ಕೊಟ್ಟೂರು ಪೋಲಿಸರ ಬಿರುಸಿನ ಕಾರ್ಯಾಚರಣೆ ಸರ ಕಳ್ಳನ ಬಂಧನ.

ಕೊಟ್ಟೂರು ಸ.08

ಪಟ್ಟಣದಲ್ಲಿ ಕೆಲವು ದಿನಗಳ ಹಿಂದೆ ಕಳ್ಳತನ ನಡೆದಿತ್ತು ದಿನಾಂಕ 7 ಸೆಪ್ಟೆಂಬರ್ 2024 ಬೆಳಿಗ್ಗೆ 7:30 ಕ್ಕೆ ತನಿಖಾಧಿಕಾರಿಗಳು ಮತ್ತು ಸಿಬ್ಬಂದಿಯವರು ಆರೋಪಿತನಾದ ಹೆಚ್ ಹನುಮಂತ ತಂದೆ ಕೊಲ್ಲಪ್ಪ 26 ವರ್ಷ ಬೋವಿ ಜನಾಂಗ ಗಾರೆ ಕೆಲಸ ಮಾಡುತ್ತಿದ್ದು ಈತನ ಊರು ಬೈರದೇವರಗುಡ್ಡ ಹಾಲಿವಾಸ ಕರಿಯಮ್ಮ ದೇವಸ್ಥಾನದ ಹತ್ತಿರ ಕರಿಯಮ್ಮ ಕಾಲೋನಿ, ಬಳ್ಳಾರಿ ನಗರ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾದ ಕೊಟ್ಟೂರು ಪೊಲೀಸ್ ಠಾಣೆ. ನೆಕ್ ಚೈನ್ ಹ್ಯಾಂಗಿಂಗ್ಸ್ ಉಂಗುರ ಜುಮಕಿ ಬೆಂಡೋಲೆಗಳು ಇನ್ನಿತರೆ ಎಲ್ಲಾ ಒಟ್ಟು 2,65,000 ರೂಪಾಯಿ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಜಪ್ತಿ ಪಡೆದು ಕೊಂಡಿರುತ್ತಾರೆ.

ಆರೋಪಿತನು ಈ ಪ್ರಕರಣಗಳಲ್ಲಿ ಹೆಚ್.ಬಿ.ಹಳ್ಳಿ ಪೊಲೀಸ್ ಠಾಣೆ ತುಮಕೂರು ನಗರ ಪೊಲೀಸ್ ಠಾಣೆ ಸಹ ಕಳ್ಳತನ ಮಾಡಿರುವುದಾಗಿ ಒಪ್ಪಿ ಕೊಂಡಿರುತ್ತಾನೆ. ಶ್ರೀಹರಿ ಬಾಬು ಐಪಿಎಸ್ ಪೊಲೀಸ್ ಅಧೀಕ್ಷಕರು ಮತ್ತು ಸಲೀಂ ಪಾಷಾ ಎ ಎಸ್ ಪಿ ವಿಜಯನಗರ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಮಲ್ಲೇಶಪ್ಪ ಮಲ್ಲಾಪುರ ಡಿ.ವೈ.ಎಸ್.ಪಿ ಕೂಡ್ಲಿಗಿ ಉಪ ವಿಭಾಗ ಮುಂದಾಳತ್ವದಲ್ಲಿ ಶ್ರೀ ವೆಂಕಟಸ್ವಾಮಿ ಸಿ.ಪಿ.ಐ ಕೊಟ್ಟೂರು ಶ್ರೀ ವಿಕಾಸ್ ಲಮಾಣಿ ಸಿ.ಪಿ.ಐ ಎಚ್.ಬಿ.ಹಳ್ಳಿ ರವರುಗಳ ನೇತೃತ್ವದಲ್ಲಿ ಕೊಟ್ಟೂರು ಪೊಲೀಸ್ ಠಾಣೆಯ ಪಿ.ಎಸ್.ಐ ಗೀತಾಂಜಲಿ ಸಿಂಧೇ ಮತ್ತು ಸಿಬ್ಬಂದಿ ವರ್ಗದವರಾದ ವೀರೇಶ್ ಬಸವರಾಜ್ ಶಶಿಧರ ವೈ ರೇವಣಸಿದ್ದಪ್ಪ ಕೊಟ್ಟೂರು ಕೂಡ್ಲಿಗಿ ಎಚ್.ಬಿ.ಹಳ್ಳಿ ಸಿಬ್ಬಂದಿ ವರ್ಗದವರು ಇದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button