ಕುವೆಂಪು ತಮ್ಮ ಸಾಹಿತ್ಯದಲ್ಲಿ ಸಾಮಾಜಿಕ ವಿಶ್ವ ಮಾನ್ಯ ಕವಿ ಎನಿಸಿದ್ದಾರೆ – ಪದ್ಮನಾಭ ಕರ್ಣಂ.
ಖಾನಾ ಹೊಸಹಳ್ಳಿ ಡಿ.30

ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ಸಾಮಾಜಿಕ ಆಲೋಚನೆಗಳನ್ನು ತೆರೆದಿಡುವ ಮೂಲಕ ವಿಶ್ವ ಮಾನವ ಸಂದೇಶ ಸಾರಲು ಸಾಧ್ಯವಾಯಿತು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ ಹೇಳಿದರು. ತಾಲೂಕಿನ ಕಾನ ಹೊಸಹಳ್ಳಿ ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರ ಕವಿ ಕುವೆಂಪು ಜನ್ಮ ದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ ಹಾಗೂ ಕವಿ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಮಲೆನಾಡಿನ ಸೊಗಡು, ತುಂಗಭದ್ರಾ ನದಿ, ಪರಿಸರದ ಪ್ರಜ್ಞೆ, ಪ್ರಗತಿಪರ ನಿಲುವು, ಸಮಾಜಮುಖಿ ಚಿಂತನೆ, ವೈಜ್ಞಾನಿಕ ಮನೋಭಾವ ಇವರ ಬರಹಗಳಲ್ಲಿ ದಟ್ಟವಾಗಿ ಕಾಣುತ್ತದೆ. ಆ ಕಾರಣದಿಂದಲೇ ವರಕವಿ ಬೇಂದ್ರೆ ‘ಯುಗದ ಕವಿ ಜಗದ ಕವಿ ಕುವೆಂಪು’ ಎಂದು ಬಣ್ಣಿಸಿದ್ದು ಜಾತಿ ಮೌಡ್ಯದಿಂದ ಮುಳುಗಿದ್ದ ಅಂದಿನ ಸಮಾಜಕ್ಕೆ ಎಚ್ಚರಿಕೆ ನೀಡಿದವರು ಕುವೆಂಪು ಎಂದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಡಾ, ವೃಷಬೇಂದ್ರ ಚಾರಿ ಮಾತನಾಡಿ ಕವಿಗಳಿಗೆ ಸಾಮಾಜಿಕ ಕಳಕಳಿ ಮತ್ತು ಬದ್ಧತೆ ಮುಖ್ಯ ಅದರಿಂದ ಕವಿಗಳು ಪ್ರೀತಿ ಪ್ರೇಮಕ್ಕಿಂತ ಸಾಮಾಜಿಕ ಚಿಂತನೆ ತಮ್ಮ ಕವಿತೆಯಲ್ಲಿ ಮೂಡಿ ಬರಬೇಕು ಎಂದರು. ಈ ವೇಳೆ ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಎನ್.ಎಂ ರವಿಕುಮಾರ್ ಮಾತನಾಡಿ ನಾಡಿನಲ್ಲಿ ಸಾಕಷ್ಟು ಯುವ ಕವಿಗಳಿದ್ದಾರೆ. ಅಂತವರಿಗೆ ಈ ಬಗೆಯ ಕವಿ ಗೋಷ್ಠಿಗಳು ಪ್ರೇರಣೆ ಯಾಗಬಲ್ಲವೂ ಮತ್ತು ಇಂದು ಸಮಾಜದಲ್ಲಿ ರೈತರಿಗೆ ಸಂಕಷ್ಟಗಳು ಹಾಗೂ ಸಾಮಾಜಿಕ ಸಮಸ್ಯೆಗಳು ತಾಂಡ ತಾಂಡವಾಡುತ್ತಿವೆ. ಕವಿಗಳು ಆ ನಿಟ್ಟಿನಲ್ಲಿ ಕವಿಗಳು ಜಾಗೃತಿ ಮೂಡಿಸ ಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಕ.ಸಾ.ಪ ಹೋಬಳಿ ಘಟಕದ ಅಧ್ಯಕ್ಷ ಎಸ್ ತಿಪ್ಪೇಸ್ವಾಮಿ ಪ್ರಾಸ್ತವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಡಾ, ಕರಿಬಸಪ್ಪ ಮಾತನಾಡಿದರು ಕಸಾಪ ದಾನಿಗಳಾದ ಎಚ್.ಕೆ ವೆಂಕಟೇಶ್ವರ್ ರಾವ್, ಕೆ ಸುಭಾಷ್ ಚಂದ್ರ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸಂಗಮೇಶ್ವರಯ್ಯ, ನಾಗರಾಜ್ ಕುಂಬಳಗುಂಟೆ, ಎನ್.ಕೆ ಮಧುಸೂಧನ್, ಪಿ.ಎಂ ಸಿದ್ದಲಿಂಗ ಮೂರ್ತಿ, ಟಿ.ಎಚ್.ಎಂ ಶೇಖರಯ್ಯ, ಕೂಡ್ಲಿಗಿ ಮಂಜುನಾಥ, ಟಿ ಓಂಕಾರಪ್ಪ, ಜ್ಯೋತಿ ನಾಯಕ, ಸುರೇಶ್ ದಳವಾಯಿ, ಬಸವರಾಜ್ ಪಿ.ಕೆ, ಶಾಮ ಸುಂದರ್ ಸಫಾರಿ, ಬೊಮ್ಮಯ್ಯ ಶಿಕ್ಷಕರು, ಕವಿತಾ, ಕೆಎಸ್ ವೀರೇಶ್, ರಾಮಣ್ಣ ಸಫಾರಿ, ಶಂಕ್ರಪ್ಪ ಶಿಕ್ಷಕರು, ಬಿ ಎ ಶಿವಪ್ರಕಾಶ್, ಕೆಜಿ ಶಿವಕುಮಾರ್, ಎಚ್.ಜಿ ಶರಣಗೌಡ್ರು, ಎಂ ಓ ಮಂಜುನಾಥ್ ನಿರಂಜನ್ ಕುಮಾರ್ ಎ,ಸೇರಿದಂತೆ ಕಸಾಪ ಸದಸ್ಯರು, ಮುಖಂಡರು, ವಿದ್ಯಾರ್ಥಿಗಳು ಇತರರು ಇದ್ದರು. ಎಚ್.ಎಂ.ಬಿ ಗುರುಮೂರ್ತಿ ನಿರೂಪಣೆ ನೆರವೇರಿಸಿದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ