ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ರೋಣ ತಾಲೂಕ ಪದಾಧಿಕಾರಿಗಳ – ಪದಗ್ರಹಣ ಕಾರ್ಯಕ್ರಮ.

ರೋಣ ನ.19

ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಭೀಮ್ ಆರ್ಮಿ ಭಾರತ ಏಕತಾ ಮಿಷನ್ ರೋಣ ತಾಲೂಕಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ತುಂಬಾ ವಿಜೃಂಭಣೆಯಿಂದ ನಡೆಯಿತು. ಈ ಸಮಯದಲ್ಲಿ ಕಾರ್ಯಕ್ರಮ ಉದ್ದೇಸಿಸಿ ವೀರಪ್ಪ ತೆಗ್ಗಿನಮನಿ ಮಾತನಾಡಿ ಚಳುವಳಿಗೆ ಅಸಮಾನತೆ ಹಾಗೂ ಅಸ್ಪ್ರಷ್ಯತೆ ಮೂಲ ಕಾರಣ. ಡಾ, ಬಾಬಾ ಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ದಿಂದ ಸ್ವಾತಂತ್ರ್ಯದಿಂದ ಬದುಕುತ್ತಿದ್ದೇವೆ. ಸ್ವಾತಂತ್ರ್ಯ ಸಿಕ್ಕ ಸುಮಾರು ದಶಕ ಕಳೆದರು ಸಮಾನತೆ ಇನ್ನೂ ಸಿಕ್ಕಿಲ್ಲ. ಡಾ, ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ‌ಪ್ರತಿಯೊಬ್ಬರು ಸ್ಮರಿಸಬೇಕು. ಎಲ್ಲಾರೂ ಸೇರಿ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಸಮಾನತೆ ಸಿಗುವ ವರೆಗೂ ಚಳುವಳಿಯ ನಿರಂತರವಾಗಿರಲಿ. ತತ್ವ ಸಿದ್ದಾಂತ ಅಡಿಯಲ್ಲಿ ಪ್ರತಿಯೊಬ್ಬರೂ ‌ಕಾರ್ಯ ನಿರ್ವಹಿಸಬೇಕು. ಚಳುವಳಿಯ ದಿಕ್ಕು ತಪ್ಪಿದೆ ಎಂದರು. ನಂತರ ಮಾತನಾಡಿದ ರಾಘವೇಂದ್ರ ಪರಾಪುರ ಸಂಘಟನೆಗಳು ರಾಜಕೀಯ ಕೈಯಲ್ಲಿ ಗುಲಾಮರಾಗಿದೆ. ದಲಿತ ಸಮುದಾಯಕ್ಕೆ ಅನ್ಯಾಯವಾದಾಗ ಮುಂದೆ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಮಾತನಾಡಿದರು.ನಂತರ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ ಪ್ರಧಾನ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಕಡೆಮನಿ ಅವರು ಸಂಘಟನೆಗಳು ಉತ್ತಮವಾದ ಕಾರ್ಯವನ್ನು ನಿರ್ವಹಿಸಬೇಕು ಮಾರ್ಗದರ್ಶನ ದೊಂದಿಗೆ ಕಾರ್ಯವನ್ನು ನಿರ್ವಹಿಸಬೇಕು ಎಂದು ಮಾತನಾಡಿದರು ದಲಿತ ವಿದ್ಯಾರ್ಥಿ ಪರಿಷತ್ತು ಗದಗ ಜಿಲ್ಲಾ ಅಧ್ಯಕ್ಷ ಸುರೇಶ ಚಲವಾದಿ ಮಾತನಾಡಿ ಒಗ್ಗಟ್ಟಿನ ಕೊರತೆ ಇದೆ. ಸಂಘಟನೆಯ ಅಭಿವೃದ್ಧಿಯಾಗ ಬೇಕಾದರೆ ಅಧ್ಯಕ್ಷ ಕಾರ್ಯದರ್ಶಿ ಸದಸ್ಯರ ನಡುವೆ ಉತ್ತಮ ಬಾಂಧವ್ಯ ಉಂಟಾಗಬೇಕು ಅದೇ ರೀತಿಯಾಗಿ ಎಲ್ಲರಲ್ಲಿ ಒಗ್ಗಟ್ಟಿನ ಶಕ್ತಿಯನ್ನು ಹೊಂದಿರಬೇಕು ಎಂದು ಮಾತನಾಡಿದರು.

ಈ ಸಭೆಯ ಅಧ್ಯಕ್ಷ ಭಾಷಣ ಮಾಡಿದಂತ ಗದಗ ಜಿಲ್ಲಾ ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಅಧ್ಯಕ್ಷ ಗೋಪಾಲ ಎಚ್ ಕೋಣೆಮನಿ ಮಾತನಾಡಿ ತಾಲೂಕು ಅಧ್ಯಕ್ಷ ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಬೇಕು ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿ ಕೊಳ್ಳಬೇಕು. ವೈಜ್ಞಾನಿಕವಾಗಿ ಹೋರಾಟ ಮಾಡುವುದರ ಮೂಲಕ ಅಸ್ಪಷ್ಟತೆ ಹೊರಡಿಸಬೇಕು. ಗ್ರಾಮೀಣ ಭಾಗದಲ್ಲಿ ಅಸ್ಪ್ರಶ್ಯತೆ ಹೋಗಲಾಡಿಸಲು ಯುವ ಮುಖಂಡರು ಪ್ರಾಮಾಣಿಕ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು. ಈ ರ್ಯಕ್ರಮ ಉದ್ದೇಶಿಸಿ ಮಾತನಾಡಿದರ ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಸಂಘಟನೆಯ ನೂತನ ರೋಣ ತಾಲೂಕ ಅಧ್ಯಕ್ಷರಾದ ಪುಂಡಲೀಕ್ ಮಾದರ್ ಮಾತನಾಡಿ ಸಂಘಟನೆ ಗೋಸ್ಕರ ನಾನು ಸದಾ ಸಿದ್ಧ ನಾಗಿರುತ್ತೇನೆ ದಿನದ 24 ಗಂಟೆಗಳ ಕಾಲ ಸತತವಾಗಿ ಸಂಘಟನೆ ಗೋಸ್ಕರ ನನ್ನ ಸಮಯವನ್ನು ಮೀಸಲ ಲಾಗಿಸಿರುತ್ತೇನೆ. ಯಾವುದೇ ಜನಾಂಗದ ವರಾಗಲಿ ಸಮಸ್ಯೆ ಹೇಳಿಕೊಂಡು ಬಂದವರಿಗೆ ನಾನು ಅವರ ಸಮಸ್ಯೆಗೆ ಸ್ಪಂದಿಸುತ್ತೇನೆ. ಅವರ ಸಮಸ್ಯೆಯನ್ನು ನನ್ನ ಸಮಸ್ಯೆ ಎಂದು ಬಗೆಹರಿಸುತ್ತೇನೆ. ಯಾವ ಜಾತಿಯವರೇ ಆದರೂ ಸರಿ ಯಾವ ಪಂಗಡದವರಾದರು ಸರಿ ನಾನು ಅವರ ಜೊತೆ ಸದಾ ಬೆನ್ನೆಲುಬುಬಾಗಿ ನಿಲ್ಲುತ್ತೇನೆ ಎಂದು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿಭೀಮ್ ಆರ್ಮಿ ತಾಲೂಕು ಸಂಚಾಲಕರಾದ ಪುಂಡಪ್ಪ ಮಾದರ,ಸಹ ಸಂಚಾಲಕರಾದ ಚಂದ್ರು ಮಾದರ. ಹಾಗೂ ಸಂಘಟನಾ ಕಾರ್ಯದರ್ಶಿ ಮಂಜು ನಡುವಿನಮನಿ. ಪ್ರಧಾನ ಕಾರ್ಯದರ್ಶಿ ರಮೇಶ ಅರಹುನಸಿ. ಕುಮಾರ್ ನಡುವಿನಮನಿ, ಚಂದ್ರು ಹಾದಿಮನಿ ಶಾದಿಕ್ ಅತ್ತಾರ. ರಾಘವೇಂದ್ರ ಹರಿಜನ. ಅಂದಪ್ಪ ಮಾದರ್. ಅಭಿಷೇಕ ಕೊಪ್ಪದ. ರಮೇಶ್ ನಂದಿ. ಮಾಂತೇಶ ಮಾದರ. ಹಾಗೂ ಇನ್ನಿತರರು ಉಪಸ್ಥಿತರಿದ್ದರು ಎಸ್ ವಿ ಸಂಕನಗೌಡ್ರ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button