ರಾಜೀವ್ ಗಾಂಧಿಯವರ ಕನಸು ಯುವ ಕಾಂಗ್ರೆಸ್ ಸಂಘಟನೆಯ ಬೇರನ್ನು ಭದ್ರ ಪಡಿಸುವುದು, ಎ. ಚೀತ್ರೆಶ್.

ಕೂಡ್ಲಿಗಿ ಸ.14

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ದಂದು ಎ.ಚೀತ್ರೇಶ್ ಹೊಸಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಪಕ್ಷದಲ್ಲಿ ಸುಮಾರು ವರ್ಷಗಳಿಂದ ಪ್ರಾಮಾಣಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ದುಡಿಯುತ್ತಿದ್ದು 2024 ನೇ ಸಾಲಿನ ಯುವ ಕಾಂಗ್ರೆಸ್ಸಿನ ಚುನಾವಣೆ ರಾಜ್ಯದಲ್ಲಿ ಏಕಕಾಲಕ್ಕೆ ನಡೆಯುತ್ತಿದ್ದು. ಚುನಾವಣೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಈ ಬಾರಿ 2024 ರ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಪಾರದರ್ಶಕವಾಗಿ ಚುನಾವಣೆ ನಡೆಯ ಬೇಕೆಂಬುದು ನಮ್ಮೆಲ್ಲರ ಆಶಯ ಯಾಗಿದೆ ಕಾರಣ. ರಾಜೀವ್ ಗಾಂಧಿಯವರ ಕನಸು, ಯುವ ಕಾಂಗ್ರೆಸ್ ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿ ಸಂಘಟನೆ ಮಾಡುವುದ ರೊಂದಿಗೆ ಪಕ್ಷದ ಬೇರನ್ನು ಭದ್ರ ಪಡಿಸುವುದಾಗಿತ್ತು. ಈ ಸಾಮಾನ್ಯ ಚುನಾವಣೆಯಲ್ಲಿ ಹಣದ ಆಮಿಷವನ್ನು ಹರಿಸುವುದ ರೊಂದಿಗೆ ಯುವ ಕಾಂಗ್ರೆಸ್ ಚುನಾವಣೆ ನಡೆಯುತ್ತಿದೆ.

ಎಂಬ ಆರೋಪ ಯುವ ಕಾಂಗ್ರೆಸ್ ಸ್ಪರ್ಧಾಥಿ ಎ. ಚೀತ್ರೆಶ್ ಪತ್ರಿಕಾ ಗೋಷ್ಠಿಯ ಮೂಲಕ ಶೋಷಿತರ ದಮನಿತರ ದೀನ ದಲಿತರ ಬಡವರ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವು ಇದು ಬಂಡವಾಳ ಶಾಹಿಗಳ ಮುಕ್ತ ವಂಶ ಪರಂಪರೆಯ ರಾಜಕಾರಣಕ್ಕೆ ಬಲಿಯಾಗುತ್ತಿದೆ ಎಂದು ಆರೋಪ ಮಾಡಿದರು. ಈ ಬಾರಿ ಪಾರದರ್ಶಕವಾಗಿ ಚುನಾವಣೆ ನಡೆಯುವುದೇ ನಮ್ಮ ಮಹಾ ದಾಸೆಯಾಗಿದೆ ಆದ್ದರಿಂದ ಮಾನ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಇದರ ಕುರಿತು ಪ್ರಾಮಾಣಿಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನ್ಯಾಯ ಸಿಗಬೇಕಾಗಿದೆ, ತಮ್ಮ ಪ್ರಾಮಾಣಿಕ ಮನದಾಳದ ಮಾತನ್ನು ಪತ್ರಿಕಾ ಗೋಷ್ಠಿಯ ಮೂಲಕ ಎ.ಚೀತ್ರೆಶ್ ಹಾಗೂ ಮಂಜುನಾಥ್ ಉಕ್ಕಡದ ಕೂಡ್ಲಿಗಿ ಬ್ಲಾಕ್ ಯುವ ಕಾಂಗ್ರೆಸ್ ಆಕಾಂಕ್ಷಿಗಳು ತಿಳಿಸಿದ್ದಾರೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ. ಸಾಲುಮನೆ.ಕೂಡ್ಲಿಗಿ. ವಿಜಯನಗರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button