ತಾಯಿಯಿಂದ ಬೇರ್ಪಟ್ಟ ಮೂರು ಕಾಡು – ಬೆಕ್ಕಿನ ಮರಿಗಳು ಪ್ರತ್ಯಕ್ಷ.

ರೋಣ ಜ.20

ತಾಲೂಕಿನ ಹೊಳೆ ಹಡಗಲಿ ಗ್ರಾಮದ ಗದ್ದೆಯಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ತಾಯಿಯಿಂದ ಬೇರ್ಪಟ್ಟ ಮೂರು ಕಾಡು ಬೆಕ್ಕಿನ ಮರಿಗಳು ನಡಗುತ್ತಾ ನಿಂತಿದ್ದನ್ನು ರೈತರಾದ ಭೀಮಪ್ಪ ಹೂಗಾರ ಹಾಗೂ ನಿಂಗನಗೌಡ ಕೆಂಚನಗೌಡ್ರ ನೋಡಿ ತಕ್ಷಣ ಜೀವ ವೈವಿಧ್ಯ ಸಂಶೋಧಕರಾದ ಮಂಜುನಾಥ ನಾಯಕ ಅವರಿಗೆ ತಿಳಿಸಿದ್ದಾರೆ. ಮಂಜುನಾಥ ನಾಯಕ ಅವರು ಅರಣ್ಯ ಇಲಾಖೆ ಸಹಾಯಕ ಅರಣ್ಯಾಧಿಕಾರಿ ಅನ್ವರ ಕೋಲ್ದಾರ್ ಜೊತೆ ಗೂಡಿ ಘಟನಾ ಸ್ಥಳಕ್ಕೆ ಆಗಮಿಸಿ ಕಬ್ಬು ಕಟಾವು ಮಾಡುವ ಮಷಿನ್ ಬಂದ್ ಮಾಡಿಸಿದ್ದಾರೆ. ಕಬ್ಬು ಕಟಾವು ಮಾಡುವ ಮಷಿನ್ ಶಬ್ದಕ್ಕೆ ಹೆದರಿ ತಾಯಿ ಬೆಕ್ಕು ಮರಿಗಳಿಂದ ದೂರು ಉಳಿದಿತ್ತು. ಯಾವಾಗ ಕಬ್ಬು ಕಟಾವು ಮಷಿನ್ ಬಂದ್‌ ಆದ ತಕ್ಷಣ ತಾಯಿ ಬೆಕ್ಕು ಬಂದು ತನ್ನ ಮರಿಗಳನ್ನು ಒಂದೊಂದಾಗಿ ತೆಗೆದು ಕೊಂಡು ಹೋದ ಘಟನೆ ನಡೆದಿದೆ.ಕಾಡು ಬೆಕ್ಕು ಮರಗಳ ಪೊಟರೆಯಲ್ಲಿ ಬದುಕುತ್ತವೆ. ಇವು ಮೊಲ, ಹಕ್ಕಿ, ಹಾವು, ಮೀನುಗಳನ್ನು ತಿನ್ನುತ್ತವೆ. ಇವು ಜನವರಿ ಯಿಂದ ಏಪ್ರಿಲ್ ತಿಂಗಳಲ್ಲಿ ಮೂರರಿಂದ ಐದು ಮರಿಗಳಿಗೆ ಜನ್ಮ ನೀಡುತ್ತವೆ ಎಂದು ವರದಿಯಾಗಿದೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button