ಬಸವಾದಿ ಶರಣರ ವಚನ ತತ್ವಗಳು ಕನ್ನಡ ಭಾಷೆಯ ಅಸ್ಮಿತೆ- ಲೇಖಕಿ ಡಿ.ಶಬ್ರಿನಾ ಮಹಮದ್ ಅಲಿ ಅಭಿಮತ.
ಚಳ್ಳಕೆರೆ ಡಿ.30

ಎನ್.ಜಯಣ್ಣ ಬಿ.ಇಡಿ ಕಾಲೇಜಿನಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಕಿ, ಲೇಖಕಿ ಡಿ.ಶಬ್ರಿನಾ ಮಹಮದ್ ಅಲಿ ಅವರು ಮಾತನಾಡಿ,”ಬಸವ, ವಚನ ತತ್ವಗಳು ಕನ್ನಡ ಭಾಷೆಯ ಅಸ್ಮಿತೆಯಾಗಿವೆ. ಸಮ ಸಮಾಜದ ಪರಿಕಲ್ಪನೆ ಮೂಡಿಸಿ ಕನ್ನಡ ಸಾಹಿತ್ಯವನ್ನ ಶ್ರೀಮಂತ ಗೊಳಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲಬೇಕು. ಅದಕಾಗಿಯೆ ಕುವೆಂಪು ಅವರು ‘ವಚನಗಳು ತಾಯಿ ಭುವನೇಶ್ವರಿ ದೇವಿಯ ಕಿರೀಟದಲ್ಲಿರುವ ರತ್ನಗಳು’ ಎಂದಿರುವುದು. ಜಾತಿ, ಮತ ಪಂಥ ಮೀರಿ ಕನ್ನಡ ಭಾಷೆಯ ಮೇಲಿನ ಅಭಿಮಾನ ಎಲ್ಲರಲ್ಲಿಯೂ ಮೂಡಬೇಕು. ಕನ್ನಡ ಭಾಷೆ ೨.೫೦೦ ವರ್ಷಗಳ ಇತಿಹಾಸ ಇರುವ ಅತ್ಯಂತ ಶ್ರೀಮಂತ ಭಾಷೆ. ಬರೆದಂತೆ ಓದುವ, ಓದಿದಂತೆ ಬರೆಯುವ ನಮ್ಮ ಕನ್ನಡ ಭಾಷೆ ಭೂಮಿಯ ಮೇಲಿನ ಶೇಕಡಾ ೯೯.೯೯ ಪರಿ ಪೂರ್ಣ ಭಾಷೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ಅದಕಾಗಿಯೆ ವಿನೋಭಾ ಭಾವೆ ಅವರು “ಕನ್ನಡವನ್ನ ವಿಶ್ವ ಲಿಪಿಗಳ ರಾಣಿ” ಎಂದು ಕರೆದಿದ್ದಾರೆ. ಕನ್ನಡದ ವೈಶಿಷ್ಟ್ಯವನ್ನು ಹೇಳುತ್ತಾ ಮಹಾಲಿಂಗರಂಗ ಅವರ ಸುಲಿದ ಬಾಳೆ ಹಣ್ಣಿನಂದದಿ. ಕಪ್ಪೆ ಅರಭಟ್ಟನ ಶಾಸನದ ಸಾಧುಂಗೆ ಸಾಧು. ಶ್ರೀವಿಜಯನ ಕವಿ ರಾಜಮಾರ್ಗದ ಪದನರಿದು ನುಡಿಯಲುಂ. ಹಳೆಗನ್ನಡ ಪದ್ಯಗಳನ್ನ ಸ್ಮರಿಸಿ, ಕನ್ನಡ ನಮ್ಮೆಲ್ಲರ ಹೃದಯದ ಭಾಷೆ ಕಾರಣ ನಮಗೆಲ್ಲಾ ಕನಸು ಬೀಳುವುದು ಕನ್ನಡದಲ್ಲಯೆ ವಿನಾ ಬೇರೆ ಭಾಷೆಯಲ್ಲ! ಅದಕಾಗಿಯೆ ಗೋವಿಂದ ಪೈ ಅವರು “ನನ್ನ ಮಾತೃ ಭಾಷೆಯಲ್ಲಿ ಕಲಿತ ವಿದ್ಯೆಯ ಶ್ರೆಷ್ಠವಾದದ್ದು ಪರರ ನಾಲಿಗೆಯ ಎಂಜಲು ಎನಗೆ ಸವಿಯಾದೀತೆ ” ಎಂದು ಹೇಳಿದ್ದನ್ನ ಸ್ಮರಿಸಿದರು. ಉದ್ಘಾಟಿಸಿದ ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರು. ನಮ್ಮೆಲ್ಲರ ಮಾತೃ ಭಾಷೆಯಾದ ಕನ್ನಡವನ್ನು ಹೆಚ್ಚೆಚ್ಚು ಬಳಸ ಬೇಕು. ಕನ್ನಡ ಕಾರ್ಯಕ್ರಮದ ದಿನವೂ ಕೂಡ ಕನ್ನಡ ಬಳಸಲಾಗದಷ್ಟು ಭಾಷಾ ನಿರಾಭಿಮಾನ ನಮ್ಮಲ್ಲಿ ಇರಬಾರದು.

ಕನ್ನಡವನ್ನ ಎಲ್ಲಾ ಕಡೆ ಮಾತನಾಡ ಬೇಕಾದದ್ದು ನಮ್ನೆಲ್ಲರ ಆದ್ಯ ಕರ್ತವ್ಯವಾಗಿದೆ. ಹಳ್ಳಿಗಳಲ್ಲಿ ಭಾಷೆ ಸುಲಿಲತವಾಗಿ ಮಾತನಾಡುವ ವಾತಾವರಣ ನೋಡುತ್ತೇವೆ. ಆದರೆ ನಗರಗಳಲ್ಲಿ ಬೇಸರ ತರಿಸುವಂತಹ ವಾತಾವರಣ ಇದೆ. ಇದು ಆಗಬಾರದು. ಎಲ್ಲರೂ ಎಲ್ಲಾ ಕಡೆ ಕನ್ನಡವನ್ನ ಮಾತನಾಡಬೇಕು. ಕನ್ನಡಕ್ಕೆ ಕುತ್ತು ಬಂದಲ್ಲಿ ನಾವೆಲ್ಲರೂ ಒಂದಾಗಿ ಬದ್ಧತೆಯಿಂದ ಹೋರಾಡ ಬೇಕು. ಹೋರಾಡಲೇ ಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರಾಸ್ತಾವಿಕ ನುಡಿಗಳನ್ನು ಸಂಸ್ಥೆಯ ಆಡಳಿತಾಧಿಕಾರಿ ಪ್ರಮೀಳಾ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಹೇಮಂತ್ ರಾಜ್, ಉಪನ್ಯಾಸಕರಾದ ರಾಘವೇಂದ್ರ, ವಾಣಿಶ್ರೀ, ಕವಿಗಳಾದ ರಂಗಸ್ವಾಮಿ ಎಸ್.ಆರ್, ಪಗಡಲಬಂಡೆ ನಾಗೇಂದ್ರಪ್ಪ, ಗೀತಾ ನಾಗರಾಜ್, ಯತೀಶ್ ಎಂ.ಸಿದ್ದಾಪುರ ಮತ್ತಿತರರು ಭಾಗವಹಿಸಿದ್ದರು.
ವರದಿ : ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ