ನಾಗಬಸಯ್ಯ.ಮಲ್ಲಯ್ಯ ಮಳಲಿಮಠ ಅವರನ್ನು ನಿಂಬಳಗೆರೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕರು ಬುಧವಾರ ಸನ್ಮಾನಿಸಿ ಬೀಳ್ಕೊಟ್ಟರು.
ಖಾನಾ ಹೊಸಹಳ್ಳಿ ಅ.27

ಕನ್ನಡ ಭಾಷೆ, ನೆಲ, ಜಲ ಕುರಿತು ಅರಿವು ಮೂಡಿಸಲು ಬೆಂಗಳೂರಿನಿಂದ ಬೀದರ್ ವರೆಗೂ ಸ್ಕೂಟರಿನಲ್ಲಿ ಹೊರಟಿರುವ ಜ್ಯೂನಿಯರ್ ವಿಷ್ಣುವರ್ಧನ್ ಎಂದೇ ಹೆಸರು ಮಾಡಿರುವ, ವಿಷ್ಣುವರ್ಧನ್ ಅಪ್ಪಟ ಅಭಿಮಾನಿ ನಾಗಬಸಯ್ಯ ಮಲ್ಲಯ್ಯ ಮಳಲಿಮಠ ಅವರು ಕಾನಹೊಸಹಳ್ಳಿ, ನಿಂಬಳಗೆರೆ, ಗಾಣಗಟ್ಟೆ, ಉಜ್ಜಯಿನಿಯ ಗ್ರಾಮಕ್ಕೆ ಭೇಟಿ ನೀಡಿದರು. ಈ ವೇಳೆ ಗ್ರಾಮದ ಮುಖಂಡರು ಹಾಗೂ ವಿಷ್ಣು ಅಭಿಮಾನ ಬಳಗದ ಸದಸ್ಯರು ಅವರನ್ನು ಸ್ವಾಗತಿಸಿ, ಸನ್ಮಾನಿಸಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡ ನಾಡು ನುಡಿ ಸಂಸ್ಕೃತಿ ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿರುವೆ. ನನ್ನ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ವಿಷ್ಣು ಅಭಿಮಾನಿಯಾಗಿ ನನ್ನ ಕರ್ತವ್ಯವನ್ನು ನಾನು ಮಾಡುತ್ತಿರುವೆ ಎಂದರು.

ಇವರು ಬಂದ ಸಂದರ್ಭದಲ್ಲಿ ವಿಷ್ಣು ಅಭಿಮಾನಿಗಳು ಸೇರಿ ಅನೇಕರು ಶುಭ ಹಾರೈಸಿ ಬೀಳ್ಕೊಟ್ಟರು. ರಾಣೇಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದವರಾದ ನಾಗಬಸಯ್ಯ ಹತ್ತು ವರ್ಷಗಳಿಂದ ಪ್ರತಿ ಅಕ್ಟೋಬರಲ್ಲಿ ತಮ್ಮ ದ್ವಿಚಕ್ರ ವಾಹನದ ಮೂಲಕ ನಾಡಿನಾದ್ಯಂತ ಸಂಚರಿಸುವ ಅವರು, ಕನ್ನಡ ಭಾಷೆ, ನೆಲ, ಜಲ ಸಂರಕ್ಷಣೆ ಮಾಡುವ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಖಾಸಗಿ ನೌಕರಿಯಲ್ಲಿರುವ ನಾಗಬಸಯ್ಯ ಅವರು ತಮ್ಮದೇ ಆಕ್ಟೀವಾ 3 ಜಿ ಸ್ಕೂಟರ್ನ್ನು ಕನ್ನಡ ಬಾವುಟ, ತೋರಣಗಳಿಂದ ಶ್ರೀಂಗರಿಸಿ, ಭುವನೇಶ್ವರಿ ಮತ್ತು ವಿಷ್ಣು ಚಿತ್ರಗಳನ್ನು ಅಳವಡಿಸಿ ಕೊಂಡು ಕನ್ನಡ ರಥವನ್ನಾಗಿಸಿ ಕೊಂಡಿದ್ದಾರೆ. ವಿಷ್ಣು ಅವರ ವೇಷ ಭೂಷಣ ತೊಟ್ಟು ಆಕರ್ಷಿಸುತ್ತಾರೆ. ವಿಷ್ಣು ಅಭಿಮಾನಿಗಿರುವ ಇವರು ಅನೇಕ ಕಡೆ ಜ್ಯೂ. ವಿಷ್ಣುವಾಗಿ ಕಾರ್ಯಕ್ರಮಗಳನ್ನು ನೀಡಿ ಅದರಿಂದ ಬಂದ ಹಣವನ್ನು ಇಂತಹ ಜಾಗೃತಿಗಾಗಿ ಬಳಕೆ ಮಾಡುತ್ತಿದ್ದಾರೆ. ಈ ರೀತಿ ಸಂಚಾರ ಕೈಗೊಂಡಾಗ ಅನೇಕ ನಗರ ಪಟ್ಟಣಗಳಲ್ಲಿ ಪೊಲೀಸರು ಅವರ ವಾಹನಕ್ಕೆ ಪೆಟ್ರೋಲ್ ಖರ್ಚು ನೀಡುತ್ತಿದ್ದಾರೆ.
ಬಾಕ್ಸ್:-
ಕನ್ನಡ ನಾಡು ನುಡಿ ಅರಿವು ಮೂಡಿಸಲು ಬೆಂಗಳೂರಿನಿಂದ ಬೀರದ್ಗೆ ಹೊರಟಿದ್ದ ಜ್ಯೂ. ವಿಷ್ಣುವರ್ಧನ್ ಎಂದ ಹೆಸರು ಮಾಡಿರುವ ನಾಗಬಸಯ್ಯ ಮಲ್ಲಯ್ಯ ಮಳಲಿಮಠ ಅವರನ್ನು ನಿಂಬಳಗೆರೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕರು ಬುಧವಾರ ಸನ್ಮಾನಿಸಿ ಬೀಳ್ಕೊಟ್ಟರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ