ತರೀಕೆರೆಯಲ್ಲಿ ಎಸ್ಎಂ ಕೃಷ್ಣರವರಿಗೆ – ಶ್ರದ್ಧಾಂಜಲಿ.

ತರೀಕೆರೆ ಡಿ. 11

ಎಸ್ ಎಮ್ ಕೃಷ್ಣರವರು ಎರಡು ಬಾರಿ ಸಚಿವರಾಗಿ ವಿದೇಶಾಂಗ ಸಚಿವರಾಗಿ ಮುಖ್ಯಮಂತ್ರಿಯಾಗಿ ಅನೇಕ ಜನಪರ ಕೆಲಸ ಮಾಡಿದ್ದಾರೆ ಎಂದು ಶಾಸಕ ಜಿ.ಎಚ್ ಶ್ರೀನಿವಾಸ್ ರವರು ಹೇಳಿದರು. ಅವರು ಇಂದು ಪಟ್ಟಣದ ತರೀಕೆರೆ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಎಸ್.ಎಂ ಕೃಷ್ಣ ರವರ ಶ್ರದ್ಧಾಂಜಲಿ ಸಭೆಯಲ್ಲಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಹೇಳಿದರು. ಎಸ್.ಎಮ್ ಕೃಷ್ಣ ರವರು ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ, ಇವರ ಅಗಲಿಕೆಯಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಉಮ್ಮರ್ ಫಾರೂಕ್ ಮಾತನಾಡಿ ದೂರದೃಷ್ಟಿ ಹೊಂದಿದ್ದ ಮುಖ್ಯಮಂತ್ರಿಗಳಾಗಿದ್ದರು ಕರ್ನಾಟಕದ ಅಭಿವೃದ್ಧಿಗೆ ಮುಖ್ಯ ಕಾರಣಕರ್ತರು, ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು, ಎಲ್ಲಾ ಅಧಿಕಾರಗಳನ್ನು ಅನುಭವಿಸಿ ದವರಾಗಿದ್ದರು ಎಂದು ಹೇಳಿದರು. ಮಾಜಿ ಪುರಸಭಾ ಅಧ್ಯಕ್ಷರಾದ ಪ್ರಕಾಶ್ ವರ್ಮಾ ಮಾತನಾಡಿ ಎಸ್.ಎಂ ಕೃಷ್ಣರವರು ಬೆಂಗಳೂರನ್ನು ಸಿಂಗಾಪುರದಂತೆ ಅಭಿವೃದ್ಧಿ ಪಡಿಸುತ್ತೇನೆ ಎಂದು ಹೇಳಿದ ಮಹಾನ್ ವ್ಯಕ್ತಿ, ಇವರು ಎಲ್ಲರೊಂದಿಗೂ ನೇರವಾಗಿ ಮಾತನಾಡುತ್ತಿದ್ದರು,

ಎಲ್ಲರಿಗೂ ಸಹ ಗೌರವದಿಂದ ಮಾತನಾಡಿಸುತ್ತಿದ್ದರು. ಸಿದ್ದರಾಮಯ್ಯನವರಂತೆ, ಬಂಗಾರಪ್ಪನವರಂತೆ, ಎಸ್.ಎಂ ಕೃಷ್ಣರವರು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದ್ದರು ಎಂದು ಹೇಳಿದರು. ತಾಲೂಕು ಗ್ಯಾರೆಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎನ್.ಜಿ ರಮೇಶ್ ಮಾತನಾಡಿ ಬಡವರ ಯುವಕರ ರೈತರ ಪರವಾದ ಮತ್ತು ಅಕ್ರಮ ಸಕ್ರಮ ಕಾರ್ಯಕ್ರಮಗಳನ್ನು ಅವರ ಅವಧಿಯಲ್ಲಿ ಜಾರಿಯಾದವು ಎಂದು ಹೇಳಿದರು. ಬಗರುಕುಂ ಸಮಿತಿ ಸದಸ್ಯರಾದ ಜಯ ಕರ್ನಾಟಕ ಜಗದೀಶ್, ಮಾಜಿ ಪುರಸಭಾ ಅಧ್ಯಕ್ಷರಾದ ಹೇಮಲತಾ ರೇವಣ್ಣ, ಟಿ.ಎಸ್ ರಮೇಶ್, ಆರ್ ಬಸವರಾಜ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಭಾಗ್ಯಲಕ್ಷ್ಮಿ, ಮಾಜಿ ತಾಲೂಕ ಪಂಚಾಯತಿ ಸದಸ್ಯರಾದ ಸೀತಾರಾಮ್, ಲಕ್ಕವಳ್ಳಿ ಹೋಬಳಿ ಅಧ್ಯಕ್ಷರಾದ ಎಚ್.ಎಂ ಮಂಜುನಾಥ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಸಮಿಉಲ್ಲಾ ಶರೀಫ್, ದಾದಾಪೀರ್, ಪುರಸಭಾ ನಾಮಿನಿ ಸದಸ್ಯರಾದ ಟಿ ಜಿ ಮಂಜುನಾಥ್, ಆದಿಲ್ ಪಾಷಾ, ಗೌರೀಶ, ಶ್ರೀಧರ್, ಮುಂತಾದವರು ಮಾತನಾಡಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೇರೆ.ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button