ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ – ವೀರೇಶ.ಎಂ ಅವಿರೋಧವಾಗಿ ಆಯ್ಕೆ.
ತೂಲಹಳ್ಳಿ ಜ .08

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ತೂಲಹಳ್ಳಿಯಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ತೂಲಹಳ್ಳಿ ಇದರ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ವೀರೇಶ.ಎಂ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಾಲಗಾರರ ಕ್ಷೇತ್ರದ 11 ಸದಸ್ಯರು ಸಾಲಗಾರರಲ್ಲದ ಕ್ಷೇತ್ರದ ಒಂದು ಸದಸ್ಯರು ಒಳಗೊಂಡಂತೆ ಅಧ್ಯಕ್ಷರ ಸ್ಥಾನಕ್ಕೆ ವೀರೇಶ.ಎಂ ನಾಮಪತ್ರ ಸಲ್ಲಿಸಿರುತ್ತಾರೆ ಇವರಿಗೆ ಸುನಿಲ್ ಎಂ ಎಸ್ ಸೂಚಕರಾಗಿ ಮತ್ತು ಡಿ ಕೆಂಚನಗೌಡ ಅನುಮೋದಕರಾಗಿ ಸಹಿ ಹಾಕಿರುತ್ತಾರೆ. ಉಪಾಧ್ಯಕ್ಷರ ಸ್ಥಾನಕ್ಕೆ ಸುಂದ್ರಮ್ಮ ಟಿ ನಾಮಪತ್ರ ಸಲ್ಲಿಸಿರುತ್ತಾರೆ.

ಇವರಿಗೆ ಉಮೇಶ್ ಡಿ ಸೂಚಕರಾಗಿ ಮತ್ತು ಮರುಳಯ್ಯ ಎಂ ಅನುಮೋದಕರಾಗಿ ಸಹಿ ಮಾಡಿರುತ್ತಾರೆ. ಈ ಸಂಘದ ಚುನಾವಣೆಯ ಫಲಿತಾಂಶವಾಗಿ ಅಧ್ಯಕ್ಷರಾಗಿ ವೀರೇಶ.ಎಂ ಹಾಗೂ ಉಪಾಧ್ಯಕ್ಷರಾಗಿ ಸುಂದರಮ್ಮ ಟಿ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಎಸ್.ಪಿ ತಿಪ್ಪಾನಾಯ್ಕ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಎಲ್ಲಾ ಸದಸ್ಯರುಗಳಾದ ಉಮೇಶ್ ಡಿ.ಎಸ್, ನಾಗರಾಜ ಎಸ್, ಕೆಂಚನಗೌಡ ಡಿ, ಸುನಿಲ್ ಎಂ ಎಸ್, ಮುರುಳಯ್ಯ ಎಂ,ಪ್ರಮೀಳಮ್ಮ ಕೆ, ಪೂಜಾರ್ ಕೆಂಚಪ್ಪ, ಜಬಿವುಲ್ಲಾ ಪಿಎಸ್ಕೆ, ರುದ್ರಮ್ಮ ಎ ಮತ್ತು ಕಾರ್ಯದರ್ಶಿಗಳಾದ ಪ್ರದೀಪ್, ಸಿಬ್ಬಂದಿ ವರ್ಗದವರು ಊರಿನ ಮುಖಂಡರು ಇನ್ನು ಅನೇಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು