ಅದ್ಧೂರಿಯಿಂದ ಅಂಬೇಡ್ಕರ ಜಯಂತಿ ಆಚರಣೆಗೆ – ಪೂರ್ವಭಾವಿ ಸಭೆ.

ಸಿಂದಗಿ ಮಾ.22

ಪಟ್ಟಣದ ಗುರುವಾರ ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಾಲಯದಲ್ಲಿ ಡಾ, ಬಾಬಾ ಸಾಹೇಬ ಅಂಬೇಡ್ಕರ ಅವರ 134 ನೇ. ಜಯಂತಿಯ ಪೂರ್ವಬಾವಿ ಸಭೆ ನಡೆಯಿತು. ಮುಂದಿನ ತಿಂಗಳ ನಡೆಯುವ ಜಯಂತಿ, ಕಾರ್ಯಕ್ರಮದಲ್ಲಿ ಏ 10 ರಿಂದ 14 ರವರೆಗೆ ಐದು ದಿನ ಆರೋಗ್ಯ ಶಿಬಿರ ಕ್ರಾಂತಿ ಗೀತೆಯನ್ನು ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಏ 14 ರಂದು ಬೆಳ್ಳಗೆ 11 ಘಂಟೆಗೆ ಆನೆ ಅಂಬಾರಿ ಮೇಲೆ ಅಂಬೇಡ್ಕರ ಅವರ ಮೂರ್ತಿಯನ್ನು ಇಟ್ಟು ಸಾರೋಟದಲ್ಲಿ ಅಂಬೇಡ್ಕರ ಅವರ ಭಾವಚಿತ್ರ ಇಟ್ಟು ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯನ್ನು ಜರುಗಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ವ್ಯೆಸಿ ಮಯೂರ ಸುದ್ದಿಗಾರರಿಗೆ ತಿಳಿಸಿದರು. ಅದು ಸಂಜೆ 5 ಗಂಟೆಗೆ ನಡೆಯುವ ಬಹಿರಂಗ ವೇದಿಕೆಗೆ ನಾಡಿನ ಸಂಶೋಧಕರಾದ ಎಂ.ಎಂ ಕಲಬುರಗಿ ಮಹಾ ವೇದಿಕೆ ಎಂದು ಹೆಸರಿಡಲಾಗುವುದು ಈ ಜಯಂತಿ ಕಾರ್ಯಕ್ರಮವನ್ನು ಸಿಂದಗಿ ಶಾಸಕರಾದ ಅಶೋಕ ಮನಗೂಳಿ ಯವರು ಉದ್ಘಾಟಸಲಿದ್ದಾರೆ. ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಡಿ.ಜಿ ಸಾಗರ ಅವರು ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಟಿಪ್ಪು ಕ್ರಾಂತಿ ಸೇನೆ ರಾಜ್ಯ ಕಾರ್ಯದರ್ಶಿಗಳಾದ ಡಾ, ದಸ್ತಗಿರಿ ಮುಲ್ಲಾ ತಳವಾರ ಮಹಾಸಭೆಯ ಹೋರಾಟ ಸಮಿತಿ ರಾಜ್ಯಾಧ್ಯಕ್ಷರಾದ ಶಿವಾಜಿ ಮೇಟಗಾರ ಭೋವಿ ಸಮಾಜದ ಮುಖಂಡರಾದ ಸುನಂದಾ ಯಂಪೊರೆ ರಣದೀಪ ಪಡೆ ಉತ್ತರ ಕರ್ನಾಟಕ ಸಂಚಾಲಕರಾದ ಸಂತೋಷ ಮಣಗೀರಿ ಸತೀಶ ಮನಗೂಳಿ ಸಚಿನ್ ಚೌರ ಇವರು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಹಾಗೂ ಸೋಮನಾಥ ಮೇಲಿನಮನಿ ಸಂಜು ಮೇಲಿನಮನಿ ಜೈ ಭೀಮ ತಳಕೇರಿ ಶಿವಾನಂದ ಕಲಬುರಗಿ ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ,

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button