ಶಾಲಾ ಮಕ್ಕಳಲ್ಲಿ ರಾಷ್ಟ್ರೀಯ ವಿವಿಧ ಆರೋಗ್ಯ – ಕಾರ್ಯಕ್ರಮಗಳ ಜಾಗೃತಿ.
ಗುಂಡನಪಲ್ಲೆ ಜ.20

ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ, ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ, ಗುಂಡನಪಲ್ಲೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹದಿ ಹರಯದವರ ಆರೋಗ್ಯ ಸಮಸ್ಯೆಗಳ ಸ್ನೇಹಾ ಕ್ಲಿನಿಕ್ ಶಾಲಾ ಮಕ್ಕಳಲ್ಲಿ ಆರೋಗ್ಯ ಜಾಗೃತಿ ಆಯೋಜಿಸಲಾಗಿತ್ತು. ಶಾಲಾ ಮುಖ್ಯ ಶಿಕ್ಷಕ ಸಂಗಪ್ಪ ಹುನಗುಂದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು ಭಾಗವಹಿಸಿ ಆರೋಗ್ಯ ಇಲಾಖೆ ರಾಷ್ಟ್ರೀಯ ವಿವಿಧ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು. ವೈಯಕ್ತಿಕ ಸ್ವಚ್ಛತೆ, ಸುತ್ತ ಮುತ್ತ ಪರಿಸರ ಸ್ವಚ್ಛತೆ ಕೀಟ ಜನ್ಯ ರೋಗಳಾದ ಮಲೇರಿಯಾ ಡೆಂಗ್ಯೂ ಚಿಕೂನ್ ಗುನ್ಯಾ, ಮೇದಳು ಜ್ವರ ಆನೇಕಾಲು ರೋಗಗಳ ನಿಯಂತ್ರಣ ಮುಂಜಾಗ್ರತೆಯಾಗಿ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಸೊಳ್ಳೆ ನಿರೋಧಕ ಬಳಸ ಬೇಕು ಸೊಳ್ಳೆ ಪರದೆ ಉಪಯೋಗ ಸೊಳ್ಳೆಗಳ ಕಡಿತ ತಪ್ಪಿಸಿ ಕೊಳ್ಳಬೇಕು ಯಾವುದೇ ತರಹದ ಜ್ವರ ಕಾಣಿಸಿದರೆ ತಕ್ಷಣ ಸರಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಬೇಕು ಪರೀಕ್ಷೆ ಚಿಕಿತ್ಸೆ ಉಚಿತವಾಗಿರುತ್ತದೆ. ಆರೋಗ್ಯ ಇಲಾಖೆ ಆರೋಗ್ಯ ನಿರೀಕ್ಷಣಾಧಿಕಾರಿಗಳು, ತಮ್ಮ ಮನೆಗೆ ಬಂದಾಗ ಯಾವುದೇ ಆರೋಗ್ಯ ಸಮಸ್ಯೆಗಳಿಗೆ ಸರಿಯಾಗಿ ಮಾಹಿತಿ ನೀಡಿ ಸಲಹೆ ಪಡೆಯಬೇಕು ಹದಿ ಹರಯದವರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಇರುತ್ತವೆ ತಲೆನೋವು, ಬೆಳವಣಿಗೆ ಕುಂಠಿತ, ರಕ್ತ ಹೀನತೆ, ಮಾನಸಿಕ ವ್ಯಥೆ, ಭಯ ಯಾವುದೇ ತರಹ ಆರೋಗ್ಯ ಸಮಸ್ಯೆಗಳಿದ್ದವರು ಪ್ರತಿ ಶುಕ್ರವಾರ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಜರಗುವ ಸ್ನೇಹ ಕ್ಲಿನಿಕ್ ಭೇಟಿ ನೀಡಿ ತಜ್ಞ ವೈದ್ಯರ ಸಲಹೆ ಚಿಕಿತ್ಸೆ ಸೌಲಭ್ಯ ಹದಿ ಹರಯದ ವಿದ್ಯಾರ್ಥಿಗಳು ಸದುಪಯೋಗ ಪಡೆದು ಕೊಳ್ಳಬೇಕು ಹಾಗೂ ಉಚಿತ ಆರೋಗ್ಯ ಸಲಹೆಗಳಿಗಾಗಿ 104 ಕರೆ ಮಾಡಿ ಆರೋಗ್ಯ ಸಲಹೆ ಪಡೆಯಿರಿ ಎಂದು ಶಾಲಾ ಮಕ್ಕಳಲ್ಲಿ ಆರೋಗ್ಯ ಜಾಗೃತಿ ಮೂಡಿಸಿದರು. ಶಾಲಾ ಮುಖ್ಯ ಶಿಕ್ಷಕ ಸಂಗಪ್ಪ ಅವರು ಮಾತನಾಡಿ ನಿಮ್ಮ ಮನೆಯ ಬಾಗಿಲಿಗೆ ಬರುವ ಆರೋಗ್ಯ ಅಧಿಕಾರಿಗಳ ಆರೋಗ್ಯ ಸಲಹೆ ಚಿಕಿತ್ಸೆ ಸದುಪಯೋಗ ಪಡಿಸಿಕೊಂಡು ಸಮಾಜ ಕುಟುಂಬದ ಸದಸ್ಯರು ಆರೋಗ್ಯ ಇಲಾಖೆಯ ಪ್ರತಿಯೊಂದು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಮಾಹಿತಿ ಪಡೆದು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ನಾವೆಲ್ಲರೂ ಕೈಜೋಡಿಸೋಣ ಎಂದರು. ರಾಷ್ಟ್ರೀಯ ವಿವಿಧ ಆರೋಗ್ಯ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಆರ್.ಬಿ ಅಂಟರತಾನಿ, ಪರಶುರಾಮ ಎಮ್ ಗುರು ಮಾತೆಯರಾದ ಭಾರತಿ ಗಣಿಯಾರ, ಅನಿತಾ ಪಾಟೀಲ್ ಸುನಿತಾ ಮಾಸ್ತಿ ಬಿಸಿ ಊಟದ ಕಾರ್ಯಕ್ರಮದ ಸಿಬ್ಬಂದಿಗಳು ಶಾಲಾ ಮುದ್ದು ಮಕ್ಕಳು ಭಾಗವಹಿಸಿದ್ದರು.