ಡಂಬಳ ಗ್ರಾಮದ ಸಿ.ಸಿ ರಸ್ತೆ ನಿರ್ಮಾಣ ಪೂಜೆ ನೆರವೇರಿಸಿದ – ಶಾಸಕ ಅಶೋಕ ಮನಗೂಳಿ.
ಡಂಬಳ ಫೆ.17

ವಿಜಯಪುರ ಜಿಲ್ಲೆಯ ಸಿಂದಗಿ ಮತ ಕ್ಷೇತ್ರದ ಸಿಂದಗಿ ತಾಲೂಕಿನ ಡಂಬಳ ಗ್ರಾಮದಲ್ಲಿ 40 ಲಕ್ಷ ರೂಪಾಯಿ ವೆಚ್ಚದ ಸಿ.ಸಿ ರಸ್ತೆ ನಿರ್ಮಾಣ ಭೂಮಿ ಪೂಜ ಕಾರ್ಯಕ್ರಮ ಸಿಂದಗಿ ಶಾಸಕರಾದ ಅಶೋಕ್.ಮ ಮನಗೂಳಿ ಯವರು ನೆರವೇರಿಸಿದರು. ಹಾಗೂ 5 ಲಕ್ಷ ವೆಚ್ಚದ ಗ್ರಾಮದ ಮರಗಮ್ಮ ದೇವಸ್ಥಾನ ಹತ್ತಿರ ಸಮುದಾಯ ಭವನ ಡವಳಾರ್ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ನಿರ್ಮಿಸಲಾದ ದ್ವಾರ ಬಾಗಿಲು ನವೀಕರಣ ಪೂಜೆ ಕೂಡ ಶಾಸಕರು ನೆರವೇರಿಸಿದರು. ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಗೊಲಗೇರಿ ಭಾಗದ ಜನರು ನಮ್ಮ ಮನೆತನದ ಮೇಲೆ ಇಟ್ಟರುವ ಪ್ರೀತಿ ನಂಬಿಕೆ ಭರವಸೆ ಗೆ ನಾನು ಸದಾ ಚಿರಋಣಿ ಇರುತ್ತೇನೆ ಈ ಭಾಗದ ಜನ ಚುನಾವಣೆಯಲ್ಲಿ ಹೆಚ್ಚಿನ ಮತ ನೀಡುವ ಮೂಲಕ ನನ್ನ ಗೆಲುವಿಗೆ ಹಗಲಿರಲು ಶ್ರಮಿಸಿದ್ದಾರೆ. ಇನ್ನು ಹೆಚ್ಚು ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಹುಬ್ಬಳ್ಳಿ ಸರಬರಾಜು ಕಂಪನಿಯ ನಿಯಮಿತ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಪ್ರಕಾಶ್ ಗೌಡ ಬಿರಾದಾರ್, ರಮೇಶ್ ತಳವಾರ್, ಬಸನಗೌಡ ಖಾನಾಪುರ್, ರಾಮಚಂದ್ರ ರಾಥೋಡ್ ರವರನ್ನು ಶಾಸಕರು ಸನ್ಮಾನಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಮಡಿವಾಳ ನಾಯ್ಕೋಡಿ ವಹಿಸಿದರು. ರಾಜಕೀಯ ಮುಖಂಡರುಗಳಾದ: ರವಿರಾಜ್ ದೇವರಮನಿ, ಮಲ್ಲಣ್ಣ ಸಾಲಿ, ಮುರಿಗೆಪ್ಪ ಗೌಡ ರದ್ದೇವಾಡಗಿ, ಬಸನಗೌಡ ಪಾಟೀಲ್, ಬಸವರಾಜ್ ಮಾರಲಬಾವಿ, ಬಾಬುಗೌಡ ಬಿರಾದಾರ್, ಶರಣಗೌಡ ಪಾಟೀಲ್ ,ಮುದಿಗೌಡ ಬಿರಾದಾರ್, ಶಿವಯೋಗಿಪ್ಪ ಹತ್ತರಕಿ, ಹನುಮಂತ್ ರಾಯ ಗೌಡ ಬಿರಾದರ್ ಶಿವು ಕುದುರಿ , ಮೈಬುಬ ಹಳಿಮಾನಿ ಸಿಂದಗಿಯ ಪಿ.ಡಬ್ಲ್ಯೂ.ಡಿ ಅಧಿಕಾರಿಗಳು, ಕಲಕೇರಿ ಪೊಲೀಸ್ ಠಾಣೆಯ ಪಿಎಸ್ಐ ಸುರೇಶ್ ಮಂಟೂರು, ಗ್ರಾಮಸ್ಥರಾದ: ಬಸವರಾಜ್ ಹದಗಲ್ಲ, ಶರಣಗೌಡ ಪಾಟೀಲ, ಸುರೇಶ್ ನಾಯ್ಕೋಡಿ. ಯಮನು ಗುಡಿಮನಿ, ಮರಗು ನಾಯ್ಕೋಡಿ, ಅಶೋಕ ಹೊಸಮನಿ ಹಲವಾರು ಜನ ಭಾಗಿಯಾಗಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ