ಬೆಳವಣಿಕಿ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿಶ್ವ ವಿಕಲ ಚೇತನರ – ದಿನಾಚರಣೆಯ ಆಚರಣೆ.
ಬೆಳವಣಿಕೆ ಜ.29

ರೋಣ ತಾಲೂಕಿನ ಬೆಳವಣಕಿ ಗ್ರಾಮ ಪಂಚಾಯಿತಿ ನೂತನ ಪಿಡಿಓ ಶಿಲ್ಪ ಕವಲೂರ ವಿಶ್ವ ವಿಕಲ ಚೇತನ ದಿನಾಚರಣೆ ಅಂಗವಾಗಿ ವಿಕಲ ಚೇತನರ ಕ್ಷೇಮಾಭಿವೃದ್ಧಿ ಟ್ರಸ್ಟ್ ಕಮಿಟಿ ಬೆಳವಣಿಕಿ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿಶ್ವ ವಿಕಲ ಚೇತನರ ದಿನಾಚರಣೆ ಆಚರಿಸುವ ಮೂಲಕ ಅಂಗವಿಕಲರಿಗೆ ಯು.ಡಿ.ಐಡಿ ಕಾರ್ಡ್ ವಿತರಿಸಿ ಪಿಡಿಓ ಶಿಲ್ಪ ಕವಲೂರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉದ್ದೇಶಿಸಿ ಮಾತನಾಡಿದರು. ಕೈ ಕಾಲು ಶುದ್ಧ ಇರುವ ನಾವುಗಳು ಅಂಗವಿಕಲರಷ್ಟು ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡಿಲ್ಲ ಅಂಗವಿಕಲರು ಮನಸು ಮಾಡಿದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಅವರು ಕಾರ್ಯ ಸಾಧನೆ ಮೆಚ್ಚುವಂಥದ್ದು ಅಂಗವಿಕಲತೆ ದೇಹಕ್ಕೆಯಿದೆ ಮನಸಿಗೆ ಇಲ್ಲ ಹಾಗೂ ಅಂಗವಿಕಲರ ಸಾಧನೆ ಮತ್ತು ಸಾಮಾಜಿಕ ಸೇವೆ ಬಹಳ ಮಹತ್ವವಾಗಿದೆ ಅವರು ದೈಹಿಕವಾಗಿ ಅಂಗವಿಕಲತೆ ಯಿದ್ದರು ಮಾನಸಿಕವಾಗಿ ಪ್ರಬುದ್ಧವಾಗಿ ಇರುತ್ತಾರೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀನ ಮಾಡೂಳ್ಳಿ. ಕಾರ್ಯದರ್ಶಿ ಮಹೇಶ ಸುರಕೋಡ. ರಾಜಶೇಖರ ಪಾಟೀಲ. ಮಹಾಂತೇಶ ಶಿರೋಳ. ಸುವರ್ಣ ಶಗಣಿ.ರೇಣುಕಾ ಕರ್ಕಿಕಟ್ಟಿ. ಶಿವಕುಮಾರ ಸೂಲಾರ್ ಸಂಸ್ಥೆ ಧಾರವಾಡ. ತಾಲೂಕ ಅಂಗವಿಕಲ ಕಲ್ಯಾಣ ಅಧಿಕಾರಿ ಬಸವರಾಜ ಓಲಿ, ಗ್ರಾಮ ಪಂಚಾಯಿತಿ ಅಂಗವಿಕಲ ಅಧಿಕಾರಿಗಳು ಮಹಾಂತೇಶ ಪೂಜಾರ. ಶರಣಯ್ಯ ಸಾಲಿಮಠ. ಮಾಗುಂಡಪ್ಪ ಕಳ್ಳಿಮನಿ. ಮಂಜುಳಾ ಕುಂಬಾರ. ಕಮಲಾಕ್ಷಿ ದಳವಾಯಿ. ಮನಮಂತ.ಎಂ ಬಿಂಗಿ. ಯಲ್ಲಪ್ಪ ಮಜ್ಜಿಗಿ. ನಿಂಗಪ್ಪ ಸೋಂಪುರ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ ಗದಗ