ಕ್ಷಯ ರೋಗದ ಬಗ್ಗೆ ಭಯ ಬೇಡ – ಜಾಗೃತಿ ಇರಲಿ.

ಮನ್ನಿಕಟ್ಟಿ ಜ.18

ಬಾಗಲಕೋಟೆ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಘಟಕ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ ಮನ್ನಿಕಟ್ಟಿ ಗ್ರಾಮದ ಶ್ರೀ ಆಂಜನೇಯ ಚಾವಡಿ ಕಟ್ಟೆಯಲ್ಲಿ ಕ್ಷಯರೋಗ ಗ್ರಾಮಕ್ಕಾಗಿ ಜನಜಾಗೃತಿ” ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ, ಶ್ರೀಎಸ್.ಎಸ್ ಅಂಗಡಿಯವರು “ನಿಮ್ಮ ಆರೋಗ್ಯ ನಮ್ಮ ಬದ್ಧತೆ” “ಹೌದು ನಾವು “ಕ್ಷಯರೋಗ ಕೊನೆ ಗಾಣಿಸಬಹುದು” ಎಂಬ ಘೋಷ ವಾಕ್ಯಯೊಂದಿಗೆ, ಯಾವುದೇ ಕೆಮ್ಮು ಕ್ಷಯರೋಗ ವಾಗಿರಬಹುದು. ಎರಡು ವಾರಕ್ಕಿಂತ ಹೆಚ್ಚಿನ ಕೆಮ್ಮು,ಸಂಜೆ ವೇಳೆ ಜ್ವರ ಮತ್ತು ರಾತ್ರಿ ಬೆವರುವುದು, ತೂಕ ಇಳಿಕೆ, ಹಸಿವಾಗದೆ ಇರುವುದು, ಎದೆ ನೋವು, ಲಕ್ಷಣ ಗಳಿದ್ದವರು‌ ಕಫ ಮಾದರಿ, ಪರೀಕ್ಷೆ ಮಾಡಿಸಿರಿ, ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಚಿಕಿತ್ಸೆ ಉಚಿತವಾಗಿರುತ್ತದೆ, ಹಾಗೂ ಕ್ಷಯರೋಗ ಪತ್ತೆಗೆ, ಅತ್ಯಾಧುನಿಕ ತಂತ್ರಜ್ಞಾನದಿಂದ ಕಫ ಮಾದರಿ “CBNAAT” ಪರೀಕ್ಷೆ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ವಾಗಿರುತ್ತದೆ.

ವಿಶೇಷವಾಗಿ ಕೊಳಚೆ ಪ್ರದೇಶ, ಬೀಡಿ ಕಾರ್ಮಿಕರು, ನೇಕಾರರ ಸಮುದಾಯ, ಎಚ್.ಐ.ವಿ. ಸೋಂಕಿತರು, ಮಧುಮೇಹ, ತಂಬಾಕು ಸೇವನೆ ಮಾಡುವವರಿಗೆ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು, ಎಲ್ಲರೂ ಒಗ್ಗೂಡಿ ಕ್ಷಯರೋಗದ ವಿರುದ್ಧ ಹೋರಾಟ ನಡೆಸಿ ಕ್ಷಯ ಮುಕ್ತ ಗ್ರಾಮ, ಕ್ಷಯ ಮುಕ್ತ ರಾಜ್ಯ ವನ್ನಾಗಿಸೋಣ ಎಂದರು. ಗ್ರಾಮದ ಮುಖಂಡರು ಯುವಕರು ಸಹಕಾರ ಕೋರಿದರು. ಕ್ಷಯರೋಗ ಮುಕ್ತ ಗ್ರಾಮಕ್ಕಾಗಿ ಜನಜಾಗೃತಿ ಕಾರ್ಯಕ್ರಮದಲ್ಲಿ, ಆರೋಗ್ಯ ಇಲಾಖೆಯ ವಿವಿಧ ಹಂತದ ಆರೋಗ್ಯ ಅಧಿಕಾರಿಗಳು,ಕ್ಷಯರೋಗ ಮುಕ್ತ ಗ್ರಾಮಕ್ಕಾಗಿ ಜನಜಾಗೃತಿ ಕಾರ್ಯಕ್ರಮದಲ್ಲಿ,ಆರೋಗ್ಯ ಇಲಾಖೆಯ ವಿವಿಧ ಹಂತದ ಆರೋಗ್ಯ ಅಧಿಕಾರಿಗಳು, ಗ್ರಾಮದ ಮುಖಂಡರಾದ, ಯಮನಪ್ಪ ಶಿವಲಿಂಗಪ್ಪ ಅಂಗಡಿ, ನಿಂಗಪ್ಪ ಢಪಳಿ, ರಂಗಪ್ಪ ಪಟಾತಾರ, ಶೇಖಪ್ಪ ಮೇಟಿ, ಶೇಖಪ್ಪ ಕಟಗೇರಿ, ಶೇಖಪ್ಪ ಕೋಟಿ, ಬಸಪ್ಪ ಹುಣಶೀಕಟ್ಟಿ ಗ್ರಾಮದ ಮುಖಂಡರು, ಯುವಕರು ಉತ್ಸಾಹದಿಂದ ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button