ಹುಚ್ಚಿರಪ್ಪಜ್ಜ ನವರ ಪುಣ್ಯಾರಾಧನೆ ಶತಮಾನೋತ್ಸವದ ನಿಮಿತ್ಯ ಭಿತ್ತಿ ಪತ್ರ ಮತ್ತು ಲೋಗೊವನ್ನು ಮಠದ ಕಮೀಟಿಯಿಂದ – ಬಿಡುಗಡೆ ಗೊಳಿಸಿದರು.

ನರೇಗಲ್ ಜ.18

ಮಜರೆ ಕೋಡಿಕೊಪ್ಪದ ಹುಚ್ಚರಪ್ಪಜ್ಜ ನವರ ಪುಣ್ಯಾರಾಧನೆಯ ಶತಮಾನೋತ್ಸವ ಫೆ.7 ರಂದು ಕಾರ್ಯಕ್ರಮ ಆರಂಭವಾಗಲಿದ್ದು, ಮಹಾ ರಥೋತ್ಸವ ನಡೆಯಲಿದೆ. ಇದರ ಅಂಗವಾಗಿ ಶ್ರೀಮಠದಲ್ಲಿ ಪುಣ್ಯಾರಾಧನೆ ಶತಮಾನೋತ್ಸವದ ಭಿತ್ತಿಪತ್ರ ಮತ್ತು ಲೋಗೊವನ್ನು ಮಠದ ಕಮಿಟಿಯಿಂದ ಶುಕ್ರವಾರ ಬಿಡುಗಡೆ ಮಾಡಲಾಯಿತು.ಭಿತ್ತಿಪತ್ರ ಮತ್ತು ಬಿಡುಗಡೆ ಮಾಡಿ ಬೂದೀಶ್ವರ ಮಾತನಾಡಿದ ಮಠದ ವಿಶ್ವನಾಥ ಸ್ವಾಮೀಜಿ, ಹುಚ್ಚರಪ್ಪಜ್ಜ ನವರು ಹಠ ಯೋಗಿಗಳಾಗಿದ್ದರು. ಅವರು ಲಿಂಗೈಕ್ಯರಾಗಿ 2025 ಕ್ಕೆ 100 ವರ್ಷಗಳಾಗುತ್ತಿದ್ದು, ಟ್ರಸ್ಟ್ ಕಮಿಟಿಯಿಂದ ಜಾತ್ರಾ ಮಹೋತ್ಸವವನ್ನು ಪುಣ್ಯಾರಾಧನೆಯ ಶತಮಾನೋತ್ಸವ ಎಂದು ಆಚರಿಸಲಾಗುತ್ತಿದೆ. ಎಲ್ಲರೂ ಶ್ರದ್ಧಾ-ಭಕ್ತಿಯಿಂದ ಪಾಲ್ಗೊಂಡು ಯಶಸ್ವಿ ಗೊಳಿಸಬೇಕುಎಂದರು.ಟ್ರಸ್ಟ್ ಕಮಿಟಿ ಸದಸ್ಯ ಎಲ್.ಎಸ್. ಗೌರಿ ಮಾತನಾಡಿ, ಜ.30 ರಿಂದ ಹುಚ್ಚರಪ್ಪಜ್ಜನರ ಜೀವನ ದರ್ಶನದ ಪ್ರವಚನ ಆರಂಭವಾಗಲಿದೆ. ಅಂದು ಮಧ್ಯಾಹ್ನ 12 ಕ್ಕೆ ಪಟ್ಟಣದ ಕೇಂದ್ರ ಭಾಗದಲ್ಲಿರುವ ಗಜಾನನ ದೇವಸ್ಥಾನ ದಿಂದ ಹುಚ್ಚಿರಪ್ಪಜ್ಜ ನವರ ಭಾವ ಚಿತ್ರದ ಮೆರವಣಿಗೆಯು ಪಟ್ಟಣದ ಪ್ರಮುಖ ಮಾರ್ಗಗದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್ಕಮಿಟಿ ಅಧ್ಯಕ್ಷ ಎಂ.ಸಿ.ಚಪ್ಪನ್ನಮಠ ವಹಿಸಿದ್ದರು. ಸಭೆಯಲ್ಲಿ ಅರುಣ ಕುಲಕರ್ಣಿ, ಮೈಲಾರಪ್ಪ ಚಳ್ಳಮರದ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ವಿಜಯಕುಮಾರ ಅಂಗಡಿ, ಶೇಕಪ್ಪ ಜುಟ್ಟ, ಮಲ್ಲಿಕಾರ್ಜುನಗೌಡ ಮಲ್ಲನಗೌಡ, ಕೃಷ್ಣಪ್ಪ ಜುಟ್ಟ, ಅಂದಪ್ಪ ಧರ್ಮಾಯತ, ಮಾಂತಯ್ಯ ಗುರುವಡೆಯರ, ಶಂಕ್ರಯ್ಯ ಮಠದ, ಅಂದಾನಗೌಡ ಬೂದಿಹಾಳ, ಶಿವಾನಂದ ಸಂಗನಾಳ, ಬಸವರಾಜ ಧರ್ಮಾಯತ, ಮಲ್ಲನಗೌಡ್ರ ಇದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್ ವಿ ಸಂಕನಗೌಡ್ರ ರೋಣ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button