ಚಿಟಿಗಿನಕೊಪ್ಪ ದತ್ತು ಗ್ರಾಮದಲ್ಲಿ – ಇಂದು ಎನ್.ಎಸ್.ಎಸ್ ಶಿಬಿರ.

ಬೇವೂರ ಜು.22

ಬೇವೂರಿನ ಪಿ ಎಸ್ ಸಜ್ಜನ ಕಲಾ ಮಹಾ ವಿದ್ಯಾಲಯದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಸಮೀಪದ ಚಿಟಗಿನಕೊಪ್ಪ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದು ದಿನಾಂಕ 22-7-24 ರ ಸೋಮವಾರ ದಂದು ಉದ್ಘಾಟನಾ ಸಮಾರಂಭ ಜರುಗಲಿದೆ.

ಈ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ವಶಿಷ್ಠ ಮಹಾ ಮುನಿಗಳು ಶ್ರದ್ಧಾನಂದ ಮಠ ಸುಕ್ಷೇತ್ರ ಸಿತಿಮನಿ ಇವರು ವಹಿಸಿ ಕೊಳ್ಳಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದರ್ಶ ವಿದ್ಯಾವರ್ಧಕ ಸಂಘದ ಸದಸ್ಯರಾದ ಶ್ರೀ ಡಿ.ಜಿ ಶಿರೂರ ವಹಿಸಿ ಕೊಳ್ಳಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಾಗಲಕೋಟೆಯ ಎಸ್.ಆರ್. ನರಸಾಪೂರ ಕಲಾ ಹಾಗೂ ಎಂ.ಬಿ ಶಿರೂರು ವಾಣಿಜ್ಯ ಮಹಾ ವಿದ್ಯಾಲಯದ ಡಾ.ಎಸ್.ಎಸ್. ಹಂಗರಗಿ ಸಹ ಪ್ರಾಧ್ಯಾಪಕರು ಭಾಗಿಯಾಗಲಿದ್ದಾರೆ.

ಎಸ್. ಡಿ ಎಂ.ಸಿ ಅಧ್ಯಕ್ಷರಾದ ಶ್ರೀ ವಾಯ್. ಎಚ್. ಬೆನಕನವಾರಿ ಗ್ರಾಮ ಪಂಚಾಯತಿ ಸದಸ್ಯರಾದ ಎನ್. ಬಿ ಪಾಟೀಲ್ ಶ್ರೀಮತಿ ಜಿ.ವಾಯ್ ಮಾದರ್, ಶಿಕ್ಷಣ ಪ್ರೇಮಿಗಳಾದ ಶ್ರೀಕರ ದೇಸಾಯಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಶ್ರೀಮತಿ ಎಸ್.ಎಂ. ಚಲವಾದಿ ಸೇರಿದಂತೆ ಎಸ್‌.ಡಿ.ಎಂ.ಸಿ.ಯ ಎಲ್ಲಾ ಸದಸ್ಯರು ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚಿಟಿಗಿನಕೊಪ್ಪದ ಪ್ರಭಾರಿ ಮುಖ್ಯ ಗುರುಗಳಾದ ಶ್ರೀ ಸುನಿಲ್. ಆರ್. ಪಾಟೀಲ್ ಇವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆಂದು ಪ್ರಾಚಾರ್ಯರಾದ ಡಾ. ಜ.ಗು ಬೈರಮಟ್ಟಿ ಹಾಗೂ ಯೋಜನಾಧಿಕಾರಿಗಳಾದ ಜಿ.ಎಸ್ ಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಒಂದು ವಾರದ ವಿಶೇಷ ಶಿಬಿರದಲ್ಲಿ ಶ್ರಮದಾನದ ಕಾರ್ಯಗಳು ಸಾಂಸ್ಕೃತಿಕ ಕಾರ್ಯಕ್ರಮಗಳು, ಉಚಿತ ಆಯುಷ್ಯ ಆರೋಗ್ಯ ಚಿಕಿತ್ಸ ಶಿಬಿರ ಜರುಗಲಿವೆ ಶಿಬಿರದಲ್ಲಿ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾ ವಿದ್ಯಾಲಯದ 50 ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಭಾಗವಹಿಸುತ್ತಾರೆ. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ : ಅಮರೇಶ ಮ. ಗೊರಚಿಕ್ಕನವರ.

ಕೂಡಲ ಸಂಗಮ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button