ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕು ಘಟಕದ – ಕ್ಯಾಲೆಂಡರ್ ಬಿಡುಗಡೆ ಗೊಳಿಸಿದರು.

ಕೂಡ್ಲಿಗಿ ಜ.21

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ಕಾರ್ಯ ನಿರತರ ಪತ್ರಕರ್ತರ ಧ್ವನಿ ಸಂಘ ದಿಂದ 2025 ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಡಾ, ಎನ್.ಟಿ ಶ್ರೀನಿವಾಸ್ ರಿಂದ ಬಿಡುಗಡೆ ಕಾರ್ಯಕ್ರಮ ಜರಗಿತು.ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘ ದಿಂದ ಮಾನ್ಯಶಾಸಕರು ಎನ್‌.ಟಿ ಶ್ರೀನಿವಾಸ್ ಕೂಡ್ಲಿಗಿ ಇವರಿಂದ ಶಾಸಕರ ಅಮೃತ ಹಸ್ತದಿಂದ ಕರ್ನಾಟಕ ಕಾರ್ಯ ನಿರತರ ಪತ್ರಕರ್ತರ ಧ್ವನಿ ಸಂಘದ ಹಾಗೂ ಕೂಡ್ಲಿಗಿ ತಾಲೂಕಿನ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿ ಮಾನ್ಯ ಶಾಸಕರಿಂದ 2025 ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುಖಂಡರಾದ ನಾಗರಕಟ್ಟೆ ರಾಜಣ್ಣ ಹಾಗೂ ಶಶಿಧರ್ ಕಾಂಗ್ರೆಸ್ಸಿನ ಹಲವಾರು ಮುಖಂಡರುಗಳು ಭಾಗವಹಿಸಿ ಇನ್ನೂ ಹಲವಾರು ಮುಖಂಡರುಗಳು ಭಾಗಿಯಾಗಿದ್ದರು ಮತ್ತು ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷರಾದ ಬಾಣದ ಶಿವಮೂರ್ತಿ. ಅಧ್ಯಕ್ಷತೆ ಯಲ್ಲಿ ಹಾಗೂ ಅನಿಲ್ ಕುಮಾರ್. ಮಂಜುನಾಥ್. ಕಕ್ಕುಪ್ಪಿ ಬಸವರಾಜ್. ಬಿ ರಾಘವೇಂದ್ರ. ಜಿ ನಾರಾಯಣ. ಏ ಎಮ್ ವಾಗೀಶ್. ಕೆ.ತಿಪ್ಪೇಸ್ವಾಮಿ. ಬಿ.ಮೂಗಣ್ಣ. ಕಾನಹೊಸಹಳ್ಳಿ ವೀರೇಶ್. ಹಾಗೂ ಎಲ್ಲಾ ಸದಸ್ಯರು ಭಾಗಿಯಾಗಿ ಹರಕನಾಳು ಗ್ರಾಮದಲ್ಲಿ ಕ್ಯಾಲೆಂಡರ್ ಬಿಡುಗಡೆ ಯಶಸ್ವಿಯಾಗಿ ನಡೆಯಿತು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button