ಉಜ್ಜಿನಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ – ಬಂಗಾರಿ.ಮಂಜುಳಾ ಅವಿರೋಧವಾಗಿ ಆಯ್ಕೆ.
ಉಜ್ಜಿನಿ ಜ .08

ಕೊಟ್ಟೂರು ತಾಲೂಕಿನ ಉಜ್ಜನಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಂಗಾರಿ ಮಂಜುಳಾ ಉಪಾಧ್ಯಕ್ಷರಾಗಿ ಗುಡ್ಡದ ಅಂಜಿನಪ್ಪ ಅವಿರೋಧವಾಗಿ ಬುಧವಾರ ಆಯ್ಕೆ ಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಬಿ.ಮಾನಸ ಘೋಷಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಎಂ ಗುರುಸಿದ್ದನಗೌಡ್ರು. ರಿಜುವಾನ್ ಸಾಹೇಬು, ಕಾಳಾಪುರ ಸುರೇಶ, ಭೀಮಪ್ಪ, ವೆಂಕಟೇಶ್, ಹಾಲಮ್ಮ, ಉಜ್ಜಿನಪ್ಪ,ಅಡ್ಡೆ ವೀರಣ್ಣ,ಸಣ್ಣ ರಂಗಪ್ಪ,ತಿಮ್ಮಣ್ಣ, ಬೆನಕನಹಳ್ಳಿ ನಾಗಜ್ಜ, ಸಂಘದ ಮುಖ್ಯ ಕಾರ್ಯನಿರ್ವಹಕ ಜ್ಯೋತಿರ್ಲಿಂಗ. ಗ್ರಾಮ ಪಂಚಾಯತ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಉಜ್ಜನಿ, ಭೈರದೇವರಗುಡ್ಡ ಬೆನಕನಹಳ್ಳಿ ಕಾಳಾಪುರ ಊರಿನ ಮುಖಂಡರು ಇತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು