ಹುಚ್ಚಿರಪ್ಪಜ್ಜನ ಪುಣ್ಯಾರಾಧನೆ ಶತಮಾನೋತ್ಸವ – ಇಂದಿನಿಂದ ಪ್ರಾರಂಭ.

ನರೇಗಲ್ಲ ಜ.29

ನರೇಗಲ್ಲಿನ ಯಾವುದು ಹೌದು ಅದು ಅಲ್ಲ, ಯಾವುದು ಅಲ್ಲ ಅದು ಹೌದು ಎಂಬ ಸಾರ್ವಕಾಲಿಕ ಸತ್ಯ ಸಂದೇಶ ನೀಡಿದ ಕೋಡಿಕೊಪ್ಪದ ಹಠಯೋಗಿ ವೀರಪ್ಪಜ್ಜನ ಪವಾಡ, ಲೀಲೆಗಳಿಗೆ ಲೆಕ್ಕವಿಲ್ಲ. ಹುಚ್ಚನಾಗಿದ್ದು ಕೊಂಡು ಜಗದ ಹುಚ್ಚು ಬಿಡಿಸಿದ ಮಹಾನ್ ಸಂತ ಹುಚ್ಚಿ ರಪ್ಪಜ್ಜನವರು ಇಂತಹ ಮಹಾನ್ ಕೋಡಿಕೊಪ್ಪದ ಹಠಯೋಗಿ ಹುಚ್ಚಿರಪ್ಪಜ್ಜನ ಪುಣ್ಯಾರಾಧನೆ ಶತಮಾನೋತ್ಸವ ಹಾಗೂ ಮಹಾ ರಥೋತ್ಸವದ ಕಾರ್ಯಕ್ರಮಗಳು ಜನೆವರಿ 30 ರಿಂದ ಪ್ರಾರಂಭವಾಗಲಿದ್ದು, ಫೆಬ್ರವರಿ 5, 6 ಮತ್ತು 7 ರವರೆಗೆ ನಡೆಯಲಿವೆ.ಜನೆವರಿ 30 ರಿಂದ ಫೆಬ್ರವರಿ 5 ರವರೆಗೆ ಲೋಕ ಕಲ್ಯಾಣಾರ್ಥ ರುದ್ರಹೋಮ ಜರುಗುತ್ತದೆ. ಸಂಜೆ 7 ಕ್ಕೆ ಶ್ರೀವೀರಪ್ಪಜ್ಜನವರ ಜೀವನ ದರ್ಶನ ಪುರಾಣ ಪ್ರಾರಂಭವಾಗಲಿದ್ದು, ರೋಣ ಬೂದೀಶ್ವರ ಮಠದ ಡಾ, ವಿಶ್ವನಾಥ ಸ್ವಾಮಿಗಳಿಂದ ಪ್ರವಚನ, ಚಿಕ್ಕಮನ್ನಾಪುರದ ಹನುಮಂತಕುಮಾರ ಮೇಟಿ ಮತ್ತು ಸಂಗಡಿಗರಿಂದ ಸಂಗೀತ ಸೇವೆ. ಫೆ. 5 ರಂದು ಮಧ್ಯಾನ 3 ಕ್ಕೆ ವೀರಪ್ಪಜ್ಜನವರ ಪುಣ್ಯಾರಾಧನೆ ಶತಮಾನೋತ್ಸವ ಉದ್ಘಾಟನೆ ನಡೆಯಲಿದೆ. ಫೆ. 6 ರಂದು ಮಹಾಗಣಾರಾಧನೆ. ಅಂದೇ ಬೆಳಿಗ್ಗೆ 10 ಕ್ಕೆ 5 ಜೊತೆ ಉಚಿತ ಸಾಮೂಹಿಕ ವಿವಾಹ. ಫೆ. 7 ರಂದು ಬೆಳಿಗ್ಗೆ 11 ಕ್ಕೆ ಪುಣ್ಯಾರಾಧನೆ ಶತಮಾನೋತ್ಸವದ ಮಹಾಮಂಗಲ ಮತ್ತು ಪುರಾಣ ಮಂಗಲೋತ್ಸವ ಜರುಗಲಿದೆ. ಸಂಜೆ 5 ಕ್ಕೆ ವೀರಪ್ಪಜ್ಜನವರ ಮಹಾರಥೋತ್ಸವ ಜರುಗಲಿದೆ. ಫೆ. 8 ರಂದು ಸಂಜೆ 6 ಕ್ಕೆ ಲಘು ರಥೋತ್ಸವ ನೆರವೇರಲಿದೆ. ಮುಂಡರಗಿಯ ನಾಡೋಜ ಶ್ರೀ ಅನ್ನದಾನ ಮಹಾ ಸ್ವಾಮಿಗಳು ಪುರಾಣದ ಉದ್ಘಾಟನೆ ನೆರವೇರಿಸಲಿದ್ದು, ಪುಣ್ಯಾರಾಧನೆಯ ಶತಮಾನೋತ್ಸವ ಸಮಾರಂಭದ ಸಾನ್ನಿಧ್ಯವನ್ನು ಹಾಲಕೆರೆ ಮುಪ್ಪಿನ ಬಸವಲಿಂಗ ಶ್ರೀಗಳ ವಹಿಸಲಿದ್ದಾರೆ. ಕಾನೂನು ಸಚಿವ ಡಾ, ಎಚ್.ಕೆ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಜಿ.ಎಸ್‌ ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸುವರು.

ಈ ಸಂಚಿಕೆ ಮಂಗಲೋತ್ಸವ ಸಾನ್ನಿಧ್ಯವನ್ನು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಜಾತ್ರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ನಿಡಗುಂದಿ ಕೊಪ್ಪ ಶ್ರೀಗಳು, ನಂದಿವೇರಿ ಮಠ ಶ್ರೀಗಳು, ಗುಲಗಂಜಿ ಮಠದ ಶ್ರೀಗಳು, ನರೇಗಲ್ಲ ಹಿರೇಮಠದ ಶ್ರೀಗಳು, ಹಂಪಸಾಗರದ ಶ್ರೀಗಳು, ಹೆಬ್ಬಳ್ಳಿಯ ದತ್ತಾವಧೂತರ ಮಹಾರಾಜರು, ಮಣಕವಾಡದ ಶ್ರೀಗಳು, ದರಗಾದ ಶರಣರು, ಅಬ್ಬಿಗೇರಿ ಹಿರೇಮಠದ ಶ್ರೀಗಳು, ಭೈರನಹಟ್ಟಿ ದೊರೆಸ್ವಾಮಿ ಮಠದ ಶ್ರೀಗಳು ನಾಡಿನ ಪ್ರಮುಖ ಮಠಗಳ 25 ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಕೆ.ಜಿ ಬಂಡಿ, ಹಾಲಪ್ಪ ಆಚಾ‌ರ್, ವಿ.ಪ ಸದಸ್ಯ ಎಸ್.ವಿ ಸಂಕನೂರ, ಧುರೀಣ ರವಿ ದಂಡಿನ, ಪ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಅನೇಕ ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ. ವೀರಪ್ಪಜ್ಜನವರ ಭಕ್ತರು ಈ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು ಎಂದು ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ, ಚಪ್ಪನ್ನಮಠ ತಿಳಿಸಿದ್ದಾರೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button