ಸೀನಿಯರ್ ನ್ಯಾಷನಲ್ ಸರ್ಕಲ್ ಕಬಡ್ಡಿಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿ ನಿಧಿಸುತ್ತಿರುವ – ರೋಣದ ಹೆಮ್ಮೆಯ ಯುವ ಕಬಡ್ಡಿ ಕ್ರೀಡಾಪಟು.

ರೋಣ ನ.26

ಕರ್ನಾಟಕ ರಾಜ್ಯ ಅಮೆಚೂರ ಕಬಡ್ಡಿ ಅಸೋಸಿಯೇಷನ್ ಗದಗ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಶ್ರೀ ಬಿ.ಸಿ ರಮೇಶ್ ಸರ್ ಕಬಡ್ಡಿ ತರಬೇತಿ ಅಕಾಡೆಮಿ ರೋಣ ಇವರ ಯುವ ಕಬಡ್ಡಿ ಕ್ರೀಡಾಪಟು ಕುಮಾರ ರಮೇಶ. ಎಸ್ ತಲೆವಡಕರ್ ಇವರು ಪಂಜಾಬ ರಾಜ್ಯದ ಚಂಡಿಗಡದಲ್ಲಿ ದಿನಾಂಕ 30-11-2024 ರಿಂದ 02-12-2024 ರ ವರೆಗೆ ನಡೆಯುತ್ತಿರುವ 17 ನೇಯ ಸೀನಿಯ‌ರ್ ನ್ಯಾಷನಲ್ ಸರ್ಕಲ್ ಕಬಡ್ಡಿಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿ ನಿಧಿಸುತ್ತಿರುವ ಗದಗ ಜಿಲ್ಲೆಯ ರೋಣದ ಹೆಮ್ಮೆಯ ಯುವ ಕಬಡ್ಡಿ ಕ್ರೀಡಾಪಟು ಆಗಿದ್ದಾನೆ. ಹಲವಾರು ಪಂದ್ಯಗಳನ್ನು ಗೆದ್ದು ಹಲವಾರು ಬಹುಮಾನಗಳನ್ನು ಹಾಗೂ ಹಲವಾರು ಗೋಲ್ಡ್ ಮೆಡಲ್ ಗಳನ್ನು ಪಡೆದಿದ್ದಾನೆ ಇಂತಹ ಮಹಾನ್ ಪ್ರತಿಭೆಗೆ ಮುಂದೆ ಉತ್ತಮ ಸ್ಥಾನಗಳು ಲಭಿಸಲಿ ಎಂದು ನಮ್ಮ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ತಂಡವು ಹಾರೈಸುತ್ತದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ. ಸಂಕನಗೌಡ್ರ ರೋಣ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button