ವಿದ್ಯಾರ್ಥಿನಿಯರ ಸುರಕ್ಷತೆಗಾಗಿ ಕಾನೂನು – ಅರಿವು ನೆರವು ಕಾರ್ಯಕ್ರಮ.
ಗಜೇಂದ್ರಗಡ ಜ.18

ಗಜೇಂದ್ರಗಡ ತಾಲೂಕಿನ ಪ್ರತಿಷ್ಠಿತ ಮಹಾ ವಿದ್ಯಾಲಯವಾದ ಜಗದ್ಗುರು ತೋಂಟದಾರ್ಯ ಪಿ.ಯು ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ಶನಿವಾರ ನಡೆಯಿತು. ಈ ಕಾರ್ಯಕ್ರಮದಲ್ಲಿ ಎ.ಎಸ್.ಐ ಎಚ್.ವಿ ಜಗ್ಗಲ್ ಮಾತನಾಡಿ, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ಉಂಟಾದಲ್ಲಿ ಕೂಡಲೇ ಪೊಲೀಸ್ ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಿರಿ, ವಿದ್ಯಾರ್ಥಿಗಳಲ್ಲಿ ಕಾನೂನು ಬಗ್ಗೆ ಅರಿವು ಮೂಡಬೇಕಿದ್ದು ಕಾನೂನು ಮತ್ತು ಅಪರಾಧಗಳನ್ನು ಕುರಿತಂತೆ ತಿಳಿಸುವ ಪ್ರಯತ್ನ ಮಾಡಿದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಲಿವೆ ಎಂದು ಹೇಳಿದರು. ಅದೇ ರೀತಿಯಾಗಿ ಮಹಿಳಾ ಆರಕ್ಷಕಿ ಆರ್.ಎಸ್ ಬನ್ನಿಗೋಳ ಮಾತನಾಡಿ, ಇಂದಿನ ಯುವ ಪೀಳಿಗೆ ವಿದ್ಯಾರ್ಥಿಗಳಿಗೆ ಮೊಬೈಲ್ನಲ್ಲಿ ಬರುವ ಹೊಸ ಅಪ್ಲಿಕೇಶನ್ಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ ಆದರೆ ಅದರ ದುಷ್ಪರಿಣಾಮಗಳ ಬಗ್ಗೆ ಅವರಿಗೆ ತಿಳಿದಿರುವುದಿಲ್ಲ, ಒಮ್ಮೆ ಈ ಜಾಲತಾಣಗಳಿಗೆ ಸಿಲುಕಿದರೆ ಆಚೆ ಬರುವುದು ಕಷ್ಟ ಸಾಧ್ಯ ಇಂಥವುಗಳನ್ನು ಬಳಸುವ ಮುನ್ನ ಎಚ್ಚರಿಕೆ ವಹಿಸಬೇಕು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಾಲೇಜು ಪ್ರಾಚಾರ್ಯರಾದ ಸಂಗಮೇಶ ಬಾಗೂರ ಕಾರ್ಯಕ್ರಮ ಉದ್ದೇಶಿಸಿ, ಮೊಬೈಲ್ ಪ್ರಪಂಚ ನಿರ್ಮಾಣವಾಗಿದ್ದು ಇದರಿಂದ ಹೆಚ್ಚು ಸೈಬರ್ ಅಪರಾಧಗಳು ಹೆಚ್ಚುತ್ತಿವೆ, ಯಾವುದೇ ಅಪರಿಚಿತ ಕರೆಗಳು ಬಂದರೆ ನಿಮ್ಮ ಬ್ಯಾಂಕ್ ಖಾತೆ, ಮನೆ ವಿಳಾಸ ಸೇರಿದಂತೆ ಇನ್ನಿತರೆ ಯಾವುದೇ ವೈಯಕ್ತಿಕ ಮಾಹಿತಿಗಳನ್ನು ಕೇಳಿದಲ್ಲಿ ನೀಡಬಾರದು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಹೆಡ್ ಕಾನ್ಸ್ಟೇಬಲ್ ಎಸ್.ಡಿ. ಗೌಡರ, ಉಪನ್ಯಾಸಕರಾದ ಹುತ್ತಪ್ಪ ಮಾರನಬಸರಿ, ಆನಂದ ಜೂಚನಿ, ಅಶೋಕ, ಶರಣು ಅಂಗಡಿ, ಸಿದ್ರಾಮೇಶ ಕರಬಾಶೆಟ್ಟಿ, ಹನಮಂತ ನಡಕಟ್ಟಿನ, ಮಾಧುರಿ ನಾಡಗೇರಿ, ಕರುಣಾ ಜಕ್ಕಲಿ, ಪ್ರವೀಣ ಚಿತ್ರಗಾರ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್ ವಿ ಸಂಕನಗೌಡ್ರ ರೋಣ ಗದಗ