ನಿಧನ ವಾರ್ತ:ಶ್ರೀ ಮತಿ ಸಿರಿಬಿ ಲತಾ ನಿಧನ.
ಕೂಡ್ಲಿಗಿ ಅ.24

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 18 ನೇ. ವಾರ್ಡಿನ ನಿವಾಸಿಗಳಾದ ಶ್ರೀಮತಿ ಸಿರಿಬಿ ಲತಾ ರವರು ಬಿ.ಸಿ.ಎಂ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಹಾಸ್ಟೆಲ್ ಒಂದರಲ್ಲಿ ಅಡುಗೆ ಸಹಾಯಕರಾಗಿ ಸುಮಾರು 6 ವರ್ಷ ಗಳಿಂದ ಕೆಲಸ ನಿರ್ವಹಿಸುತ್ತಿದ್ದು ಇವರಿಗೆ ಇಬ್ಬರು ಮಕ್ಕಳು ಒಂದು ಹೆಣ್ಣು. ಗಂಡು ಮಕ್ಕಳಿದ್ದು ವಾಲ್ಮೀಕಿಯ ಹಿರಿಯ ಮುಖಂಡರು . ಶ್ರೀಮತಿ ಸಿರಿಬಿ ಲತಾ (35) ಪತಿ ಸಿರಿಬಿ ರಾಘವೇಂದ್ರ ರವರ ಇವರ ಪತ್ನಿ ಅ 23. ರಂದು ಹೃದಯ ಘಾತದಿಂದ ರಾತ್ರಿ 7 ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಹೃದಯ ಘಾತದಿಂದ ನಿಧನ ಹೊಂದಿದ್ದಾರೆ. ಎಂದು ಸಂಬಂಧಿಕರಾದ ಸಿರಿಬಿ ಮಂಜುನಾಥ್ ರವರಿಂದ ತಿಳಿದು ಬಂದಿದೆ, ಮೃತರ ಗಂಡ ಮಕ್ಕಳು ಸೇರಿದಂತೆ, ತುಂಬು ಕುಟುಂಬವನ್ನು ಅಪಾರ ಬಂಧು ಬಳಗವನ್ನು ಹೊಂದಿದವರಾಗಿದ್ದರು. ಅಂತ್ಯಕ್ರಿಯೆ:- ಅಕ್ಟೋಬರ್, 24 ರ ಗುರುವಾರ ರಂದು ಮಧ್ಯಾಹ್ನ 1 ಗಂಟೆಗೆ ಕೂಡ್ಲಿಗಿ ಪಟ್ಟಣದ ಕಡೆಯ ಅಂಚಿನಲ್ಲಿರುವ ಶ್ರೀ ರಾಜೀವ್ ಗಾಂಧಿ ನಗರದ ಪಕ್ಕದಲ್ಲಿ ಬರುವ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಸಂತಾಪ:- ಕೂಡ್ಲಿಗಿ ಪಟ್ಟಣದ ವಾಲ್ಮೀಕಿ ಸಮುದಾಯದವರು, ಸ್ಥಳೀಯ ಕೂಡ್ಲಿಗಿಯ ಸಂಬಂಧಿಕರು ಹಾಗೂ ವಿವಿಧ ಸಮುದಾಯದವರು ಸಮಸ್ತ ಗ್ರಾಮಸ್ಥರು. ವಾಲ್ಮೀಕಿ ಸಮುದಾಯದವರು ಸೇರಿದಂತೆ, ವಿವಿಧ ಸಮುದಾಯದವರು. ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಶಾಸಕರು ತಾಲೂಕಿನ ಎಲ್ಲಾ ದಲಿತ ಪರ ಹಾಗೂ ವಾಲ್ಮೀಕಿ ಸಂಘಟನೆಗಳು ಸೇರಿದಂತೆ ಪತ್ರಕರ್ತರು ರೈತರು ಕಾರ್ಮಿಕರು ಮಹಿಳೆಯರ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ತಾಲೂಕು ಘಟಕಗಳ ಪದಾಧಿಕಾರಿಗಳು ಪ.ಪಂ ಅಧ್ಯಕ್ಷರು ಉಪಾಧ್ಯಕ್ಷರು,ಸ್ಥಾಯಿ ಸಮಿತಿ ಹಾಗೂ ಸರ್ವ ಸದಸ್ಯರು. ಶಾಸಕರು ಮೊದಲ್ಗೊಂಡು ತಾಲೂಕಿನ ವಿವಿಧ ಜನ ಪ್ರತಿನಿಧಿಗಳು, ಹಾಗೂ ಹೋರಾಟಗಾರರು ಗಣ್ಯರು. ಕೂಡ್ಲಿಗಿ ಪಟ್ಟಣದ ಪ್ರಮುಖ ನಾಗರೀಕರು, ಕೂಡ್ಲಿಗಿಯ ಗ್ರಾಮದ ನೆರೆ ಹೊರೆ ಗ್ರಾಮಸ್ಥರು. ಮೃತ ಶ್ರೀಮತಿ ಸಿರಿಬಿ ಲತಾ ರವರ ಅಗಲಿಕೆಗೆ, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ