ಯಶಸ್ವಿಯಾಗಿ ವಿಜೃಂಭಣೆಯಿಂದ ಭಾವೈಕ್ಯತೆಯಿಂದ ನಡೆದ – ನರೇಗಲ್ಲ ಹಿರೇಮಠದ ಜಾತ್ರಾ ಮಹೋತ್ಸವ.
ನರೇಗಲ್ ನ.27

ಹಿರೇಮಠದಲ್ಲಿ ಸೋಮವಾರ ನಡೆದ ಜಾತ್ರಾ ಮಹೋತ್ಸವ, ಗುರು ಪರಂಪರೆ ಸ್ಮರಣೋತ್ಸವ ಹಾಗೂ ಒಂಬತ್ತು ದಿನಗಳ ಪರ್ಯಾತ ನಡೆದ ಹಾನಗಲ್ಲ ಶ್ರೀ ಗುರು ಕುಮಾರೇಶ್ವರ ಶಿವಯೋಗಿಗಳ ಪ್ರವಚನದ ಅಂಗವಾಗಿ ಸೋಮವಾರ ಶ್ರೀ ಶಿವಯೋಗಿ ಶಿವಾಚಾರ್ಯ ವಿರಚಿತ ಸಿದ್ಧಾಂತ ಶಿಖಾಮಣಿ ಗ್ರಂಥ ಹಾಗೂ ಹಿಂದಿನ ಗುರುಗಳ ಭಾವ ಚಿತ್ರದ ಅಡ್ಡಪಲ್ಲಕ್ಕಿ ಮಹೋತ್ಸವ ನೆರವೇರಿತು. ನರೇಗಲ್ಲ ಹಿರೇಮಠದಿಂದ ಸೋಮವಾರ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಬೆಳಗ್ಗೆ 11 ಗಂಟೆಗೆ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಪಲ್ಲಕ್ಕಿ ಮುಂದೆ ಮಹಿಳೆಯರು ಕುಂಭವನ್ನು ಹೊತ್ತು ಸಾಗಿದರು. ಉತ್ಸವದುದ್ದಕ್ಕೂ ಸಾಗಿದೆ “ಮಾನವ ಧರ್ಮಕ್ಕೆ ಭಕ್ತಾದಿಗಳು ಜಯವಾಗಲಿ” “ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಜಗದ್ಗುರು ಪಂಚಾಚಾರ್ಯ ಮಹಾರಾಜಕಿ ಜೈ, ರೇಣುಕಾಚಾರ್ಯ ಮಹಾರಾಜಕೀ ಜೈ, ಎಂಬ ಜಯ ಘೋಷದೊಂದಿಗೆ ಊರಿನ ಪ್ರಮುಕ ಬೀದಿಗಳಲ್ಲಿ ಸಾಗಿ ಬಂದಿತು.ನರೇಗಲ್ಲ ಹಿರೇಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥ ಹಾಗೂ ಹಿಂದಿನ ಗುರುಗಳ ಭಾವ ಚಿತ್ರದ ಅಡ್ಡಪಲ್ಲಕ್ಕಿ ಮಹೋತ್ಸವ ದೊಂದಿಗೆ ಸಾರೊಟಗಿಯಲ್ಲಿ ಸಾಗಿದ ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಭಕ್ತರನ್ನು ಆಶಿರ್ವದಿಸಿದರು.ಪಲ್ಲಕ್ಕಿ ಹಿಂದೆ ಸಾರೊಟಗಿಯಲ್ಲಿ ಸಾಗಿದ ಹಿರೇಮಠದ ಮಲ್ಲಿಕಾರ್ಜುನ ಶ್ರೀಗಳು ದಾರಿಯುದ್ದಕ್ಕೂ ಭಕ್ತರನ್ನು ಆಶಿರ್ವದಿಸುತ್ತ ಉತ್ಸವಕ್ಕೆ ಮೆರಗನ್ನು ನೀಡಿದರು. ಸೂಡಿಯ ಚಂಡಿವಾದ್ಯ ಮೇಳೆ ಉತ್ಸವಕ್ಕೆ ಇನ್ನಷ್ಟು ಮೆರಗು ತಂದಿತು. ಊರಿನ ಪ್ರಮುಕ ಬೀದಿಗಳಲ್ಲಿ ಸಂಚರಿಸಿದ ಪಲ್ಲಕ್ಕಿ ಉತ್ಸವ ಮರಳಿ 2 ಘಂಟೆಗೆ ಹಿರೇಮಠವನ್ನು ತಲುಪಿತು. ನಂತರ ನೆರೆದ ಸಾವಿರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು. ನರೇಗಲ್ಲ ಹಾಗೂ ಗ್ರಾಮಗಳಾದ ದ್ಯಾಂಪೂರ, ಮಲ್ಲಾಪೂರ, ತೋಟಗಂಟಿ, ಕೋಚಲಾಪೂರ, ಕೋಡಿಕೊಪ್ಪ, ಜಕ್ಕಲಿ, ಮಾರನಬಸರಿ, ಬೂದಿಹಾಳ, ನಿಡಗುಂದಿ, ನಿ.ಕೊಪ್ಪ, ಕೋಟುಮಚಗಿ ಹಾಗೂ ಅಬ್ಬಿಗೇರಿ ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ಸದ್ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಎಸ್.ವಿ ಸಂಕನಗೌಡ್ರ.ರೋಣ