ತಹಸೀಲ್ದಾರ್ ಕಚೇರಿಯಲ್ಲಿ ಬ್ರಹ್ಮಾಂಡ – ಭ್ರಷ್ಟಾಚಾರ ಬಯಲು.
ಮಾನ್ವಿ ಜ.10

ಕಂದಾಯ ಕಚೇರಿಯ ದುರಾಡಳಿತ ಸಾರ್ವಜನಿಕರು ಕಿಡಿ ಕಾರಿರುವುದು ಒಂದಾದರೆ ಮಾನ್ವಿ ವಕೀಲರ ತಂಡವೇ ದುರಾಡಳಿತದ ಬಗ್ಗೆ ತಹಸೀಲ್ದಾರ್ ರಾಜು ಫಿರಂಗಿ ಮುಂದೆ ತಿಳಿಸಿದಾಗ ಒಂದು ರೀತಿಯಲ್ಲಿ ಕಕ್ಕಾ ಬಿಕ್ಕಿಯಾಗಿದ್ದಾರೆ.
ಮಾನ್ವಿ ಕಂದಾಯ ಕಚೇರಿಯಲ್ಲಿ ಅಧಿಕಾರಿಗಳು ಯವಾಗ ಬರುತ್ತಾರೆ ಎಂದು ತಿಳಿಯದಾಗಿದೆ, ಕಡತ ವಿಲೇವಾರಿಗಳನ್ನು ಯಾವಾಗ ಮಾಡುತ್ತಾರೆಂದು ತಿಳಿಯದಾಗಿದ್ದರಿಂದ ವಕೀಲರ ತಂಡವೇ ತಹಸೀಲ್ದಾರ್ ರಾಜು ಫಿರಂಗಿ ಅವರನ್ನು ಕೇಳಿದರೆ ಬೇಜವಾಬ್ದಾರಿಯಾಗಿ ಮಾತಾಡುತ್ತಾರೆಂದು ವಕೀಲರ ಸಂಘದ ಅಧ್ಯಕ್ಷ ರವಿಕುಮಾರ್ ಪಾಟೀಲ್ ತಿಳಿಸಿದರು.

ಮಾನ್ವಿ ಕಂದಾಯ ಕಚೇರಿ ಅನ್ನೋದು ದಿವಾಳಿ ಯಾಗಿದ್ದರದ ಸಾರ್ವಜನಿಕರ ಉಪಯೋಗಕ್ಕಾಗಿ ಶೌಚಾಲಯವೇ ಇಲ್ಲ.ಆದರೆ ಸಾರ್ವಜನಿಕರು ಹಾಗು ಮಹಿಳೆಯರಿಗೆ ತುಂಬ ತೊಂದರೆಯಾಗಿದೆ.
ಮಾನ್ವಿ ಕಂದಾಯ ಕಚೇರಿ ಅನ್ನೋದು ಬ್ರೋಕರ್ ಕಚೇರಿಯಾಗಿದೆ ಎಂದು ಹಿರಿಯ ವಕೀಲ ಶಾಮ ಸುಂದರ್ ನಾಯಕ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ. ನಕ್ಕುಂದಿ ಮಾನ್ವಿ