ನೂರಾರು ವಿದ್ಯಾರ್ಥಿಗಳ ಪ್ರಾಣ ಕಾಪಾಡಿದ – ಚಾಣಕ್ಯ ಚಾಲಕ.

ಹನುಮನಹಳ್ಳಿ ಜು.25

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ದಿ. 25 ಜುಲೈ 2024 ರಂದು ಹನುಮನಹಳ್ಳಿಯಿಂದ ಕೊಟ್ಟೂರಿಗೆ ಹೋಗುತ್ತಿರುವ ವಿದ್ಯಾರ್ಥಿಗಳ ಕೆಎಸ್ಆರ್ಟಿಸಿ ಬಸ್ ಕುರುಬನಳ್ಳಿ ಅವೈಜ್ಞಾನಿಕ ಸಿಸಿ ರಸ್ತೆಯಲ್ಲಿ ಚಕ್ರ ಜಾರಿ ರಸ್ತೆ ಪಕ್ಕ ಬಸ್ ಚೆಲ್ಲಿಸಿ ಅದರಲ್ಲೂ ಚಾಣಾಕ್ಷತನ ದಿಂದ ವಿದ್ಯಾರ್ಥಿಗಳ ಪ್ರಾಣ ಕಾಪಾಡಿದ ಚಾಣಾಕ್ಷ ಚಾಲಕ ಹೆಚ್‌ವಿ ಅವಿನಾಶ್.ಹನುಮನಹಳ್ಳಿಯಿಂದ ಕುರುಬನಳ್ಳಿಗೆ ಹೋಗುವ ರಸ್ತೆ ಸಿಸಿ ಮತ್ತು ಡಾಂಬರ್ ಕಾಮಗಾರಿಯು ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು ಮತ್ತು ಒಂದು ವರ್ಷ ನಂತರ ಡಾಂಬರ್ ಕಿತ್ತು ಹೋಗಿದೆ.

ಮತ್ತು ಪಕ್ಕದಲ್ಲಿ ಜಂಗಲ್ ನಿಂದ ಕೂಡಿರುವುದು ಸಿಸಿ ರಸ್ತೆಗೆ ಪಕ್ಕ ಗರಸ ಮಣ್ಣು ಹಾಕದೇ ಇರುವುದು ಇಂತಹ ಅವಘಡಕ್ಕೆ ಕಾರಣವಾಗಿದೆ. ತಿರುಗಳಲ್ಲಿ ಯಾವುದೇ ಮಾರ್ಗ ಸೂಚನೆಗಳು ಇಲ್ಲ ಇಂಥ ರಸ್ತೆ ಬಗ್ಗೆ ಇಂತಹ ರಸ್ತೆ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೂ ಹಾಗೂ ಪಿ ಡಬ್ಲ್ಯೂ ಡಿ ಅಧಿಕಾರಿಗಳಿಗೂ ಈ ಕಾಮಗಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಈ ಭಾಗದ ಶಾಸಕರಾದ ಎನ್‌ಟಿ ಶ್ರೀನಿವಾಸ್ ವಿಧಾನಸಭಾ ಕ್ಷೇತ್ರ ಕೂಡ್ಲಿಗಿ ಇವರಿಗೆ ನಮ್ಮ ಸುದ್ದಿ ವಾಹಿನಿ ಮೂಲಕ ಗಮನಕ್ಕೆ ತರಬೇಕು ಮತ್ತು ಇಲ್ಲಿ ಆಗುವ ಅಪಘಾತಗಳನ್ನು ತಪ್ಪಿಸುವ ಕೆಲಸ ವಾಗಬೇಕೆಂದು ಹನುಮನಹಳ್ಳಿ ಗ್ರಾಮಸ್ಥರಾದ ಹೆಚ್ ಎನ್ ರಾಮನಗೌಡ ,ಎನ್ ಭರಮಣ್ಣ ದುರ್ಗಪ್ಪ ರಮೇಶ ಮುಂತಾದವರು ತಿಳಿಸಿದರುತ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button