಿನಾಂಕ ೦೫-೧೨-೨೦೨೧ ಕ್ಕೆ ಪೂರ್ಣ ಗೊಂಡಿರುವುದರಿಂದ ಸಮಿತಿಗೆ ನೂತನವಾಗಿ ಸದಸ್ಯ ಕಾರ್ಯದರ್ಶಿಗಳೂ ಸೇರಿದಂತೆ ನೂತನ ಸದಸ್ಯರನ್ನು ನೇಮಕ ಗೊಳಿಸಿ ರಾಜ್ಯ ಮಟ್ಟದ ಜಂಟಿ ಸಮಾಲೋಚನಾ ಸಮಿತಿಯನ್ನು ಪುನರ್ ರಚಿಸಲಾಗಿದೆ. ಈ ಸಮಿತಿಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರ ಆಪ್ತ ಸಹಾಯಕರೂ ಹಾಗೂ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘದ ರಾಜ್ಯ ಅಧ್ಯಕ್ಷರೂ ಆದ ಬಿ. ದೊಡ್ಡಬಸಪ್ಪ ರೆಡ್ಡಿ ಅವರನ್ನು ಸೇರಿಸಿ ಸರ್ಕಾರ ಆದೇಶಿಸಿದೆ. ಸರ್ಕಾರದ ಆದೇಶ ಸಂಖ್ಯೆ ಜಿಎಡಿ ೭ ಡಿಎಸ್ಡಬ್ಲ್ಯೂ ೬೯ ದಿನಾಂಕ ೧೯-೧೦-೧೯೭೨ ರಂತೆ ಈ ಜಂಟಿ ಸಮಾಲೋಚನಾ ಸಮಿತಿಯು ಎರಡು ವರ್ಷಗಳ ವರೆಗೆ ಅಥವಾ ಮುಂದಿನ ಆದೇಶದ ವರೆಗೆ ಕಾರ್ಯ ನಿರ್ವಹಿಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕರ್ನಾಟಕ ರಾಜ್ಯದ ರಾಜ್ಯ ಮಟ್ಟದ ಜಂಟಿ ಸಮಾಲೋಚನಾ ಸಮಿತಿಯಲ್ಲಿ ದೊಡ್ಡಬಸಪ್ಪ ರೆಡ್ಡಿ ಅವರು ಆಯ್ಕೆ ಯಾಗಿರುವುದು ಈ ಭಾಗದ ಜನರಿಗೆ ಸಂತಸವನ್ನು ಉಂಟು ಮಾಡಿದೆ. ಈ ಸಂದರ್ಭದಲ್ಲಿ ಕೊಟ್ರೇಶ್, ಅಂಜಿನಿ, ಪಿ ಚಂದ್ರಶೇಖರ್, ಪ್ರವೀಣ್, ಮಧು ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು.