ಕಲಕೇರಿ ಗ್ರಾಮದಲ್ಲಿ ಕಾರಹುಣ್ಣಿಮೆ ಹಬ್ಬವನ್ನು ಆಚರಣೆ ಮಾಡಿದರು.

ಕಲಕೇರಿ ಜೂನ್.22

ರೈತರ ಮುಖದಲ್ಲಿ ನಗು ಸಂತೋಷ ತುಂಬಿದ ರೈತರು ತಮ್ಮ ಎತ್ತುಗಳಿಗೆ ಮೈ ತೊಳೆದು ಬಣ್ಣ ಹಚ್ಚಿ ಎತ್ತುಗಳನ್ನು ಶೃಂಗಾರ ಮಾಡಿ ಎತ್ತುಗಳನ್ನು ಮೆರವಣಿಗೆ ಮಾಡುತ್ತಾ ಸಾಯಂಕಾಲ 6 ಗಂಟೆಗೆ ಅಗಸಿಯೊಳಗೆ ಎತ್ತುಗಳನ್ನು ಕರಿ ಹರಿಯುವ ಒಂದು ಸಂದರ್ಭ ಬಹಳ ವಿಜೃಂಭಣೆಯಿಂದ ಇವತ್ತು ರೈತರ ಮುಖದಲ್ಲಿ ಬಹಳ ನಗು ಸಂತೋಷ ಎರಡು ತುಂಬಿ ತುಳುಕಾಡುತ್ತದೆ ಎತ್ತುಗಳನ್ನು ಓಡಿಸುವಾಗ ಕೆಂಪು ಎತ್ತು ಮುಂದಾದರೆ ತೊಗರಿ ಶೇಂಗಾ ಕಡ್ಲಿ ಬೆಳೆ ಅದ್ದೂರಿ ಬೆಳೆ ಬರುತ್ತದೆ ಎಂದು ಅವರ ನಂಬಿಕೆ ಆನಂತರ ಬಿಳಿ ಎತ್ತು ಮುಂದಾದರೆ ಹತ್ತಿ ಬೆಳೆ ಜೋಳ ಬೆಳೆ ಎಂದು ಅವರ ಒಂದು ನಂಬಿಕೆ ರೈತ ಈ ದೇಶದ ಬೆನ್ನೆಲುಬು ರೈತ ಬೆಳೆದರೆ ನಾವೆಲ್ಲ ರೈತರು ಯಾವಾಗಲೂ ನಗು ನಗುತ್ತಾ ಶಾಂತಿಯಿಂದ ಇರಬೇಕು.

ಮಳೆ ಬೆಳೆ ಚೆನ್ನಾಗಿ ಆದರೆ ನಾವೆಲ್ಲರೂ ಈ ಭೂಮಿಯ ಮೇಲೆ ಅನ್ನ ತಿನ್ನುವುದು ಈ ದೇಶದ ಆಸ್ತಿ ರೈತ ಹಸಿರೇ ಉಸಿರು ಎಂದು ಅನೇಕ ಕಲಕೇರಿ ಗ್ರಾಮದ ರೈತರು ಗ್ರಾಮದ ಮುಖಂಡರು ಹಿರಿಯರು ಪ್ರತಿ ವರ್ಷದಂತೆ ಈ ವರ್ಷ ಕೂಡ ಸಮಸ್ತ ಊರಿನ ಎಲ್ಲಾ ರೈತರು ಬಾಂಧವರು ಹಿರಿಯರು ಯುವಕರು ಸೇರಿ ಕಾರಹುಣ್ಣಿಮೆಯ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಿದರು. ಊರಿನ ಹಿರಿಯರಾದ ಈ ಸಂದರ್ಭದಲ್ಲಿ ಮಲ್ಕಾಜಪಗೌಡ ಬಿರಾದಾರ ಇವರು ಕಾರಹುಣ್ಣಿಮೆ ಬಗ್ಗೆ ಈ ಸಂದರ್ಭದಲ್ಲಿ ತಿಳಿಸಿದರು. ವೀರಭದ್ರಪ್ಪ ಹೆಗ್ಗಣದೊಡ್ಡಿ. ಬಾಬಾ ದೇಶಮುಖ. ಸುಧಾಕರ್ ಅಡಿಕಿ. ಪ್ರಕಾಶ್ ಯರನಾಳ. ಅಪ್ಪು ದೇಸಾಯಿ. ಮಲ್ಲು ತಳವಾರ್. ಅನೇಕ ಊರಿನ ಹಿರಿಯರು ಯುವಕರು ಎಲ್ಲರೂ ಸೇರಿದಂತೆ ಕಾರಹುಣ್ಣಿಮೆ ಅದ್ದೂರಿಯಾಗಿ ಆಚರಿಸಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ ತಾಳಿಕೋಟೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button